Breaking News

ಬೆಳಗಾವಿಗೆ ಹುಲಿ ಬಂತು ಹುಲಿ….!!!

ಬೆಳಗಾವಿ- ಸಮೀಪದ ಭೂತರಾಮನಹಟ್ಟಿ ರಾಣಿ ಚೆನ್ನಮ್ಮ ನಿಸರ್ಗದಾಮದಲ್ಲಿ ಸಿಂಹ ಘರ್ಜನೆ ಕೇಳಿಸಿದ ಬೆನ್ನಲ್ಲಿಯೇ ಇಂದಿನಿಂದ ಇದೇ ನಿಸರ್ಗದಾಮದಲ್ಲಿ ಹುಲಿ ಘರ್ಜನೆ ಶುರುವಾಗಿದೆ.

ಇವತ್ತು ಮೈಸೂರು ಝೂ ನಿಂದ ಎರಡು ಹುಲಿಗಳು ಬೆಳಗಾವಿಗೆ ಬಂದಿವೆ,ಈ ಎರಡೂ ಹುಲಿಗಳು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೆ,ಈ ಎರಡು ಹುಲಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಕನಿಷ್ಕ ಮತ್ತು ಶೌರ್ಯ ಹೆಸರಿನ ಎರಡು ಹುಲಿಗಳು ಇಂದಿನಿಂದ ರಾಣಿ ಚೆನ್ನಮ್ಮ ನಿಸರ್ಗದಾಮದ ಸದಸ್ಯರಾಗಿದ್ದಾರೆ.ಇವತ್ತು ಸಿಡಿ ಲೇಡಿ ಬೆಳಗಾವಿಗೆ ಬರ್ತಾಳೆ,ಎಪಿಎಂಸಿ ಠಾಣೆಗೆ ಬಂದು ಹಾಜರಾಗ್ತಾಳೆ ಅಂತಾ ಕೆಲವರು ಕಾಯ್ತಾ ಇದ್ರು ಆದ್ರೆ ಸಿಡಿ ಲೇಡಿ ಬರಲಿಲ್ಲ, ಬೆಳಗಾವಿಗೆ ಬಂದಿದ್ದು ಎರಡು ಹುಲಿಗಳು,ಹುಡಗಿ ಬರ್ತಾಳೆ ಎನ್ನುವ ನಿರೀಕ್ಷೆ ಹುಸಿಯಾಯಿತು.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *