Breaking News
Home / Breaking News / ಬೆಳಗಾವಿಯ ಸವದತ್ತಿ ಕ್ಷೇತ್ರದಿಂದಲೂ ಸಿದ್ಧರಾಮಯ್ಯ…??

ಬೆಳಗಾವಿಯ ಸವದತ್ತಿ ಕ್ಷೇತ್ರದಿಂದಲೂ ಸಿದ್ಧರಾಮಯ್ಯ…??

ಬೆಳಗಾವಿ-ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ,ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕೋಲಾರ್ ಕ್ಷೇತ್ರದಿಂದ ಸ್ಪರ್ದೆ ಮಾಡುವದಾಗಿ,ಸೋಮವಾರ ಘೋಷಣೆ ಮಾಡಿದ್ದು,ಬೆಳಗಾವಿಯ ಸವದತ್ತಿ ಕ್ಷೇತ್ರದಿಂದಲೂ ಸ್ಪರ್ದೆ ಮಾಡುವ ವಿಚಾರವನ್ನು ಗೌಪ್ಯವಾಗಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ಧರಾಮಯ್ಯನವರು ಕೋಲಾರ್ ಮತ್ತು ಬೆಳಗಾವಿಯ ಸವದತ್ತಿ,ಈ ಎರಡೂ ಕ್ಷೇತ್ರಗಳಿಂದ ಸ್ಪರ್ದೆ ಮಾಡುವುದು ಖಚಿತ ಎನ್ನುವ ಸುದ್ದಿ ಇದೆ.ಈ ವಿಚಾರ ಬೆಳಗಾವಿಯ ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ,ಎಂದು ಹೇಳಲಾಗುತ್ತಿದ್ದು,ಸಿದ್ಧರಾಮಯ್ಯನವರು ಕೇವಲ ಕೋಲಾರ್ ದಿಂದ ಸ್ಪರ್ದೆ ಮಾಡುವ ವಿಚಾರವನ್ನು ಮಾತ್ರ ಬಹಿರಂಗ ಪಡಿಸಿದ್ದು ಸವದತ್ತಿಯಿಂದ ಸ್ಪರ್ದೆ ಮಾಡುವ ವಿಚಾರವನ್ನು ಬಹಿರಂಗ ಪಡಿಸಿಲ್ಲ.

ಸಿದ್ಧರಾಮಯ್ಯನವರ ಪರಮಾಪ್ತ ಹೆಚ್ ಎಂ ರೇವಣ್ಣ ಅವರು ಬೆಳಗಾವಿಯ ಸವದತ್ತಿ ಕ್ಷೇತ್ರದಿಂದ ಕಾಂಗ್ರೆಸ್ ಟುಕೆಟ್ ಗೆ ಅರ್ಜಿ ಹಾಕಿದ್ದಾಗಲೇ,ಸಿದ್ಧರಾಮಯ್ಯನವರು ಸವದತ್ತಿ ಕ್ಷೇತ್ರದಿಂದ ಸ್ಪರ್ದೆ ಮಾಡುವ ಮುನ್ಸೂಚನೆ ಸಿಕ್ಕಿತ್ತು, ಸವದತ್ತಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್ ಟಿಕೆಟ್ ಗಾಗಿಯೇ ಭರ್ಜರಿ ತಯಾರಿ ಮಾಡಿಕೊಂಡಿರುವ ಮೂರು ಜನ ನಾಯಕರು ಇರುವದರಿಂದ,ಇವರ ಭಂಡಾಯದ ಭೀತಿಯಿಂದಾಗಿ,ಸವದತ್ತಿಯಿಂದ ಸಿದ್ಧರಾಮಯ್ಯನವರು ಸ್ಪರ್ದೆ ಮಾಡುವ ವಿಚಾರವನ್ನು ಗೌಪ್ಯವಾಗಿಟ್ಟಿದ್ದಾರೆ,ಎಂದು ಹೇಳಲಾಗುತ್ತಿದೆ.

ಸವದತ್ತಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ,ವಿಶ್ವಾಸ ವೈದ್ಯ,ಪಂಚನಗೌಡ್ರು,ಜೊತೆಗೆ ಚೋಪ್ರಾ ಈ ಮೂವರು ಜನ ಕಾಂಗ್ರೆಸ್ಸಿನ ಪ್ರಬಲ ಆಕಾಂಕ್ಷಿಗಳಾಗಿದ್ದು,ಈ ಮೂವರೂ ಜನ ಆಕಾಂಕ್ಷಿಗಳು ಸವದತ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವದಕ್ಕಾಗಿಯೇ ಹಲವಾರು ವರ್ಷಗಳಿಂದ ಕ್ಷೇತ್ರದಲ್ಲಿ ತಯಾರಿ ಮಾಡಿಕೊಂಡಿದ್ದಾರೆ.ಕ್ಷೇತ್ರದಲ್ಲಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿ ಕೋಟ್ಯಾಂತರ ರೂ ಖರ್ಚು ಮಾಡಿದ್ದು,ಈ ಮೂವರು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಸಿದ್ಧರಾಮಯ್ಯನವರು ಸವದತ್ರಿ ಕ್ಷೇತ್ರದಿಂದ ಸ್ಪರ್ದೆ ಮಾಡುವ ವಿಚಾರವನ್ನು ಬಹಿರಂಗ ಪಡಿಸುವ ಸಾಧ್ಯತೆ ಇದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಿದ್ಧರಾಮಯ್ಯನವರಿಗಾಗಿಯೇ ಸವದತ್ತಿ ಕ್ಷೇತ್ರದಲ್ಲಿ ಆಖಾಡಾ ರೆಡಿ ಮಾಡಲು ಈ ಕ್ಷೇತ್ರದಲ್ಲಿ ಸುತ್ತಾಡಿದಾಗ,ಸತೀಶ್ ಜಾರಕಿಹೊಳಿ ಅವರು ಸವದತ್ತಿ ಕ್ಷೇತ್ರದಿಂದ ಸ್ಪರ್ದೆ ಮಾಡ್ತಾರೆ,ಎನ್ನುವ ಸುದ್ದಿ,ರಾಜ್ಯಾದ್ಯಂತ ಸಾಕಷ್ಟು ಪ್ರಚಾರ ಪಡೆದಿತ್ತು,ಆದ್ರೆ ಸತೀಶ್ ಜಾರಕಿಹೊಳಿ ಅವರು ಈ ಹಿಂದೆ ಸವದತ್ತಿ ಕ್ಷೇತ್ರದಲ್ಲಿ ಸುತ್ತಾಡಿದ್ದು ಸಿದ್ಧರಾಮಯ್ಯನವರಿಗಾಗಿ ಎನ್ನುವ ವಿಚಾರಕ್ಕೆ ಈಗ ಮನ್ನಣೆ ದೊರೆತಂತೆ ಕಾಣುತ್ತಿದೆ.

ಒಟ್ಟಾರೆ ಕೋಲಾರ್ ದಿಂದ ಸ್ಪರ್ದೆ ಮಾಡುವ ಇಂಗಿತ ವ್ಯಕ್ತಪಡಿಸಿರುವ ಸಿದ್ಧರಾಮಯ್ಯನವರು ಚುನಾವಣೆ ಸಮೀಪಿಸಿದಾಗ ಸವದತ್ತಿ ಕ್ಷೇತ್ರದಿಂದ ಸ್ಪರ್ದೆ ಮಾಡುವ ವಿಚಾರವನ್ನು ಬಹಿರಂಗ ಪಡಿಸುವ ಎಲ್ಲಾ ಲಕ್ಷಣಗಳಿವೆ.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *