ಬೆಳಗಾವಿ ಗಡಿವಿವಾದ ಅಮೀತ್ ಶಾ ಹೇಳಿದ್ದೇನು ಗೊತ್ತಾ..??

ಗಡಿವಿವಾದ ಕುರಿತು ದಿಲ್ಲಿಯಲ್ಲಿ
ಗೃಹಸಚಿವ ಆಮಿತ ಶಹಾ ಸಮ್ಮುಖದಲ್ಲಿ
ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ
ಮುಖ್ಯಮಂತ್ರಿಗಳಾದ ಬಸವರಾಜ
ಬೊಮ್ಮಾಯಿ ಮತ್ತು ಏಕನಾಥ ಶಿಂಧೆ
ಅವರ ಮಧ್ಯೆ ನಡೆದ ಮಾತುಕತೆಯು
ಇಂದು ಸಂಜೆ 7 ರಿಂದ 8 ಗಂಟೆಯವರೆಗೆ
ನಡೆಯಿತು.
ಸಭೆಯ ನಿರ್ಣಯಗಳನ್ನು
ಶಹಾ ಅವರೇ ನಂತರ ಮಾಧ್ಯಮಗಳಿಗೆ
ತಿಳಿಸಿದರು.ಮಹತ್ವದ ಅಂಶಗಳು:
1) ಸರ್ವೋನ್ನತ ನ್ಯಾಯಾಲಯದ
ಮುಂದಿರುವ ಗಡಿವಿವಾದ ಪ್ರಕರಣದ
ತೀರ್ಪು ಬರುವವರೆಗೂ ಉಭಯ
ರಾಜ್ಯಗಳು ಪರಸ್ಪರರ ಪ್ರದೇಶಗಳನ್ನು
ಕೇಳುವಂತಿಲ್ಲ.
2)ಉಭಯ ರಾಜ್ಯಗಳ ತಲಾ ಮೂವರು
ಮಂತ್ರಿಗಳನ್ನೊಳಗೊಂಡ ಒಟ್ಟು ಆರು
ಸಚಿವರ ಸಮಿತಿ ರಚಿಸಿ ಸಮನ್ವಯ
ಸಾಧಿಸುವದು.
3)ಉಭಯ ರಾಜ್ಯಗಳ ಗಡಿಗಳಲ್ಲಿ
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು
ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ
ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು
ರಚಿಸುವದು.
4)ಗಡಿವಿವಾದವನ್ನು ಸಂವಿಧಾನದ
ಪ್ರಕಾರವೇ ಪರಿಹರಿಸಬೇಕೇ ಹೊರತು
ಬೀದಿಗಳಲ್ಲಿ ಅಲ್ಲ ಎಂಬುದನ್ನು ಸಭೆಯಲ್ಲಿ
ಒಪ್ಪಿಕೊಳ್ಳಲಾಯಿತು.
ಸೌಹಾರ್ದಯುತ ವಾತಾವರಣದಲ್ಲಿ ನಡೆದ ಇಂದಿನ ಮಾತುಕತೆಯಲ್ಲಿ
ಉಭಯ ರಾಜ್ಯಗಳ ಮುಖ್ಯಮಂತ್ರಿಗಳು
ಸಕಾರಾತ್ಮಕವಾಗಿ ಸ್ಪಂದಿಸಿದರೆಂದು
ಆಮಿತ್ ಶಹಾ ಅವರು ಮಾಧ್ಯಮಗಳಿಗೆ
ಸಭೆಯ ನಂತರ ವಿವರಿಸಿದರು.

 

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *