Home / LOCAL NEWS (page 192)

LOCAL NEWS

ಬೆಳಗಾವಿಯೆಂದರೆ ಬಂಗಾರೆಪ್ಪ ಬಂಗಾರೆಪ್ಪ ಎಂದರೆ ಬೆಳಗಾವಿ

ಬೆಳಗಾವಿಯೆಂದರೆ ಬಂಗಾರೆಪ್ಪ ಬಂಗಾರೆಪ್ಪ ಎಂದರೆ ಬೆಳಗಾವಿ ಎನ್ನುವ ಕಾಲವೊಂದಿತ್ತು……. ಇಂದು ಅಕ್ಟೋಬರ್ 26.ದಿವಂಗತ ಮುಖ್ಯಮಂತ್ರಿ ಬಂಗಾರೆಪ್ಪ ಅವರ ಜನ್ಮದಿನ.ಬಂಗಾರೆಪ್ಪ ಅವರು ಬೆಳಗಾವಿಯಿಂದ ದೂರದ ಶಿವಮೊಗ್ಗ ಜಿಲ್ಲೆಯ ಸೊರಬದವರಾಗಿದ್ದರೂ ಬೆಳಗಾವಿಗೂ ಅವರಿಗೂ ಬಿಡಿಸಲಾಗದ ನಂಟಿತ್ತು.ಗಡಿ, ನಾಡು,ನುಡಿಯ , ಜಲದ ಸಂಬಂಧಿತ ವಿಷಯಗಳ ಬಗ್ಗೆ ತಮ್ಮದೇ ಆದ ಗಟ್ಟಿಯಾದ ನಿಲುವು ಹಾಗೂ ಬದ್ಧತೆ ಹೊಂದಿದ್ದ ಬಂಗಾರೆಪ್ಪ ಅವರು 1993 ರಲ್ಕ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದಾಗ ನನ್ನಂಥ ಸಾವಿರಾರು ಯುವಕರು ಅವರ ಬೆನ್ನಿಗೆ …

Read More »

ಸೈಬರ್ ನೋವಿಗೆ ಬೆಳಗಾವಿ ಪೋಲೀಸರಿಂದ ಫಾಸ್ಟ್ ರಿಲೀಫ್…!!!

*ಸೈಬರ್ ನೋವಿಗೆ ಪೋಲೀಸರಿಂದ ಮುಲಾಮು…!!!* *ವರ್ಷದಲ್ಲೇ ಸಾವಿರ, 309 ದೂರುಗಳಿಗೆ ಸ್ಪಂದನೆ* *ಬೆಳಗಾವಿ ಸೈಬರ್ ಪೋಲೀಸರಿಗೆ ವಂದನೆ*   ಬೆಳಗಾವಿ-ಪಿಐ ಗಡ್ಡೇಕರ ಅವರು ಬೆಳಗಾವಿ ಸೈಬರ್ ಪೋಲೀಸ್ ಠಾಣೆಗೆ ಬಂದಾಗಿನಿಂದ ಈ ಠಾಣೆಯ ದೂರುದಾರರಿಗೆ ಫಾಸ್ಟ್ ರಿಲೀಫ್ ಸಿಗುತ್ತಿದೆ.ಯಾಕಂದ್ರೆ ಈ ಠಾಣೆಯ ಸಿಬ್ಬಂಧಿಗಳ ಕ್ರಿಯಾಶೀಲತೆಯಿಂದಾಗಿ ಬೆಳಗಾವಿ CEN ಠಾಣೆಯ ಗೋಲ್ಡನ್ ಹಾವರ್ ಈಗ ಶುರುವಾಗಿದೆ. ಬೆಳಗಾವಿಯ ಸೈಬರ್ ಪೋಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ 1309 ಸೈಬರ್ ಪ್ರಕರಣಗಳು ದಾಖಲಾಗಿದ್ದವು.ಈ …

Read More »

ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಳಗಾವಿಯ ವಿಜ್ಞಾನಿ….

ಬೆಳಗಾವಿ- ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜೆ. ಮಂಜಣ್ಣ ಅವರಿಗೆ ಸ್ಥಾನ ಸಿಕ್ಕಿರುವದು ಬೆಳಗಾವಿಯ ಹೆಮ್ಮೆ… ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರೊ. ಜೆ. ಮಂಜಣ್ಣ ಸ್ಥಾನ ಪಡೆದಿದ್ದಾರೆ. ಎಲ್ಸೇವಿಯರ್ ಸಂಸ್ಥೆಯ ಸಹಯೋಗದಲ್ಲಿ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಜೆರೋಯಿನ್ ಬಾಸ್, ಕೆವಿನ ಬೋಯಾಕ್ ಮತ್ತು ಜಾನ್ ಪಿ.ಎ. …

Read More »

ಮರಾಠಿ ಶಿಕ್ಷಕನ ಕಂಠಸಿರಿಯಲ್ಲಿ ಕನ್ನಡ ಗೀತಗಾಯನ….

ಬೆಳಗಾವಿ, – ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿರುವ “ಲಕ್ಷ ಕಂಠಗಳಲ್ಲಿ” ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಬೆಳಗಾವಿ ಜಿಲ್ಲೆಯಲ್ಲಿನ 2000 ವಿದ್ಯಾರ್ಥಿನಿಯರಿಗೆ ಆಯ್ದ ಕನ್ನಡ ಗೀತೆಗಳನ್ನು ಕಲಿಸುವ ಮಹತ್ವಪೂರ್ಣ ಕಾರ್ಯವನ್ನು ಮರಾಠಿ ಶಿಕ್ಷಕರಾದ ಹಾಗೂ ಸಮೂಹ ಗಾಯನದ ಮಾಸ್ಟರ್ ಎಂದು ಪ್ರಸಿದ್ಧರಾದ ವಿನಾಯಕ ಮೋರೆಯವರು ಮಾಡಿದ್ದಾರೆ. ಅ.28 ರಂದು ನಡೆಯಲಿರುವ ಸಮೂಹ ಗೀತಗಾಯನ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ 1000 ವಿದ್ಯಾರ್ಥಿಗಳು …

Read More »

ಬೆಳಗಾವಿಯಲ್ಲಿ, ಮಾತಾಡ್ ಮಾತಾಡ್ ಕನ್ನಡ….!!!

ಮಾತಾಡ್ ಮಾತಾಡ್ ಕನ್ನಡ, ಗೀತಗಾಯನ ಕಾರ್ಯಕ್ರಮ ಕನ್ನಡಕ್ಕಾಗಿ ನಾವು ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ಬೆಳಗಾವಿ,-2021 ನೇ ಸಾಲಿನ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ನಿಮಿತ್ತ “ಕನ್ನಡಕ್ಕಾಗಿ ನಾವು-ಅಭಿಯಾನ”ವನ್ನು ಸರಕಾರ ಹಮ್ಮಿಕೊಂಡಿದೆ. ಈ ಅಭಿಯಾನದಡಿ ಬರುವ ಗೀತಗಾಯನ, ಮಾತಾಡ್ ಮಾತಾಡ್ ಸೇರಿದಂತೆ ವಿವಿಧ ಬಗೆಯ  ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. “ಕನ್ನಡಕ್ಕಾಗಿ ನಾವು-ಅಭಿಯಾನ”ದ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ (ಅ.26) …

Read More »

ಬೆಳಗಾವಿಯಲ್ಲಿ ಇವತ್ತು ಎಂಈಎಸ್ ಮತ್ತೆ ಹೈಡ್ರಾಮಾ…!!

ಬೆಳಗಾವಿ- ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆಯೇ ಬೆಳಗಾವಿಯಲ್ಲಿ ನಾಡವಿರೋಧಿ ಎಂಈಎಸ್ ನಾಯಕರ ಪುಂಡಾಟಿಕೆ ಶುರುವಾಗುತ್ತದೆ, ವಾಡಿಕೆಯಂತೆ ಇವತ್ತು ಎಂಈಎಸ್ ನಾಯಕರು ಹೈಡ್ರಾಮಾ ನಡೆಸಿದ್ದಾರೆ. ರಾಜ್ಯೋತ್ಸವ ಕೇಲವೆ ದಿನಗಳ ಮೊದಲು ಎಂಇಎಸ್ ಕಿರಿಕ್ ಶುರುವಾಗಿದೆ. ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕುವಂತೆ, ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಕ್ಯಾತೆ ತೆಗೆದಿದೆ. ಸಂಭಾಜೀ ವೃತ್ತದಲ್ಲಿ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ನಡೆಸಿ ಬ್ಯಾರಿಕೆಟ್ ತಳ್ಳಿ ನುಗ್ಗಲು ಯತ್ನಿಸಿ ಗುಂಡಾಗಿರಿ ಪ್ರದರ್ಶಿಸಿದ ನಾಡವಿರೋಧಿಗಳು, ಪೊಲೀಸರ ಜತೆಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. …

Read More »

ಬೆಳಗಾವಿಯಲ್ಲೂ, ಅಂಡರ್ ಗ್ರೌಂಡ್ ಹೈಡ್ರೋಲೀಕ್ , ಹೈಟೇಕ್ ಡಸ್ಟಬೀನ್…!!

ಬೆಳಗಾವಿ- ಬೆಳಗಾವಿ ಮಹಾನಗರ ಅದೆಷ್ಟು ಹೈಟೆಕ್ ಆಗುತ್ತಿದೆ ಅನ್ನೋದಕ್ಕೆ ಈ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೇ ಅದಕ್ಕೆ ಸಾಕ್ಷ್ಯ. ಬೆಳಗಾವಿಯಲ್ಲಿ,ಹೈಟೆಕ್ ಡಿಜಿಟಲ್ ಲೈಬ್ರರಿ,ಬುದ್ದಿಮಾಂದ್ಯ,ವಿಕಲ ಚೇತನ ಮಕ್ಕಳ ಮನರಂಜನೆಗೆ ವಿಶೇಷ ಪಾರ್ಕ್, ತಿನಿಸು ಕಟ್ಟೆ,(ಖಾವು ಕಟ್ಟಾ) ನಿರ್ಮಾಣ,ಜೊತೆಗೆ ವ್ಯಾಕ್ಸೀನ್ ಡಿಪೋದಲ್ಲಿ ಎವಿಯೇಶನ್ ಸೆಂಟರ್ ಮತ್ತು ನಾಥ ಪೈ ಸರ್ಕಲ್ ಬಳಿಯ ರಸ್ತೆಯ ಡಿವೈಡರ್ ಜಾಗದಲ್ಲಿ ಬೀದಿ ವ್ಯಾಪಾರಿಗಳಿಗೆ ವಿಶೇಷ ಮಳಿಗೆ ನಿರ್ಮಿಸುವದು ಸೇರಿದಂತೆ ಹತ್ತು ಹಲವು ವಿಶೇಷ ಸವಲತ್ತುಗಳನ್ನು ಬೆಳಗಾವಿ ಜನಗರದ …

Read More »

ಕ್ರಾಂತಿಯ ನೆಲ ಕಿತ್ತೂರಿಗೆ ಬಂಪರ್ ಲಾಟರಿ….

ಕಿತ್ತೂರು-ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಣೆ ಬೆಳಗಾವಿ(ಕಿತ್ತೂರು), ಅ.23(ಕರ್ನಾಟಕ ವಾರ್ತೆ): ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರಕಟಿಸಿದರು. ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ …

Read More »

ಬೆಳಗಾವಿಯಲ್ಲಿ ಬುಡಾ ವಿರುದ್ದ ಆಲ್ ಪಾರ್ಟಿ ಪ್ರತಿಭಟನೆ….!!!

ಮನವಿ ಸ್ವೀಕರಿಸಿದ ಬಿಸ್ವಾಸ್, ಕಣಬರ್ಗಿಯ ಬುಡಾ ಲೇಔಟ್ ಠರಾವ್ ಪಾಸ್ ಆಗುವ ವಿಶ್ವಾಸ…. ಬೆಳಗಾವಿ- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಬೇಕು,ಈ ಸಭೆಯಲ್ಲಿ ಕಣಬರ್ಗಿ ಗ್ರಾಮದ ಹೊಸ ಲೇಔಟ್ ಕುರಿತು ಠರಾವ್ ಪಾಸ್ ಆಗಲೇಬೇಕು ಎಂದು, ಆಗ್ರಹಿಸಿ ಆಮ್ ಆದ್ಮಿ,ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ಮುಖಂಡರು ಜಂಟಿಯಾಗಿ ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ. ಕಾಂಗ್ರೆಸ್ಸಿನ ಆರ್ ಪಿ ಪಾಟೀಲ,ಬಿಜೆಪಿಯ ರಾಜೀವ ಟೋಪಣ್ಣವರ ,ಸುಜೀತ ಮುಳಗುಂದ ಸೇರಿದಂತೆ ಆಮ್ ಆದ್ಮಿ ಪಾರ್ಟಿಯ ಮುಖಂಡರು ಹಾಗು …

Read More »

ಕಿತ್ತೂರಿನ ಹೆಸರಿನಿಂದ ಈ ಭಾಗವನ್ನು ಕರೆದರೆ ಅದು ಕರ್ನಾಟಕಕ್ಕೇ ಭೂಷಣ.

ಡಾ.ಚಿದಾನಂದ ಮೂರ್ತಿಯವರ ಕಂಡಿದ್ದ “ಕಲ್ಯಾಣ ಕರ್ನಾಟಕ”ದ ಕನಸು ಅವರ ಜೀವಿತಾವಧಿಯಲ್ಲಿಯೇ ನನಸಾಯಿತು,”ಕಿತ್ತೂರು ಕರ್ನಾಟಕ”ವನ್ನು ಕಾಣುವ ಭಾಗ್ಯ ಅವರದಾಗಲಿಲ್ಲ! 1956 ರಲ್ಲಿಯೇ ಕರ್ನಾಟಕ ಏಕೀಕರಣವಾಗಿ ಮುಂಬಯಿ ಪ್ರಾಂತದ ನಾಲ್ಕು ಜಿಲ್ಲೆಗಳಾದ ಬೆಳಗಾವಿ,ಧಾರವಾಡ, ವಿಜಯಪುರ ಮತ್ತು ಉತ್ತರ ಕನ್ನಡ (ಸದ್ಯ ಗದಗ ಹಾವೇರಿ ಮತ್ತು ಬಾಗಲಕೋಟೆ ಸೇರಿ 7 ಜಿಲ್ಲೆಗಳು)ಅಖಂಡ ಕರ್ನಾಟಕಕ್ಕೆ ಸೇರಿದ 65 ವರ್ಷಗಳಾದರೂ ಇನ್ನೂ ಈ ಭಾಗಕ್ಕೆ ಮುಂಬಯಿ ಕರ್ನಾಟಕವೆಂದೇ ಕರೆಯಲ್ಪಡುತ್ತಿರುವದು ಸರಿಯಲ್ಲ.ಅದೇ ರೀತಿ ಹೈದ್ರಾಬಾದ ಕರ್ನಾಟಕದ ಏಳು ಜಿಲ್ಲೆಗಳನ್ನು …

Read More »