Breaking News
Home / Breaking News / ಅಪ್ಪಾಜೀ, ಫೀಲ್ಡೀಂಗ್….ರಾಹುಲ್ ಬ್ಯಾಟೀಂಗ್…!!

ಅಪ್ಪಾಜೀ, ಫೀಲ್ಡೀಂಗ್….ರಾಹುಲ್ ಬ್ಯಾಟೀಂಗ್…!!

ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಕ್ರೀಯಾಶೀಲರಾಗಿದ್ದಾರೆ.ಇಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಕ್ರೀಯವಾಗಿರುವ ರಾಹುಲ್ ಈ ಕ್ಷೇತ್ರದಲ್ಲಿ ತಂದೆಯ ಪರವಾಗಿ ಬ್ಯಾಟೀಂಗ್ ನಡೆಸಿದ್ದಾರೆ….

ಬೆಳಗಾವಿ : ‘ಕ್ರೀಡೆಯಲ್ಲಿ ನಿರಂತರ ಪ್ರಯತ್ನದಿಂದ ಹಂತ ಹಂತವಾಗಿ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ. ಯಾವುದೇ ಕ್ರೀಡೆಯಲ್ಲಿ ಯಶಸ್ವಿಯಾಗಬೇಕಾದ್ರೆ, ಕಠಿಣ ಪರಿಶ್ರಮ ಮುಖ್ಯ. ಕ್ರೀಡಾಪಟುಗಳು ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು’ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಕಡೋಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗೌಂಡವಾಡ ಗ್ರಾಮದಲ್ಲಿ ನಡೆದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಭಾನುವಾರ ಚಾಲನೆ ನೀಡಿ, ಮಾತನಾಡಿದರು.

‘ಕ್ರಿಕೆಟ್ ಕೇವಲ ನಗರ ಪ್ರದೇಶಗಳಿಗೆ ಸಿಮಿತವಾಗದೇ, ಗ್ರಾಮೀಣ ಭಾಗದಲ್ಲಿಯೂ ಹೆಚ್ಚು ಜನಪ್ರಿಯತೆಗೊಳಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳು ಇದ್ದಾರೆ. ಅವರಿಗೆ ಸರಿಯಾಗಿ ವೇದಿಕೆ ಸಿಗುತ್ತಿಲ್ಲ. ಇಂತಹ ಪಂದ್ಯಾವಳಿಗಳನ್ನು ನಡೆಸುವ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕಿದೆ’ ಎಂದರು.

‘ಯಾವುದೇ ಕ್ರೀಡೆ ಇರಲಿ, ಗ್ರಾಮಾಂತರ ಪ್ರದೇಶದಲ್ಲಿನ ಯುವಕರಿಗೆ ಹಿರಿಯರು ಪ್ರೋತ್ಸಾಹ ನೀಡಿ, ಬೆಂಬಲಿಸಿ. ಇದರಿಂದ ಮುಂದೆ ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತರಲಿದ್ದಾರೆ. ಯುವಕರು ಸಹ ಹೆಚ್ಚು ಹೆಚ್ಚು ಪಂದ್ಯಾವಳಿಯಲ್ಲಿ ಭಾಗವಹಿಸಿ, ಯಶಸ್ಸಿಗೆ ಸತತ ಪ್ರಯತ್ನ ಮುಂದುವರೆಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಶಾಸಕರ ಆಪ್ತ ಸಹಾಯಕ ಮಲ್ಲಗೌಡ ಪಾಟೀಲ, ಸತೀಶ್ ಪಾಟೀಲ, ಮೋಹನ್ ನಾಥಬಾ, ಸುಜಾತಾ ಜಟಾರ್, ಹಾಲಪ್ಪ ನಾಯಕ , ಕಮೀಟಿ ಅಧ್ಯಕ್ಷರು, ಗ್ರಾಪಂ ನೂತನ ಸದಸ್ಯರು ಸೇರಿದಂತೆ ಇತರರು ಇದ್ದರು.

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *