Home / LOCAL NEWS (page 545)

LOCAL NEWS

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ

ಬೆಳಗಾವಿ: ಇದೇ 21ರಿಂದ ಡಿ.2ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಅಗತ್ಯವಿರುವ ಊಟ, ವಸತಿ, ವಾಹನ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ಹೇಳಿದರು. ಶನಿವಾರ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಅಧಿವೇಶನಕ್ಕೆ ಸಚಿವರು, ಶಾಸಕರು, ಅಧಿಕಾರಿಗಳು, ಗಣ್ಯರು 7 ಸಾವಿರ ಜನ ಆಗಮಿಸಲಿದ್ದು, ಬೆಳಗಾವಿ ಹಾಗೂ ಹುಬ್ಬಳ್ಳಿ ಯ ಹೊಟೇಲ್ ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ …

Read More »

ಹೆಡೆ ಬಿಚ್ಚಿ , ಸರ್ಕಾರದ ವಿರುದ್ಧ ಭುಸ್…ಎಂದ ವಾಟಾಳ್ ನಾಗಪ್ಪ…!

ಬೆಳಗಾವಿ- ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾಂದಿ ಹಾಡಲಿ ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಬೆಳಗಾವಿಯ ಸುವರ್ಣ ಸೌಧದ ದ್ವಾರದಲ್ಲಿ ಚಾಪೆ ಹಾಸಿ ಮಲಗಿ ವಿನೂತನವಾಗಿ ಪ್ರತಿಛಟಿಸಿದರು ಬೆಳಿಗ್ಗೆ ೧೧ ಘಂಟೆಗೆ ಇಲ್ಲಿಗೆ ಆಗಮಿಸಿದ ಅವರು ಸುವರ್ಣ ಸೌಧದವನ್ನು ಪ್ರವೇಶಿಸಿ ಪ್ರತಿಭಟನೆ ನಡೆಸಲು ಮುಂದಾದರು ಆದರೆ ಪೋಲೀಸರು ಅವರನ್ನು ದ್ವಾರ ಬಾಗಿಲಲ್ಲೆ ತಡೆದಾಗ ಅಲ್ಲಯೇ ಚಾಪೆ ಹಾಸಿ ಮಲಗಿ ಪ್ರತಿಭಟನೆ ನಡೆಸಿದರು ಈ …

Read More »

ಇಂದು ವಕೀಲರ ಸಂಘಕ್ಕೆ ಚುನಾವಣೆ,ಮಾಂಗಳೇಕರ,ಕಿವಡಸಣ್ಣವರ ನಡುವೆ ನೇರ ಸ್ಪರ್ದೆ

ಬೆಳಗಾವಿ- ಇಂದು ಶನಿವಾರ ಬೆಳಗಾವಿ ವಕೀಲರ ಸಂಘದ ಚುನಾವಣೆ ನಡೆಯಲಿದೆ ಅದ್ಯಕ್ಷ ಸ್ಥಾನಕ್ಜಾಗಿ ಹಾಲಿ ಅಧ್ಯಕ್ಷ ವಿನಯ ಮಾಂಗಳೇಕರ ಹಾಗು ಕಿವಡಸಣ್ಣವರ ಸ್ಪರ್ದಿಸಿದ್ದು ಇಬ್ಬರ ನಡುವೆ ನೇರ ಸ್ಪರ್ದೆ ನಡೆಯುತ್ತಿದೆ ಇಂದು ಶನಿವಾರ ಬೆಳಿಗ್ಗೆ ೧೦-೩೦ ರಿಂದ ಸಂಜೆ ಐದು ಘಂಟೆಯವರೆಗೆ ಮತದಾನ ನಡೆಯಲಿದೆ ಸಂಜೆ ಆರು ಘಂಟೆಯ ನಂತರ ಮತ ಏಣಿಕೆ ಕಾರ್ಯ ನಡೆಯಲಿದ್ದು ರಾತ್ರಿ ಎಂಟು ಘಂಟೆಗೆ ಫಲಿತಾಂಶ ಹೊರ ಬೀಳಲಿದೆ ಜಿಲ್ಲೆಯ ವಕೀಲರ ವಲಯದಲ್ಲಿ ತೀರ್ವ …

Read More »

ಶಾಸಕರಿಗೆ ಬುದ್ಧಿವಾದ ಹೇಳಲು ಶನಿವಾರ ಬೆಳಗಾವಿಗೆ ವಾಟಾಳ್..

ಬೆಳಗಾವಿ- ನವ್ಹೆಂಬರ ೨೧ ರಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಅಧಿವೇಶನದಲ್ಲಿ ಶಾಸಕರು ಗದ್ದಲ ಗಲಾಟೆ ಮಾಡದೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿ ಎಂದು ಒತ್ರಾಯಿಸಲು ವಾಟಾಳ್ ನಾಗರಾಜ ಶನಿವಾರ  ಬೆಳಗಾವಿಗೆ ಬರುತ್ತಿದ್ದಾರೆ ಶನಿವಾರ ಬೆಳಿಗ್ಗೆ ೧೧ ಘಂಟೆಗೆ ಸುವರ್ಣ ವಿಧಾನ ಸೌಧಕ್ಜೆ ಮುತ್ತಿಗೆ ಹಾಕ್ತಾರೆ …ಪೋಲೀಸರು ಅರೆಸ್ಟ ಮಾಡಿ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ  ಮಾಡಸ್ತಾರೆ ಇದು ವಾಟಾಳ್ ಸ್ಪೇಶಲ್ ಶಾಸಕರು …

Read More »

ಉಟದ ಹೊಣೆಗಾರಿಕೆಯಿಂದ ಜಿಲ್ಲಾಡಳಿತ ಬಚಾವ್..!

ಬೆಳಗಾವಿ-ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸಜ್ಜಾಗಿದೆ. ಅಧವೇಶನಕ್ಕೆ ಬರುತ್ತಿರುವ ಮಂತ್ರಿಗಳಿಗೆ ಅಧಿಕಾರಿಗಳಿಗೆ,ಸಿಬ್ಬಂಧಿಗಳಿಗೆ ಜಿಲ್ಲಾಡಳಿತ ವಸತಿ ಹಾಗು ವಾಹನಗಳ ವ್ಯೆವಸ್ಥೆ ಮಾಡಿಕೊಂಡಿದ್ದು ಈ ಬಾರಿ ಉಟದ ವ್ಯೆವಸ್ಥೆಯನ್ನು ವಿಧಾನ ಸಭೆ ಸಚಿವಾಲಯ ನೋಡಿಕೊಳ್ಳಲಿದೆ ಅಧಿವೇಶನದಲ್ಲಿ ಭಾಗವಹಿಸುವ  ಏಳು ಸಾವಿರ ಜನರಿಗೆ ವಸತಿ ಸೌಲಭ್ಯ ಮಾಡಿಕೊಳ್ಳಲಾಗಿದ್ದು ಅದಕ್ಕಾಗಿ ಬೆಳಗಾವಿ,ಧಾರವಾಡ ಹುಬ್ಬಳ್ಳಿಯ ಲಾಜ್ ಗಳನ್ನು ಬುಕ್ ಮಾಡಲಾಗಿದೆ ಅಧಿವೇಶನಕ್ಕಾಗಿ ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ತಿಳಿಸಿದ್ದಾರೆ ಸಕ್ರೇಟ್ರಿ ಮಟ್ಟದ …

Read More »

ಹಳೆಯ ನೋಟುಗಳಿದ್ದರೆ ನೀರಿನ ಕರ ಪಾವತಿ ಮಾಡಿ

ಬೆಳಗಾವಿ- ಬೆಳಗಾವಿ ನೀರು ಸರಬರಾಜು ಮಂಡಳಿ ನವ್ಹೆಂಬರ ೨೪ ರವರೆಗೆ ಹಳೆಯ ೫೦೦ ಹಾಗು ೧೦೦೦ ನೋಟುಗಳಿಂದ ನೀರಿನ ಕರವನ್ನು ತುಂಬಿಸಿಕೊಳ್ಳಲಿದೆ ಬೆಳಗಾವಿ ನೀರು ಸರಬರಾಜು ಮಂಡಳಿಯಲ್ಲಿ ೨೦ ಕೋಟಿ ನೀರಿನ ಕರ ಬಾಕಿ ಇದ್ದು ಸಾರ್ವಜನಿಕರು ಹಳೆಯ ನೋಟುಗಳನ್ನು ತುಂಬಲು ನವ್ಹೆಂಬರ ೨೪ ರವರೆಗೆ ಅವಕಾಶವಿದ್ದು ಸಾರ್ವಜನಿಕರು ಇದರ ಲಾಭ ಪಡೆಯುವಂತೆ ಮಂಡಳಿ ಮನವಿ ಮಾಡಿದೆ ಹಳೆಯ ನೋಟುಗಳಿಂದ ಹಳೆಯ ಬಾಕಿ ಹೊಸ ಬಾಕಿ ಜೊತೆಗೆ ಮುಂಗಡವಾಗಿ ಒಂದು …

Read More »

ಸರ್ಕಾರದ ಚಳಿ ಬಿಡಿಸಲಿರುವ ,ತನ್ವೀರ ಸೇಠ ಪ್ರಕರಣ

ಬೆಳಗಾವಿ- ಪ್ರತಿ ವರ್ಷ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದ ಸಂಧರ್ಭದಲ್ಲಿ ಕಾವೇರಿ ಗಲಾಟೆ,ಕಬ್ಬಿನ ಬಾಕಿ ಬಿಲ್ ಗಲಾಟೆ,ಹಲವಾರು ಗಲಾಟೆಗಳ ಸುಳಿವಿಗೆ ಸಿಲುಕಿ ಬೆಳಗಾವಿ ಅಧಿವೇಶನ ವ್ಯರ್ಥವಾಗುತ್ತ ಬಂದಿದೆ ಆದರೆ ಈ ಬಾರಿ ಶಿಕ್ಷಣ ಮಂತ್ರಿ ಮೋಬೈಲ್ ನಲ್ಲಿ ಅಶ್ಲೀಲ ಚಿತ್ರ ನೋಡಿದ ಪ್ರಕರಣ ರಾಜ್ಯಸರ್ಕಾರವನ್ನು ಪೇಚಿಗೆ ಸಿಲುಕಿಸಲಿದೆ ಪ್ರತಿಪಕ್ಷಗಳು ಬೆಳಗಾವಿ ಅಧಿವೇಶನದಲ್ಲಿ ತನ್ವೀರ ಸೇಠ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯಸರ್ಕಾರದ ಚಳಿ ಬಿಡಿಸಲು ತಂತ್ರ ರೂಪಿಸಿದ್ದು ತನ್ವೀರ ಸೇಠ ರಾಜಿನಾಮೆ ಕೊಡುವ …

Read More »

ಬೆಳಗಾವಿಯಲ್ಲಿ ಅದ್ದೂರಿ ಕನಕದಾಸರ ಜಯಂತಿ

ಬೆಳಗಾವಿ, “ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯಾವುದು ಬಲ್ಲಿರಾ…?” ಎಂದು ಪ್ರಶ್ನಿಸಿರುವ ದಾಸಶ್ರೇಷ್ಠ ಕನಕದಾಸರಿಗೆ ನಾವು ಗೌರವ ಸಲ್ಲಿಸಬೇಕಾದರೆ ಮೊದಲು ನಾವು ಜಾತ್ಯಾತೀತ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ಜಾತ್ಯತೀತರಾದರೆ ಅದು ಕನಕನಿಗೆ ಸಲ್ಲುವ ನಿಜವಾದ ಗೌರವ” ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಅವರು …

Read More »

ಕೆಎಲ್ಇ ಸಂಸ್ಥೆ ದೇಶದ ಗೌರವ ಹೆಚ್ಚಿಸಿದೆ

ಬೆಳಗಾವಿ: 19ನೇ ಶತಮಾನದಲ್ಲಿಯೇ ಶಿಕ್ಷಣ ಕ್ರಾಂತಿ ಆರಂಭಿಸಿ ಈಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಕೆಎಲ್‍ಇ ಸಂಸ್ಥೆ ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ಗೌರವನ್ನು ವಿಶ್ವದಾದ್ಯಂತ ಪಸರಿಸುತ್ತಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತ ಸಮಾಜದ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ, ತಂತ್ರಜ್ಞಾನ, ಸಂಶೋಧನೆ ಹಾಗೂ ವೈದ್ಯಕೀಯ ಸೇವೆ ನೀಡುತ್ತ ಸಶಕ್ತ ಸಮಾಜದಲ್ಲಿ ನಿರ್ಮಾಣವಾಗಿರುವದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಕೇಂದ್ರದ ಸಾರಿಗೆ ಸಚಿವ ನಿತಿನ ಗಡಕರಿ ಅವರಿಂದಿಲ್ಲಿ ಶ್ಲಾಘಿಸಿದರು. ಕೆಎಲ್‍ಇ ಸಂಸ್ಥೆಯ …

Read More »

ಸಹಕಾರಿ ಕ್ಷೇತ್ರಕ್ಕೆ ಲಕ್ವಾ.. ಹೊಡೆದಿದೆ..ಬೇಗ ಫತ್ವಾ ಹೊರಡಿಸಿ..!

ಬೆಳಗಾವಿ- ಗ್ರಾಮೀಣ ಭಾಗದ ಶೇ ೮೦ ರಷ್ಟು ಜನ ಕೋ ಆಪರೇಟಿವ ಸೊಸಾಯಿಟಿಗಳ ಮೇಲೆ ಅವಲಂಭಿತರಾಗಿದ್ದಾರೆ ಸೊಸಾಯಿಟಿಗಳಿಗೆ ಹಳೆಯ ನೋಟು ಸ್ವಿಕರಿಸುವ ಅನುಮತಿ ಕೊಡದೆ ಹೊಸ ನೋಟುಗಳನ್ನು ಬಿಡುಗಡೆ ಮಾಡದೇ ಇರುವದರಿಂದ ಸಹಕಾರಿ ಕ್ಷೇತ್ರಕ್ಕೆ ಲಕ್ವಾ ಹೊಡೆದಂತಾಗಿದೆ ಕೂಡಲೇ ಕೇಂದ್ರ ಸರ್ಕಾರ ಸೊಸಾಯಿಟಿಗಳ ರಕ್ಷಣೆಗೆ ಧಾವಿಸಬೇಕು ಎಂದು ಸೊಸಾಯಿಟಿಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಸೊಸಾಯಿಟಿಗಳಿದ್ದು ರಿಸರ್ವ ಬ್ಯಾಂಕ ಮಾರ್ಗಸೂಚಿಯಿಂದಾಗಿ ಸೊಸಾಯಿಟಿಗಳಿಗೆ ಹೊಸ …

Read More »