Home / LOCAL NEWS (page 463)

LOCAL NEWS

ಪೋಲೀಸರ ಕಣ್ಣು ತಪ್ಪಿಸಿ ಮೇಳಾವ್ ದಲ್ಲಿ ಭಾಗವಹಿಸಿದ ಮಹಾರಾಷ್ಟ್ರ ಶಾಸಕರು

ಬೆಳಗಾವಿ -ಬೆಳಗಾವಿಯಲ್ಲಿ ಎಂಇಎಸ ಆಯೋಜಿಸಿದ ಮರಾಠಿ ಮೇಳಾವ್ ದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಟ್ಟಪ್ಪಣೆ ಉಲ್ಲಂಘಿಸಿ ಮಹಾರಾಷ್ಟ್ರದ ಇಬ್ಬರು ಶಾಸಕರು ಭಾಗವಹಿಸುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ್ದಾರೆ ಬೆಳಗಾವಿಯ ವ್ಯಾಕ್ಸೀನ್ ಡಿಪೋ ರಸ್ತೆಯಲ್ಲಿ ನಡೆದ ಮೇಳಾವದಲ್ಲಿ ಮಹಾರಾಷ್ಟ್ರ ಇಬ್ಬರು ಶಾಸಕರು ಭಾಗಿಯಾಗುವ ಮೂಲಕ ಜಿಲ್ಲಾಧಿಕಾರಿ ಜಿಯಾವುಲ್ಲಾ ಹೊರಡಿಸಿದ ಬೆಳಗಾವಿ ಗಡಿ ಪ್ರವೇಶ ನಿಷೇಧದ ಆದೇಶವನ್ನು ಉಲಗಲಂಘಿಸಿದ್ದಾರೆ ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆ ಹಾಗೂ ರಾಜ್ಯ ಗುಪ್ತಚರ ಇಲಾಖೆ ಮಹಾರಾಷ್ಟ್ರದ ಶಾಸಕರನ್ನು ಗಡಿಪ್ರವೇಶ …

Read More »

ಎಂಈಎಸ್ ವಿರುದ್ಧ ಕರವೇ ಆಕ್ರೋಶ.ಪೋಲೀಸರ ಜೊತೆ ಮಾತಿನ ಚಕಮಕಿ..

ಬೆಳಗಾವಿ- ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ ಮಹಾಮೇಳಾವಾ ಖಂಡಿಸಿ ಪ್ರತಿಭಟಿಸುತ್ತಿದ್ದ ಕರವೇ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ. ನೂರಕ್ಕೂ ಅಧಿಕ ಕರವೇ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದು, ಬೆಳಗಾವಿಯ ವಾಕ್ಸಿನ್ ಡಿಪೋದಲ್ಲಿ ಅನುಮತಿ ಇಲ್ಲದೆ ಎಂಇಎಸ ಪುಂಡರು ಮೇಳಾವಾ ನಡೆಸುತ್ತಿದೆ. ಚಳಿಗಾಲ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳಾವಾ ನಡೆಸುತ್ತಿರುವುದನ್ನ ವಿರೋಧಿಸಿ ಕರವೇ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ನಡೆಸಿ ಟಾಯರಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ರು. ಎಂಇಎಸ ಶಾಸಕರಾದ ಸಂಭಾಜಿ ಪಾಟೀಲ …

Read More »

ಅನುಮತಿ ನೀಡಲು ಪಾಲಿಕೆ ನಕಾರ.ಬೀದಿಗೆ ಬಂದ ಎಂಈಎಸ್ ಮೇಳಾವ್…

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆಧಿನದಲ್ಲಿರುವ ವ್ಯಾಕ್ಸೀನ್ ಡಿಪೋ ಮೈದಾನದಲ್ಲಿ ಮರಾಠಿ ಮಹಾ ಮೇಳಾವ್ ನಡೆಸಲು ಅನುಮತಿ ನೀಡಲು ಪಾಲಿಕೆ ಆಯುಕ್ತ ಶಶಿಧರ ಕುರೇರ ನಕಾರ ವ್ಯೆಕ್ತ ಪಡಿಸಿದ ಪರಿಣಾಮ ಮೇಳಾವ್ ವೇದಿಕೆಯನ್ನು ಮೈದಾನ ಪಕ್ಕದ ರಸ್ತೆಯಲ್ಲಿ ಹಾಕಲಾಗಿದೆ ಕೆಲ ವರ್ಷಗಳ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಾಲಿಕೆಯ ಆಧೀನದಲ್ಲಿರುವ ಮೈದಾನಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು ಎನ್ನುವ ಠರಾವ್ ಪಾಲಿಕೆಯಲ್ಲಿ ಇದೇ ಎಂಈಎಸ್ ನಾಯಕರು ಪಾಸ್ ಮಾಡಿದ್ದರು …

Read More »

ಮಹಾರಾಷ್ರದ ಎಂಈಎಸ್ ಚೇಲಾಗಳಿಗೆ ಲಗಾಮು ಹಾಕಿದ ಡಿಸಿ ಜಿಯಾವುಲ್ಲಾ

  ಬೆಳಗಾವಿ- ನಾಡದ್ರೋಹಿಗಳ ವಿರುದ್ಧ ಬೆಳಗಾವಿ ಡಿಸಿ ಜಿಯಾವುಲ್ಲಾರಿಂದ ದಿಟ್ಟಕ್ರಮ ಕೈಗೊಂಡಿದ್ದಾರೆ ಮಹಾರಾಷ್ಟ್ರ ಮುಖಂಡರಿಗೆ ಗಡಿ ಜಿಲ್ಲೆ ಬೆಳಗಾವಿ ಪ್ರವೇಶ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಆದೇಶ ಹೊರಡಿಸಿದ್ದಾರೆ ಚಳಿಗಾಲ ಅಧಿವೇಶನಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ ಮೇಳಾವಾ ಆಯೋಜನೆ ಮಾಡಿತ್ತು ಎಂಇಎಸ ಪುಂಡರಿಂದ ಮಹಾರಾಷ್ಟ್ರ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು ಇಂದು ನಡೆಯಲಿದ್ದ ಮೇಳಾವ್ ದಲ್ಲಿಹಾರಾಷ್ಟ್ರದ ನಾಯಕರು ಭಾಗವಹಿಸಲಿದ್ದರು ಮೇಳಾವಾಗೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ, ವಿಪಕ್ಷ ನಾಯಕ …

Read More »

ಕತ್ತಲಲ್ಲಿ..ಮರಾಠಿ ಮೇಳಾವ್ ಗೆ ಕದ್ದು ಮುಚ್ವಿ ತಯಾರಿ…

ಬೆಳಗಾವಿ- ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಎಂಈಎಸ್ ನಡೆಸುತ್ತಿರುವ ಮರಾಠಿ ಮಹಾ ಮೇಳಾವ್ ಗೆ ಕತ್ತಲಾಗುತ್ತಿದ್ದಂತೆಯೇ ವೇದಿಕೆ ಸಜ್ಜಾಗುತ್ತಿದೆ ಖಾನಾಪೂರ ಕ್ಷೇತ್ರದ ಎಂಈಎಸ್ ಶಾಸಕ ಅರವಿಂದ ಪಾಟೀಲ ಎಂಈಎಸ್ ಕಾರ್ಯಕರ್ತ ರನ್ನು ಕರೆದುಕೊಂಡು ಬೆಳಗಾವಿಯ ವ್ಯಾಕ್ಸೀನ್ ಡಿಪೋ ಮೈದಾನದಲ್ಲಿ ಮೇಳಾವ್ ನಡೆಸಲು ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ ನಾಳೆ ನಡೆಯುವ ಮೇಳಾವ್ ಗೆ ಮಹಾರಾಷ್ಟ್ರದಿಂದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ಧನಂಜಯ ಮುಂಡೆ ಬೆಳಗಾವಿಗೆ ಬರುತ್ತಿದ್ದು ಬೆಳಗಾವಿ ಪೋಲೀಸರು ಇಂದು ಮದ್ಯರಾತ್ರಿ …

Read More »

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬೆಳಗಾವಿಯಲ್ಲಿ ,ವಾಟಾಳ್ ಅವಾಜ್..

ಬೆಳಗಾವಿ- ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ದಿ ಮಾಡಬೇಕು ಎಂದು ಸರ್ಕಾರದ ವಿರುದ್ದ ವಾಟಾಳ್ ನಾಗಾರಜ್ ಸುವರ್ಣ ಸೌಧದ ಎದುರು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದರು. ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಏನ್ ಮಾಡಿದ್ದೀರಿ ವರ್ಷಕೊಂದು ಬಾರಿ ಅಧಿವೇಶನ ನಡೆಸಿ ಎದ್ದು ಹೋಗ್ತಿರಿ.ಉತ್ತರ ಕರ್ನಾಟಕ ಭಾಗದ ಜನತೆಗೆ ಏನ್ ಮಾಡಿದ್ದೀರಿ ಎಂದು ಶ್ವೇತ ಪತ್ರ ಹೊರಡಿಸಲಿ ಎಂದು ಸಿ.ಎಂ ಸಿದ್ದರಾಮಯ್ಯರಿಗೆ ವಾಟಾಳ್ ಸವಾಲು ಹಾಕಿದರು. ಅಲ್ಲದೆ ಅಧಿಕಾರಕ್ಕೆ …

Read More »

ಬೆಳಗಾವಿ ಅಧಿವೇಶನದಲ್ಲಿ ೯ ವಿಧೇಯಕಗಳು,20 ಗಮನ ಸೆಳೆಯುವ ಸೂಚನೆಗಳು, ೨ ಖಾಸಗಿ ನಿರ್ಣಯ, ೧೬೬೧ ಪ್ರಶ್ನೆಗಳು

  ಬೆಳಗಾವಿ- ನಾಳೆಯಿಂದ ಹತ್ತು ದಿನಗಳ ವರೆಗೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಒಂಬತ್ತು ವಿಧೇಯಕಗಳು, ೨೦ ಗಮನ ಸೆಳೆಯುವ ಸೂಚನೆಗಳು, ನಿಯಮ ೩೫೧ರ ಅಡಿಯಲ್ಲಿ ೩೩ ಸೂಚನೆಗಳು, ಎರಡು ಖಾಸಗಿ ಸದಸ್ಯರುಗಳ ನಿರ್ಣಯಗಳು ಹಾಗೂ ಒಟ್ಟು ೧ ಸಾವಿರದ ೬೬೧ ಪ್ರಶ್ನೆಗಳು ಚೆರ್ಚೆಗೆ ಬರಲಿವೆ. ಇದಲ್ಲದೆ, ಮಹಾದಾಯಿ ನೀರಿನ ಹಂಚಿಕೆ, ಕಬ್ಬು ಬೆಳೆಗಾರರ ಸಮಸ್ಯೆ, ನಂಜುಂಡಪ್ಪ ವರದಿಯ ಅನುಷ್ಟಾನದ ಸತ್ಯಾ ಸತ್ಯೆ ಸೇರಿದಂತೆ ಉತ್ತರ ಕರ್ನಾಟಕದ …

Read More »

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬೆಳಗಾವಿ ಅಧಿವೇಶನ ಆದ್ಯತೆ ನೀಡಲಾಗುವುದು : ಸಭಾಪತಿ ಕೆ.ಬಿ. ಕೋಳಿವಾಡ*

ಬೆಳಗಾವಿ- ನಾಳೆಯಿಂದ ೨೪ರ ವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಮಹಾದಾಯಿ ನದಿ ನೀರಿನ ಹಂಚಿಕೆ, ಕಬ್ಬು ಬೆಳೆಗಾರರ ಸಮಸ್ಯೆ, ನಂಜುಂಡಪ್ಪ ವರದಿಯ ಅನುಷ್ಠಾನದ ಸತ್ಯಾಸತ್ಯತೆಯ ಸೇರಿದಂತೆ ಅನೇಕ ಜಲ್ವಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ನಡೆಯಬೇಕಾಗಿದೆ ಎಂದು ವಿಧಾನ ಸಭೆಯ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದ್ದಾರೆ. ಬೆಳಗಾವಿಯಲ್ಲಿ ಇಂದು ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಕಲ್ಯಾಣ ಕಾರ್ಯಕ್ರಮ ಯೋಜನೆಗಳ ಬಗ್ಗೆ …

Read More »

ಕುಂತ್ರೆ ಕುರುಬ..ನಿಂತ್ರೆ ಕಿರುಬಾ..ಸಂಜಯ್ ಪಾಟೀಲರೇ ಹುಷಾರ್……!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲ್ ಮುಖ್ಯಮಂತ್ರಿಗಳ ಬಗ್ಗೆ ಅವರ ಧರ್ಮದ ಬಗ್ಗೆ ಅವರ ಮನೆತನದ ಬಗ್ಗೆ ಅಸಂವಿಧಾನಿಕ ಪದ ಪ್ರಯೋಗ ಮಾಡಿರುವದನ್ನು ವಿರೋಧಿದಸಿ ಕುರುಬ ಸಮಾಜದ ಮುಖಂಡರು ಶಾಸಕ ಸಂಜಯ್ ಪಾಟೀಲ್ ವಿರುದ್ಧ ಕಿಡಿಕಾರಿದರು ರಾಜ್ಯ ಕುರುಬ ಸಂಘದ ಅಧ್ಯಕ್ಷ ಡಾ ಸಣ್ಣಕ್ಕಿ ನೇತ್ರತ್ವದಲ್ಲಿ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕುರುಬ ಸಮಾಜದ ಮುಖಂಡರು ಶಾಸಕ ಸಂಜಯ ಪಾಟೀಲ ವಿರುದ್ಧ ಘೋಷಣೆ ಕೂಗಿ ತಮ್ಮ …

Read More »

ಬಂಧನದ ಭೀತಿಯಿಂದ ಬಚಾವ್.. ಶಾಸಕ ಸಂಜಯ ಪಾಟೀಲಗೆ ನಿರೀಕ್ಷಣಾ ಜಾಮೀನು

ಶಾಸಕ ಸಂಜಯ ಪಾಟೀಲರಿಗೆ ನಿರೀಕ್ಷಣಾ ಜಾಮೀನು ಬೆಳಗಾವಿ- ಟಿಪ್ಪ ಸುಲ್ತಾನ ಜಯಂತಿಯ ವಿರೋಧದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಆಯೋಜಿಸಿದ ರ್ಯಾಲಿ ಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಆಪಾದನೆಗೊಳಗಾಗಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲರಿಗೆ ನೀರಿಕ್ಷಣಾ ಜಾಮೀನು ಸಿಕ್ಕಿದೆ ಶಾಸಕ ಸಂಜಯ ಪಾಟೀಲ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬೆಳಗಾವಿಯ ಮಾರ್ಕೇಟ್ ಪೋಲೀಸ್ ಠಾಣೆಯಲ್ಲಿ ಸೋ ಮೋಟೋ ಕೇಸ್ ದಾಖಲಾಗಿತ್ತು ಶಾಸಕ ಸಂಜಯ ಪಾಟೀಲ …

Read More »