LOCAL NEWS

ಅಂಗನವಾಡಿ,ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ,ಓರ್ವನ ಬಂಧನ

ಬೆಳಗಾವಿ- ಸಮೀಕ್ಷೆಗೆ ತೆರಳಿದ ಅಂಗನವಾಡಿ,ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಗಾವಿಯ ಗಣೇಶಪೂರದಲ್ಲಿ ನಡೆದಿದೆ. ಅಂಗನವಾಡಿ,ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಪ್ಯಾರಾ ಮೆಡಿಕಲ್ ವರ್ಕರ್ಸ್ ಗಳು ಇಂದು ಗಣೇಶಪೂರದಲ್ಲಿ ಕೊರೋನಾ ಕುರಿತು ಸಾರ್ವಜನಿಕರು ವಹಿಸಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವಾಗ ರಿಕ್ಷಾ ಚಾಲಕನೊಬ್ಬ ಇವರ ಜೊತೆ ಅಸಭ್ತವಾಗಿ ವರ್ತಿಸಿ ಹಲ್ಲೆ ಮಾಡಿದ್ದಾನೆ ಹಲ್ಲೆ ಮಾಡಿದ ಆರೋಪದ ಮೇಲೆ ಓರ್ವನನ್ನು ಬಂಧಿಸಲಾಗಿದೆ.ಈ ಕುರಿತು ಕ್ಯಾಂಪ್ ಠಾಣೆಯಲ್ಲಿ …

Read More »

ಜವಾಬ್ದಾರಿಯೊಂದಿಗೆ ಮಾನವೀಯ ಅಂತಃಕರಣಕ್ಕೆ ಮತ್ತೊಂದು ಸಾಕ್ಷಿ ಒದಗಿಸಿದ ಶಾಸಕ ಸತೀಶ ಜಾರಕಿಹೊಳಿ

ಬೆಳಗಾವಿ- ಯಾವತ್ತೂ ಜನಸಾಮಾನ್ಯರ ಬಗ್ಗೆ ವಿಶೇಷ ಕಾಳಜಿ ತೋರುತ್ತ ಬಂದಿರುವ ಮಾಜಿ ಸಚಿವ, ಯಮಕನರಮರಡಿ ಕ್ಷೇತ್ರದ ಹಾಲಿ ಶಾಸಕ ಕೆಪಿಸಿಸಿ ಕಾರ್ಯಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಅವರು, ನಂಬಿರದ ಜನರಿಗೆ ಸಂಕಷ್ಟದ ಸಂದರ್ಭದಲ್ಲಿ ಕೈಹಿಡಿಯಬಲ್ಲ ವಿಶ್ವಾಸಕ್ಕೆ ಪಾತ್ರವಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಅದನ್ನು ಮತ್ತೊಮ್ಮೆ ಸಾಬೀತುಪಡೆಸಿದ್ದಾರೆ. ಕೊರೊನಾ ದಾಳಿಗೆ ಸಿಲುಕಿದ ರೈತರ, ಬಡವರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದ ಸತೀಶ ಜಾರಕಿಹೊಳಿ ಅವರು, ರೈತರು ಬೆಳೆದ ತರಕಾರಿ ಮಾರಾಟಕ್ಕೆ ಸಾಧ್ಯವಾಗದೆ …

Read More »

ಬೆಳಗಾವಿಯಲ್ಲಿ ಇಂದು ಮತ್ತೆ ಇಬ್ಬರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ-ಕೊರೋನಾ ಸೊಂಕು ತಗುಲಿದ್ದ ಮತ್ತೆ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಡಚಿ ಹಾಗೂ ಹಿರೇಬಾಗೇವಾಡಿಯ ತಲಾ ಒಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ರಾಯಬಾಗ (ಕುಡಚಿ) ಪಿ-223 ಹಿರೇಬಾಗೇವಾಡಿ ಪಿ- 596 ***

Read More »

ಪ್ರಿಂಟ್ ಉದ್ಯಮ ಲಾಕ್ ….ಮಾಲೀಕರಿಗೆ ತುಂಬಲಾರದ ಲಾಸ್…ನೆರವಿಗೆ ಧಾವಿಸಲಿ ಕರ್ನಾಟಕದ ಬಾಸ್…..!!!!

ಲಾಕ್‌ಡೌನ್ ಹಿನ್ನೆಲೆ ನೆಲಕಚ್ಚಿದ ಮುದ್ರಣ ವ್ಯವಸಾಯ: ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಕೊರೊನಾ‌ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಘೋಷಿಸಲಾದ ಲಾಕ್‌ಡೌನ್‌ಗೆ ಬಹುತೇಕ ಉದ್ಯಮಗಳು ನೆಲಕಚ್ಚಿದ್ದು ಅದರಲ್ಲಿ ಮುದ್ರಣ ಉದ್ಯಮವೂ ಒಂದು. ಕಳೆದ 55 ದಿನಗಳಿಂದ ಬೆಳಗಾವಿ ನಗರದಲ್ಲಿರುವ 80ಕ್ಕೂ ಹೆಚ್ಚು ಪ್ರಿಂಟಿಂಗ್ ಪ್ರೆಸ್‌ಗಳು ಬಂದ್ ಆಗಿದ್ದು ಪ್ರಿಂಟಿಂಗ್ ಪ್ರೆಸ್ ಮಾಲೀಕರು‌ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಫೆಬ್ರವರಿ ತಿಂಗಳಿಂದ ಜೂನ್ ತಿಂಗಳವರೆಗೂ ಮದುವೆ, ನಿಶ್ಚಿತಾರ್ಥ, ಮುಂಜಿ, ಗೃಹಪ್ರವೇಶ, ಜಾತ್ರೆ ಹೀಗೆ ನಾನಾ …

Read More »

ನಾಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ 252 ಬಸ್ ಗಳ ಓಡಾಟ

ಬೆಳಗಾವಿ- ಕಳೆದ 55 ದಿನಗಳಿಂದ ನಿಶ್ಯಬ್ದ ವಾಗಿದ್ದ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಾಳೆ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಮತ್ತೆ ಬಸ್ ಸಂಚಾರ ಆರಂಭಿಸಲಿದೆ. ನಾಳೆಯಿಂದ ರಾಜ್ಯಾದ್ಯಂತ ಸಾರಿಗೆ ಸಂಚಾರ ಆರಂಭವಾಗಲಿದ್ದು ಬೆಳಗಾವಿಯ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಸ್ ನಿಲ್ಧಾಣದಲ್ಲಿ ಪ್ರಯಾಣಿಕರು ಸೋಶಿಯಲ್ ಡಿಸ್ಟನ್ಸ್ ಕಾಯ್ದು ಕೊಳ್ಳಲು ಅನಕೂಲವಾಗುವಂತೆ ಮಾರ್ಕಿಂಗ್ ಮಾಡಲಾಗಿದೆ.ನಾಳೆಯಿಂದ ಬಸ್ ನಿಲ್ಧಾಣದಲ್ಲಿ ಬಸ್ ಗಳು ಪ್ರಯಾಣಕ್ಕಾಗಿ ಪಾರ್ಕಿಂಗ್ ಆಗೋದಷ್ಟೇ ಬಾಕಿ …

Read More »

ಬೆಳಗಾವಿಗೆ ಮಹಾರಾಷ್ಟ್ರ ನಂಟು ಬೆಳಗಾವಿಯಲ್ಲಿ ಮತ್ತೆ ಇಬ್ಬರಲ್ಲಿ ಸೊಂಕು ಪತ್ತೆ

ಬೆಳಗಾವಿ -ಸೋಮವಾರದ ಹೆಲ್ತ್ ಬುಲಿಟೀನ್ ಬೆಳಗಾವಿಗೆ ಮತ್ತೆ ಶಾಕ್ ನೀಡಿದೆ ,ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರಲ್ಲಿ ಮತ್ತೆ ಸೊಂಕು ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಜಿಲ್ಲಾಡಳಿತದ ವರದಿಯ ಪ್ರಕಾರ 118ಕ್ಕೆ ತಲುಪಿದೆ. ಇಂದು ಸೊಂಕು ಪತ್ತೆಯಾದ ಇಬ್ಬರು ಮುಂಬೈಯಿಂದ ಬೆಳಗಾವಿಗೆ ಬಂದಿದ್ದರು ನಿಪ್ಪಾಣಿ ಬಳಿ ಇವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಓರ್ವ ಮಹಿಳೆಗೆ ಮಹಾರಾಷ್ಟ್ರದ ನಂಟಿನಿಂದ ಸೊಂಕು ತಗಲಿದ್ದು ,ಇನ್ನೋರ್ವರಿಗೆ ತಬ್ಲಿಗ್ ನಂಟಿನಿಂದ ಸೊಂಕು ತಗಲಿದೆ.  

Read More »

ಮಹಾದಾಯಿ ಸಮಸ್ಯೆ ಇತ್ಯರ್ಥಕ್ಕೆ ರಸ್ತೆಯ ಮೂಲಕವೇ ದೆಹಲಿಗೆ ಹೋಗುವೆ

ಬೆಳಗಾವಿ- ಕಳಸಾ, ಬಂಡೂರಿ ಹಾಗೂ ಮಹಾದಾಯಿ ಕಾಮಗಾರಿ ಆರಂಭ ವಿಚಾರ ಕುರಿತು ದೆಹಲಿಗೆ ಹೋಗಲು ವಿಮಾನ ಸೌಲಭ್ಯ ಇಲ್ಲ, ಹೀಗಾಗಿ ಹೋಗಲಾಗಿಲ್ಲ ಶೀಘ್ರದಲ್ಲೇ ರಸ್ತೆಯ ಮೂಲಕವೇ ಅಧಿಕಾರಿಗಳ ಜೊತೆಗೆ ದೆಹಲಿಗೆ ಹೋಗಿ ಕೇಂದ್ರ ಜತೆ ಚರ್ಚೆ ಮಾಡುವದಾಗಿ ಜಲಸಂಪನ್ನೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಜಲಸಂಪನ್ಮೂಲ ಇಲಾಖೆತ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವನಾದ ಬಳಿಕ ರಾಜ್ಯದ ಎಲ್ಲಾ ಜಲಾಶಯಕ್ಕೆ ಭೇಟಿ ನೀಡಿದ್ದೇನೆ. …

Read More »

ಬೆಳಗಾವಿ ಜಿಲ್ಲೆಯಲ್ಲಿ 146 ಜನ ಶಂಕಿತರ ರಿಪೋರ್ಟ್ ಬರೋದು ಬಾಕಿ

ಬೆಳಗಾವಿ- ನಾಳೆ‌ 146 ಕೊರೊನಾ ಶಂಕಿತರ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತವಿದ್ದು ಬೆಳಗಾವಿ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ರಿಲೀಸ್ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ 50 ಆಕ್ಟಿವ್ ಕೊರೊನಾ ಪಾಸಿಟಿವ್ ಕೇಸ್ ಗಳಿವೆ, ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 8281 ಜನರ ಮೇಲೆ‌ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಒಟ್ಟು 78 ಜನರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಒಟ್ಟು 50 ಜನರಿಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗಿದೆ. …

Read More »

:ಬೆಳಗಾವಿಯಲ್ಲಿ 9 ಜನರು ಗುಣಮುಖ,ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ,-ಕೋವಿಡ್-೧೯ ಸೋಂಕು ತಗುಲಿದ್ದ 9 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಪಿ-298 ಪಿ-418 ಪಿ- 448 ಪಿ-484 ಪಿ-495 ಪಿ-496 ಪಿ-541 ಪಿ-542 ಪಿ-551 ***

Read More »

ಬೆಳಗಾವಿಯ ಅಟೋಮೋಬೈಲ ಕಂಪನಿ ಲಾಕ್ ಡೌನ್ ಕಾರ್ಮಿಕರ ಕಂಗಾಲು….!!

ಬೆಳಗಾವಿ-ಮಹಾ ಮಾರಿ ಕೊರೋನಾ ಜನರ ಬದುಕನ್ನೇ ನುಂಗುತ್ತಿದೆ.ಲಾಕ್ ಡೌನ್ ನಿಂದಾಗಿ ಕಂಪನಿಗಳು ಶೆಟರ್ ಡೌನ್ ಮಾಡುತ್ತಿದ್ದರೆ ಅಲ್ಲಿ ದುಡಿದು ಬದುಕುವ ಕಾರ್ಮಿಕರು ಕಂಗಾಲಾಗುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟಿದೆ ಎಂದು ಬೆಳಗಾವಿಯ ಆಟೋಮೊಬೈಲ್ ಕಂಪನಿಯಿಂದು ಬಂದ್ ಮಾಡಿದ ಹಿನ್ನಲೆಯಲ್ಲಿ ಅಲ್ಲಿಯ ಕಾರ್ಮಿಕರು ಕೆಲಸ ಕಳೆದುಕೊಂಡು,ಎರಡು ತಿಂಗಳ ವೇತನವೂ ಸಿಗದೇ ಕಂಪನಿಯ ಬಾಗಿಲು ಕಾಯುವ ಪರಿಸ್ಥಿತಿ ಎದುರಾಗಿದೆ. *ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುವ 140ಕ್ಕೂ ಹೆಚ್ಚು ಕಾರ್ಮಿಕರು ಅತಂತ್ರವಾಗಿದ್ದಾರೆ. ಬೆಳಗಾವಿಯ ಬಾಲು ಇಂಡಿಯಾ ಕಂಪನಿ …

Read More »