Breaking News
Home / LOCAL NEWS (page 116)

LOCAL NEWS

ಬೆಳಗಾವಿ ಜಿಲ್ಲೆಯ, RTO ಚೆಕ್ ಪೋಸ್ಟ್ ಮೇಲೆ‌ ಲೋಕಾಯುಕ್ತ ದಾಳಿ…!!

ಬೆಳಗಾವಿ-ಎಸಿಬಿ ರದ್ದಾಗಿ ಮತ್ತೆ ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂದ ಮೇಲೆ,ಬೆಳಗಾವಿ ಜಿಲ್ಲೆಯಲ್ಲೂ ಆರ್‌ಟಿಒ ಚೆಕ್ ಪೋಸ್ಟ್ ಮೇಲೆ‌ ಲೋಕಾಯುಕ್ತ ದಾಳಿ ನಡೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಹಾಗು RTO ಚೆಕ್ ಪೋಸ್ಟ್ ಮೇಲೆ ದಾಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು-ಮುಂಬೈ ರಸ್ತೆ ಮೇಲಿರುವ ಚೆಕ್ ಪೋಸ್ಟ್ ದಾಳಿ ನಡೆದಿದ್ದು,ವಾಹನ ಸವಾರರಿಂದ ಹಣ ವಸೂಲಿ ಆರೋಪ‌ ಹಿನ್ನೆಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.ದಾಳಿ …

Read More »

ಚೇಂಜ್ ಮಾಡುವದಿಲ್ಲ ಚೇಂಜ್ ಯ್ಯಾಕ್ ಮಾಡ್ತೀರ್ರೀ…..!!

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಈಗಿನಿಂದಲೇ ಚುನಾವಣೆ ಶುರುವಾಗಿದೆ ಎನ್ನುವ ವಾತಾವರಣ ಬಿಜೆಪಿ,ಮತ್ತು ಕಾಂಗ್ರೆಸ್ ಎರಡರಲ್ಲೂ ಇತ್ತು, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಅವರು ನಿನ್ನೆ ಬೆಳಗಾವಿ ಉತ್ತರದ ಬಿಜೆಪಿ ಆಕಾಂಕ್ಷಿಗಳಿಗೆ ಸ್ಪಷ್ಟವಾದ ನಿಖರವಾದ ಉತ್ತರ ಕೊಡುವ ಮೂಲಕ ಶಾಸಕ ಅನೀಲ ಬೆನಕೆ ಅವರ ಹಾದಿ ಸುಗಮಗೊಳಿಸಿದ್ದಾರೆ. ಬೆಳಗಾವಿ ಉತ್ತರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ ಅಲ್ಲ ಎಂದು ಮಾದ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಳೀನ ಕುಮಾರ್ , ಆಕಾಂಕ್ಷಿಗಳು …

Read More »

ರೈತರಿಗೆ ಸಿಹಿ ಸುದ್ದಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ..!!

ಬೆಳಗಾವಿ:ಜಿಲ್ಲೆಯಲ್ಲಿ ದನ ಕರುಗಳಿಗೆ ಚರ್ಮ ಗಂಟು ರೋಗ ಉಲ್ಬಣವಾಗಿ ಪ್ರಾಣಿಗಳು ಪ್ರಾಣವನ್ನು ಕಳೆದುಕೊಂಡ ರೈತರಿಗೆ ಉಂಟಾಗುತ್ತಿದ್ದ ನಷ್ಟ ತಪ್ಪಿಸಲು ರಾಜ್ಯ ಸರ್ಕಾರ 20ಸಾವಿರ ರೂಪಾಯಿ ಘೋಷಿಸಿರುವದು ರೈತರಿಗೆ ಅತ್ಮಸ್ಥೈರ್ಯ ತುಂಬಿದಂತಾಗಿದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲೆ ಬಿಜೆಪಿ ಅಧಕ್ಷ ಸಂಜಯ ಪಾಟೀಲ ಹೇಳಿದ್ದಾರೆ. ಗುರುವಾರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ಮುಖ್ಯ ಮಂತ್ರಿಗಳು ಹಾವೇರಿಯಲ್ಲಿ ಮಾತನಾಡಿ ಉತ್ತರ ಕರ್ನಾಟಕದಲ್ಲಿ ಅದರಲ್ಲಿಯು ಬೆಳಗಾವಿ ಜಿಲ್ಲೆಯಲ್ಲಿಯ ರೈತರು ಸಾಕುವ ಆಕಳು, ಎತ್ತು …

Read More »

ವಿದ್ಯಾಶಂಕರ ಬೆಳಗಾವಿ ವಿಟಿಯು ನೂತನ ಕುಲಪತಿ…!!

ಬೆಳಗಾವಿ: ಬೆಳಗಾವಿ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯದ ನೂತನ ಕುಲಪತಿಯನ್ನಾಗಿ ಡಾ. ವಿದ್ಯಾಶಂರ ಅವರನ್ನು ನೇಮಕ ಮಾಡಿ ವಿವಿ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಆದೇಶ ಹೊರಡಿಸಿದ್ದಾರೆ. ಹಿಂದಿನ ಕುಲಪತಿಯಾಗಿದ್ದ ಪ್ರೊ.ಕರಿಸಿದ್ದಪ್ಪ ಅವರ ಅಧಿಕಾರವಧಿ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಿಟಿಯು ಕುಲಪತಿ ಹುದ್ದೆ ತೆರವುಗೊಂಡಿತ್ತು. ಹಾಗಾಗಿ, ನೂತನ ಕುಲಪತಿಯನ್ನು ನೇಮಕ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಶಿವಕುಮಾರ ಅವರು ರಾಜ್ಯಪಾಲರ ಹೆಸರಿನಲ್ಲಿ ಆದೇಶ ಹೊರಡಿಸಿದ್ದಾರೆ. ವಿದ್ಯಾಶಂಕರಅವರು ಮೈಸೂರಿನ ಕರ್ನಾಟಕ …

Read More »

ಸಿನಿಮಾ ನೋಡಿ ಅದೇ ಮಾದರಿಯಲ್ಲಿ, ಮರ್ಡರ್ ಮಾಡಿದ ತ್ರೀ..ಇಡಿಯಟ್ಸ್…!!

ಬೆಳಗಾವಿ: ದೃಶ್ಯ ಸಿನೇಮಾ ನೋಡಿ ಅದೇ ಮಾದರಿಯಲ್ಲೇ ಹತ್ಯೆ ಮಾಡಿದರು, ಆ ಚಿತ್ರದಲ್ಲಿ ಹತ್ಯೆ ಮಾಡಿದವರು ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ಆದರೆ, ಇಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಿಯಲ್ ಎಸ್ಟೇಟ್ ಏಜೆಂಟ್ ಸುಧೀರ ಕಾಂಬಳೆ ಹತ್ಯೆ ಪ್ರಕರಣವನ್ನು ಬೇಧಿಸಿದ್ದಾರೆ. ಸುಧೀರನ ಪಾಲಿಗೆ ಹೆಂಡತಿ, ಮಗಳು, ಮಗಳ ಪ್ರಿಯಕರನೇ ವಿಲನ್ ಆಗಿದ್ದರು ಎನ್ನುವ ವಿಚಾರ ತಿಳಿಯಲು ಬಹಳ ದಿನವೇನೂ ಹಿಡಯಲಿಲ್ಲ. ಸಿನಿಮಿಯ ರೀತಿಯಲ್ಲಿ ತನ್ನ ಗಂಡನನ್ನೇ ಮಗಳ ಪ್ರಿಯಕರನಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ …

Read More »

ಮೊದಲು ಕಬ್ಬಿನ ರೇಟ್ ಫಿಕ್ಸ್ ಮಾಡಿ ಆಮೇಲೆ, ಫ್ಯಾಕ್ಟರಿ ಚಾಲೂ ಮಾಡಿ…!!

ಬೆಳಗಾವಿ:ಪ್ರತಿ ಟನ್ ಕಬ್ಬಿಗೆ ರೂ. ೫೫೫೦ ಬೆಲೆ ನಿಗದಿಗೊಳಿಸಿದ ಬಳಿಕವೇ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿರೈತರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತ , ಸಕ್ಕರೆ ಸಂಸ್ಥೆಯ ಆಯುಕ್ತರ ನೇತೃತ್ವದಲ್ಲಿಎಲ್ಲ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ರೈತ ಮುಖಂಡರ ಜೊತೆಗೆ ಸಭೆ ನಡೆಸಿ, ಕಬ್ಬಿನ ಬೆಲೆಯನ್ನು ನಿಗದಿಗೊಳಿಸಬೇಕು.ಬಳಿಕವಷ್ಟೇ ಕಾರ್ಖಾನೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದ …

Read More »

ಗೋವಾ ಸರ್ಕಾರದಿಂದ ಪರಿಷ್ಕೃತ ಆದೇಶ,ರಾತ್ರಿ ಹೊತ್ತು ಭಾರಿ ವಾಹನಗಳ ಪ್ರವೇಶಕ್ಕೆ ಅನುಮತಿ…!!

ಬೆಳಗಾವಿ- ಕಮರ್ಷಿಯಲ್ ವಾಹನಗಳಿಗೆ ಪ್ರವೇಶ ನಿರ್ಭಂಧಿಸಿ,ಟೀಕೆಗೆ ಗುರಿಯಾಗಿದ್ದ ಗೋವಾ ಸರ್ಕಾರ ಕೊನೆಗೂ ಬೆಳಗಾವಿ ಲಾರಿ ಮಾಲೀಕರ ಸಂಘದ ಮನವಿಗೆ ಸ್ಪಂದಿಸಿ ವಾಹನಗಳ ಪ್ರವೇಶ ನಿರ್ಭಂಧದ ಕುರಿತು ಪರಿಷ್ಕೃತ ಆದೇಶ ಹೊರಡಿಸಿದೆ. ಬೆಳಗಾವಿಯಿಂದ ಚೋರ್ಲಾ ಮಾರ್ಗವಾಗಿ ದಿನನಿತ್ಯ ನೂರಾರು ವಾಹನಗಳು ಗೋವಾ ಪ್ರವೇಶ ಮಾಡುತ್ತಿದ್ದವು ಆದ್ರೆ ಗೋವಾ ಉತ್ತರ ವಿಭಾಗದ ಜಿಲ್ಲಾಧಿಕಾರಿಗಳು ಭಾರಿ ವಾಹನಗಳ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದರು.ಹೀಗಾಗಿ ದಿನನಿತ್ಯ ನೂರಾರು ಲಾರಿಗಳನ್ನು ಗೋವಾದ ಕೇರಿ ಚೆಕ್ ಫೋಸ್ಟ್ ಬಳಿಯೇ …

Read More »

ಬೆಳಗಾವಿಯಲ್ಲಿ, ಬಾಲಕನ ರುಂಡ ಕತ್ತರಿಸಿದ ಕಿರಾತಕ ಸಿಕ್ಕಿಬಿದ್ದ….!

ಹನ್ನೊಂದು ವರ್ಷದ ಬಾಲಕನ ರುಂಡವಿಲ್ಲದ ಮೃತದೇಹ ಪತ್ತೆಯಾಗಿತ್ತು ಇದು ಯಾರ ಮೃತದೇಹ,ಈ ನೀಚ ಕೃತ್ಯವನ್ನು ಮಾಡಿದವರು ಯಾರು ಎಂದು ಪತ್ತೆ ಮಾಡುವುದು ಪೋಲೀಸರಗೆ ಸವಾಲಿನ ಕೆಲಸವಾಗಿತ್ತು, ಬಾಲಕನ ಕೈಗೆ ಸುತ್ತಿಕೊಂಡಿದ್ದ ಶಾಲೆಯ ಟೈ ಸುಳಿವು ಕೊಟ್ಟಿತ್ತು ಇದನ್ನು ಆಧರಿಸಿ ಪ್ರಕರಣದ ಬೆನ್ನಟ್ಟಿದ ಬೆಳಗಾವಿ ಜಿಲ್ಲೆಯ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹನ್ನೊಂದು ವರ್ಷದ ಬಾಲಕನನ್ನು ಹತ್ಯೆ ಮಾಡಿ,ರುಂಡವನ್ನು ಬೇರ್ಪಡಿಸಿ ಮೃತದೇಹವನ್ನು ಗೋಣಿ ಚೀಲದಲ್ಲಿ ಹಾಕಿ,ರುಂಡ,ಮತ್ತು ದೇಹವನ್ನು ಬೇರೆ,ಬೇರೆ ಸ್ಥಳಗಳಲ್ಲಿ ಸಾಗಿಸಿದ್ದ ಇಬ್ಬರು …

Read More »

ಅಪಘಾತ..ಅಪಘಾತ..ಅಪಘಾತ…ಆಘಾತ..ಆಘಾತ…!!

ಹುಕ್ಕೇರಿ: ಸಮೀಪದ ಹೊಳೆಮ್ಮನ ಗುಡಿ ಹಳ್ಳದ ಹತ್ತಿರ ಸೋಮವಾರ ಸಂಜೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಬೈಕ್‌ ಮೇಲೆ ಹೊರಟಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ಮಲ್ಲನಗೌಡ ಯಲ್ಲನಗೌಡ ಪಾಟೀಲ (22) ಹಾಗೂ ಸಿದ್ಧಾರೂಢ ವೀರಭದ್ರ ಕರೋಶಿ (24) ಮೃತಪಟ್ಟವರು. ಭಾರಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವ ಆಗಿದ್ದರಿಂದ ಅವರು ಬದುಕುಳಿಯಲಿಲ್ಲ. …

Read More »

ಹಿಂಡಲಗಾ ಜೈಲು ಸೇರಿದ,ಬೆಳಗಾವಿಯ PFI ಮುಖಂಡರು ಯಾರು ಗೊತ್ತಾ..??

ಬೆಳಗಾವಿ-ರಾಷ್ಟ್ರಾದ್ಯಂತ್ಯ ಪಿಎಫ್ಐ ಸಂಟನೆಯ ನಾಯಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮುಂದುವರೆದಿದ್ದು,ಬೆಳಗಾವಿಯಲ್ಲೂ ಪಿಎಫ್ಐ ಸಂಘಟನೆಗೆ ಲಗಾಮು ಹಾಕುವ ಕಾರ್ಯಾಚರಣೆ ನಡೆದಿದೆ‌. ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಬೆಳಗಾವಿಯ ಪಿಎಫ್ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ದಾಳಿ ಮಾಡಿರುವ ಪೋಲೀಸರು ಬೆಳಗಾವಿಯ ಒಟ್ಟು ಏಳು ಜನ ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು,ವಿಚಾರಣೆ ಮಾಡಿ ನಂತರ ಬಂಧಿಸಿ ಏಳು ಜನ ಪಿಎಫ್ಐ ಮುಖಂಡರನ್ನು ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ. ಬೆಳಗಾವಿಯ ಕಾಕತಿ …

Read More »