Breaking News
Home / LOCAL NEWS (page 340)

LOCAL NEWS

ಸೊಂಕಿತರ ಜೊತೆ ಮಾತಾಡಿ,ಅಡಿಯೋ ವಿಡಿಯೋ ವೈರಲ್ ಮಾಡಿದವ ಅರೆಸ್ಟ್…..

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ವಿಡಿಯೋ, ಆಡಿಯೋ ಕ್ಲಿಪ್ ವೈರಲ್ ಮಾಡಿದ ಪ್ರಮುಖ ಆರೋಪಿಯನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ ಅಮಿರ್ ಹಮ್ಜಾ ಬೀಡಿಕರ್ ಬಂಧಿತ ಆರೋಪಿ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಏಳು ಕೊರೊನಾ ಸೋಂಕಿತರ ಮೇಲೆ ನಿಗಾ ಇಡಲಾಗಿದೆ. ಮೊದಲು ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಮೂವರ ಬಗ್ಗೆ ಆಡಿಯೋ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಸಮಾಜಕ್ಕೆ ತಪ್ಪು ಸಂದೇಶ ಸಾರುವ …

Read More »

ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಿ,ಅಧಿಕಾರಿಗಳಿಗೆ ಖಡಕ್ ಸೂಚನೆ

ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಿ : *ಕೊರೋನಾ ಜಾಗೃತಿ ಸಭೆ* ಯಲ್ಲಿ ಅಧಿಕಾರಿಗಳಿಗೆ *ಸಚಿವ ರಮೇಶ್ ಜಾರಕಿಹೊಳಿ* ಸೂಚನೆ ಮೂಡಲಗಿ: ಪಟ್ಟಣದ ಎಲ್ಲ ಗ್ರಾಮಗಳ ಜನರಿಗೆ ಸರ್ಕಾರ ಒದಗಿಸಿರುವಂತಹ ಸವಲತ್ತುಗಳು ಕೂಡಲೇ ಪೂರೈಕೆಯಾಗಬೇಕು. ಸಾರ್ವಜನಿಕರಿಗೆ ಅಗತ್ಯವಿರುವಂತ ವಸ್ತುಗಳನ್ನು ಒದಗಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು *ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ* ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದಲ್ಲಿ ಇಂದು ನಡೆದ ಜಿಲ್ಲಾ ಪಂಚಾಯಿತಿ, ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ …

Read More »

ಕೋಳಿ ಮೌಂಸ ತಿಂದ್ರೆ ತೊಂದರೆ ಇಲ್ಲ,ಅಂತಾ ಹೇಳಿದ ಮಿನಿಸ್ಟರ್ ಯಾರು ಗೊತ್ತಾ..?

ಬೆಳಗಾವಿ,: ಲಾಕ್ ಡೌನ್ ಸಂದರ್ಭದಲ್ಲಿ ಕೃಷಿಯ ದೈನಂದಿನ ಚಟುವಟಿಕೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳದಂತೆ ಕ್ರಮ ಕೈಗೊಳ್ಳುವುದರ ಜತೆಗೆ ಕೃಷಿ ಉತ್ಪನ್ನಗಳ ಮಾರಾಟ, ಸಾಗಾಣಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬೀಜ-ಗೊಬ್ಬರ ಮತ್ತಿತರ ಸಾಮಗ್ರಿಗಳ ಪೂರೈಕೆ ವ್ಯತ್ಯಯವಾಗದಂತೆ ಎಲ್ಲ ವ್ಯವಸ್ಥೆ ಕಲ್ಪಿಸಬೇಕು ಎಂದು ಕೃಷಿ ಇಲಾಖೆಯ ಸಚಿವರಾದ ಬಿ.ಸಿ.ಪಾಟೀಲ ಸೂಚನೆ ನೀಡಿದರು. ಕೋವಿಡ್ -೧೯ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿತ ವಿಷಯಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ(ಏ.೬) ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು …

Read More »

ಸದ್ದಿಲ್ಲದೇ ಬೆಳಗಾವಿಯಲ್ಲಿ ನಡೆದಿದೆ ದಾಸೋಹ…!!!

  ಬೆಳಗಾವಿ- ಬೆಳಗಾವಿಯ ರೈಲು ನಿಲ್ದಾಣದಲ್ಲಿರುವ ರೇಲ್ವೇ ಪೋಲೀಸರು ಸದ್ದಿಲ್ಲದೇ ದಾಸೋಹ ಮಾಡುತ್ತಿದ್ದಾರೆ. ಬೆಳಗಾವಿಯ ರೈಲು ನಿಲ್ದಾಣದ ಪರಿಸರದಲ್ಲಿರುವ ನೂರಾರು ಜನರಿಗೆ ದಾಸೋಹದ ವ್ಯೆವಸ್ಥೆ ಮಾಡುತ್ತಿರುವ ರೇಲ್ವೆ ರಕ್ಷಣಾ ದಳದ ಪೋಲೀಸ್ ಅಧಿಕಾರಿಗಳು ಯಾವುದೇ ರೀತಿಯ ಪ್ರಚಾರ ಪಡೆಯದೇ ಹಸಿದ ಹೊಟ್ಟೆಗೆ ಅನ್ನ ಹಾಕುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಗೆಳೆಯ ಪೋಟೋಗ್ರಾಫರಗ ವಿಶ್ವನಾಥ ಮನೆಯಿಂದ ಬರುವಾಗ ಈ ಪೋಟೋ ತೆಗೆದು ನನಗೆ ಕಳುಹಿಸಿದ್ದಾನೆ ರೇಲ್ವೆ ಪೋಲೀಸರಿಗೆ ಫೋನ್ ಮಾಡಿ ದಾಸೋಹದ ಬಗ್ಗೆ …

Read More »

ಬೆಳಗಾವಿಯಲ್ಲಿ ಕಂಟ್ರಿ ಸರಾಯಿ ಹಾವಳಿಗೆ ಓರ್ವನ ಬಲಿ….?

ಬೆಳಗಾವಿ- ಬೆಳಗಾವಿಯಲ್ಲಿ ಅವ್ಯಾಹತವಾಗಿ ಕಂಟ್ರಿ ಸರಾಯಿ ಮಾರಾಟವಾಗುತ್ತಿದೆ.ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆರೋಪ ಮಾಡಿದ ಬೆನ್ನಲ್ಲಿಯೇ ಬೆಳಗಾವಿಯಲ್ಲಿ ಕಂಟ್ರಿ ಸಾರಾಯಿ ಕುಡಿದು ವ್ಯಕ್ತಿಯೊಬ್ನ ಸಾವನ್ನೊಪ್ಪಿರುವ ಶಂಕೆ ವ್ಯೆಕ್ತವಾಗಿದೆ. ಅಶೋಕ್ ನಗರ ನಿವಾಸಿ ಪ್ರಕಾಶ್ ಮಸರಗುಪ್ಪಿ(33) ಮೃತ ವ್ಯಕ್ತಿಯಾಗಿದ್ದು ಇತನ ಶವ ಶಿವಬಸವನಗರದ ಬಳಿ ದೊರೆತಿದೆ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಪ್ರಕಾಶ ಮಸರಗುಪ್ಪಿ ಮದ್ಯವ್ಯಸನಿಯಾಗಿದ್ದ ಪ್ರಕಾಶ್ ಮಸರಗುಪ್ಪಿ ಅನುಮಾನಾಸ್ಪದವಾಗಿ ಸಾವನ್ನೊಪ್ಪಿದ್ದಾನೆ. ಮದ್ಯದ ಅಂಗಡಿ ಬಂದ್ ಹಿನ್ನೆಲೆ ಕಂಟ್ರಿ …

Read More »

ಇಂದು ಬೆಳಗಾವಿಯ,18 ಜನ ಶಂಕಿತರ ಗಂಟಲು ದ್ರವ ಪರೀಕ್ಷೆಗೆ ರವಾನೆ.

ಬೆಳಗಾವಿ-ಬೆಳಗಾವಿ ಜಲ್ಲೆಯಲ್ಲಿ ,7 ಜನ ಕೊರೋನಾ ಸೊಂಕಿತರು ಇದ್ದು,ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಹದಿನೆಂಟು ಜನರ ಗಂಟಲು ದ್ರವ ಸಂಗ್ರಹಿಸಿ ಇಂದು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಬೆಳಗಾವಿ ಜಿಲ್ಲಾ ಕೊರೋನಾ ಸರ್ವಲೆನ್ಸ ಅಧಿಕಾರಿ ಡಾ ತುಕ್ಕಾರ ಮಾಹಿತಿ ನೀಡಿದ್ದು,ಬೆಳಗಾವಿ ಜಿಲ್ಲೆಯ7 ಜನ ಕೊರೋನಾ ಸೊಂಕಿತರ ಸಂಪರ್ಕಕ್ಕೆ ಬಂದಿರುವ ಜನರನ್ನು ಗುರುತಿಸಿ ಈ ವರೆಗೆ 18 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ,ಈ ಕಾರ್ಯ ಮುಂದುವರೆದಿದ್ದು ಇವತ್ತು ಮತ್ತಷ್ಟು ಜನರ ಗಂಟಲು ದ್ರವ ಸಂಗ್ರಹಿಸುತ್ತೇವೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 850 ಜನರ ಮೇಲೆ ಆರೋಗ್ಯ ಇಲಾಖೆಯ ನಿಗಾ…!!

  ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸ್ಥಿತಿಗಳ ಬಗ್ಗೆ ನಿನ್ನೆ ಸಂಜೆ ಆರೋಗ್ಯ ಇಲಾಖೆ ಹೆಲ್ತ ಬುಲಿಟೀನ್ ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಒಟ್ಟು 850 ಜನರ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದೆ. 850 ಜನರಲ್ಲಿ 229 ಜನರನ್ನು 14 ದಿನಗಳ ವರೆಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.38 ಜನರನ್ನು ಆಸ್ಪತ್ರೆಯಲ್ಲಿ ಐಸೀಲೇಟ್ ಮಾಡಲಾಗಿದೆ. ಈ ವರೆಗೆ ಒಟ್ಟು 79 ಕೊರೋನಾ ಶಂಕಿತರ ಗಂಟಲು ದ್ರವ ಸಂಗ್ರಹಿಸಲಾಗಿತ್ತು ಅದರಲ್ಲಿ 69 ಜನರ …

Read More »

ಬೆಳಗಾವಿ ಜಿಲ್ಲೆಯ ಮತ್ತೆ ನಾಲ್ವರ ರಿಪೋರ್ಟ್ ಪಾಸಿಟೀವ್ ,ಕೊರೋನಾ ಸೊಂಕಿತರ ಸಂಖ್ಯೆ 7 ಕ್ಕೆ ಏರಿಕೆ

ಬೆಳಗಾವಿ ಜಿಲ್ಲೆಗೆ ಬಿಗ್ ಶಾಕ್ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು. *ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ* ಬೆಳಗಾವಿ- ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಹೊರಬಿದ್ದಿದೆ. ನಾಲ್ವರು ಬೆಳಗಾವಿ ಜಿಲ್ಲೆಯ ರಾಯಬಾಗ ಮೂಲದವರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದ್ದು ಇವರೆಲ್ಲರೂ ದೆಹಲಿಯ ಧರ್ಮಸಭೆಯಲ್ಲಿ ಭಾಗಿಯಾಗಿದ್ದರು. ಪೇಷಂಟ್ ನಂಬರ್ 147 – 36 ವರ್ಷದ ಮಹಿಳೆ. ಪೇಷಂಟ್ ನಂಬರ್ 148 – 40 ವರ್ಷದ ಪುರುಷ ರಾಯಬಾಗ. …

Read More »

ನೆಗೆಟೀವ್ ರಿಪೋರ್ಟ್ ಬಂದವರಿಗೂ ಮತ್ತೊಮ್ಮೆ ಪರೀಕ್ಷೆ ಮಾಡಿ- ರಮೇಶ್ ಜಾರಕಿಹೊಳಿ

ರಬೆಳಗಾವಿ,ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದರಿಂದ ಲಾಕ್ ಡೌನ್ ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು. ನಾಗರಿಕರಿಗೆ ಅಗತ್ಯ ಸಾಮಗ್ರಿಗಳ ಪೂರೈಕೆ ಮತ್ತು ತುರ್ತು ಸಂದರ್ಭ ಹೊರತುಪಡಿಸಿ ಉಳಿದಂತೆ ಜನಸಂಚಾರ ನಿಯಂತ್ರಣಕ್ಕೆ ಬಿಗಿ ಕ್ರಮಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್-೧೯ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾನುವಾರ (ಏ.೫) ನಗರದ ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಒಮ್ಮೆ …

Read More »

ಎಲ್ಲರೂ ಸೋಶಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡಿ- ಸುರೇಶ ಅಂಗಡಿ

ಏ.14ರವರೆಗೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು: ಕೇಂದ್ರ ಸಚಿವ ಅಂಗಡಿ ಬೆಳಗಾವಿ ಇಡೀ ದೇಶ ಕರೋನೊ‌ ವಿರುದ್ದ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಏ.14ರ ವರೆಗೂ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದರು. ಭಾನುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಹುಕ್ಕೇರಿ ‌ಹಿರೇಮಠದ ಶ್ರೀ‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ 29ನೇ ಸವಿಚಾರ ಚಿಂತನ ಬಳಗದಿಂದ ನಿರ್ಗತಿಕರು ಹಾಗೂ ಬಡವರಿಗೆ ದಿನಸಿ ಸಾಮಗ್ರಿಗಳನ್ನು …

Read More »