Breaking News

Breaking News

ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆ 37 ಅಭ್ಯರ್ಥಿಗಳು ಕಣದಲ್ಲಿ

ಬೆಳಗಾವಿ : ಕೋವೀಡ್ ನಿಯಮಾವಳಿಗಳು ಜಾರಿಯಲ್ಲಿರುವಾಗ ನಿಯಮಾವಳಿಗಳ ಪ್ರಕಾರ ಮಲ್ಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಗದ್ದುಗೆ ಇಂದು ಬಿರುಸಿನಿಂದ ಮತದಾನ ನಡೆಯುತ್ತಿದೆ. ಕಿತ್ತೂರು ಕ್ಷೇತ್ರದ ಜೀವನಾಡಿಯಾಗಿದ್ದ ಈ ಕಾರ್ಖಾನೆ ಆರ್ಥಿಕವಾಗಿ ದಿವಾಳಿಯಾಗಿದೆ,ಇಷ್ಟು ದಿನ ಈ ಕಾರ್ಖಾನೆಯಲ್ಲಿ ದರ್ಬಾರ್ ಮಾಡಿದ ಘಟಾನುಘಟಿ ನಾಯಕರು ಚುನಾವಣೆಯಿಂದ ದೂರ ಉಳಿದಿದ್ದು,ಖಾನಾಪೂರ ಕ್ಷೇತ್ರದ ಜೆಡಿಎಸ್ ಧುರೀಣ ನಾಸೀರ ಬಾಗವಾನ್,ಮತ್ತು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲರ ಪುತ್ರ ಪ್ರಕಾಶ್ ಗೌಡ ಪಾಟೀಲ ನೇತ್ರತ್ವದ …

Read More »

ಬೆಳಗಾವಿಯಲ್ಲಿ ಡೋಂಟ್ ಕೇರ್ ರೂಲ್ ಜಾರಿಯಲ್ಲಿದೆ,ಪ್ಲೀಸ್ ಡೋಂಟ್ ಡಿಸ್ಟರ್ಬ್….!!

ಬೆಳಗಾವಿ- ಜೀವ ಅಂದ್ಮೇಲೆ ಹೊಟ್ಟೆಗೆ ಹಿಟ್ಡು ನೀರು ನಿದ್ದೆ ಬೇಕೆ ಬೇಕು ಆದ್ರೆ ಮನುಷ್ಯನಿಗೆ ಇಲ್ಲೇ ಊಟ ಇಲ್ಲೇ ನಿದ್ದೆ ಅನ್ನೋ ಸ್ಥಳ ಮತ್ತು ಸಮಯ ನಿಗದಿ ಆಗಿರುತ್ತೆ. ಪಾಪ ಮೂಕ ಜೀವಿಗೆ ಇದು ಡಿಸಿ ಕಚೇರಿ ಇಲ್ಲಿ ಮಲಗಬಾರದು,ಇಲ್ಲಿ ಮಲಗಿದ್ರೆ ಕೇಸ್ ಹಾಕ್ತಾರೆ ಅನ್ನೋದು ಗೊತ್ತೆ ಇಲ್ಲ,ಪೋಲೀಸರ ಹೆದರಿಕೆಯೂ ಅವರಿಗಿಲ್ಲ,ಎಲ್ಲೋ ಹೊಟ್ಟೆತುಂಬ ತಿಂದು ಬಂದ್ಮೇಲೆ ನಿದ್ದೆ ಬಂದಿದೆ,ಹೀಗಾಗಿ ಅವರು ಡಿಸಿ ಕಚೇರಿ ಆವರಣದಲ್ಲಿ ಮಲಗಿ, ರಿಲ್ಯಾಕ್ಸ್ ಮಾಡುತ್ತಿದ್ದ ದೃಶ್ಯ …

Read More »

ಬೆಳಗಾವಿಯಲ್ಲಿ ಲ್ಯಾಂಡ್‌ ಆಗದೇ ಮೂರು ವಿಮಾನಗಳು ವಾಪಸ್…..!

ಬೆಳಗಾವಿ- ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬೆಳಗಾವಿ ಜಿಲ್ಲೆಯಲ್ಲಿ ಭಯಾನಕ ಮಳೆ ಸುರಿಯುತ್ತಿರುವ ಪರಿಣಾಮ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮೂರು ವಿಮಾನಗಳು ಲ್ಯಾಂಡಿಂಗ್ ಆಗದೇ ವಾಪಸ್ ಆಗಿವೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಇಂದು ಸೋಮವಾರ ,ಹೈದ್ರಾಬಾದ,ತಿರುಪತಿ,ಮತ್ತು ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದವರೆಗೂ ಬಂದ ವಿಮಾನಗಳು ವಿಪರೀತ ಮಳೆ ಮತ್ತು ಮುಸುಕು ಇರುವ ಕಾರಣ ಹಿಂತಿರುಗಿ ಹೋಗಿವೆ‌. ಇಂದು ಬೆಳಿಗ್ಗೆ 8.50 ಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಸ್ಪೈಸ್ …

Read More »

ಲಂಚ ಪ್ರತಿಬಂಧಕ ಕಾಯ್ದೆ,ಕಾರ್ಯಾಗಾರ,ಆನ್ ಲೈನ್ ಉಪನ್ಯಾಸ

ಕಳಗಾವಿ, -: ಭ್ರಷ್ಟಾಚಾರ ನಿಗ್ರಹ ದಳ ಉತ್ತರ ವಲಯ, ಬೆಳಗಾವಿ ವತಿಯಿಂದ ಲಂಚ ಪ್ರತಿಬಂಧಕ ಕಾಯ್ದೆ-೧೯೮೮ (ತಿದ್ದುಪಡಿ-೨೦೧೮) ನೇದ್ದಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಕಾರ್ಯಾಗಾರ ಸುವರ್ಣ ವಿಧಾನಸೌಧದಲ್ಲಿ ಆರಂಭಗೊಂಡಿದೆ. ಬೆಂಗಳೂರಿನ ಎಸಿಬಿ ಕೇಂದ್ರ ಕಚೇರಿಯ ಐಜಿಪಿ ಎಂ. ಚಂದ್ರಶೇಖರ ಅವರು ಸೋಮವಾರ (ಅ.12) ಕಾರ್ಯಾಗಾರವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಬೆಳಗಾವಿಯ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ ಎನ್. ವ್ಹಿ., ರಾಜ್ಯ ಮಾಹಿತಿ ಆಯೋಗದ …

Read More »

ಡೈವೋರ್ಸ್ ಕೇಸ್ ವಾಪಸ್ ಪಡೆಯಲು ಕಲ್ಯಾಣ ಪತ್ನಿ ನಿರ್ಧಾರ

ಬೆಳಗಾವಿ- ಪ್ರೇಮಕವಿ ಕೆ.ಕಲ್ಯಾಣ ಕುಟುಂಬದಲ್ಲಿ ಈಗ ಮತ್ತೆ ಪ್ರೇಮಕಾವ್ಯ ಶುರುವಾಗಿದ್ದು ಕಲ್ಯಾಣ ಅವರ ಪತ್ನಿ ಡೈವೋರ್ಸ್ ಕೇಸ್ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಬೆಳಗಾವಿಯ ಹೊಟೇಲ್ ವೊಂದರಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಕೆ. ಕಲ್ಯಾಣ ಅವರ ಪತ್ನಿ ಮನೆಯಲ್ಲಿ ಕೆಲಸದವರನ್ನು ಇಡುವಾಗ ಅವರ ಬಗ್ಗೆ ಪೂರ್ಣವಾದ ಮಾಹಿತಿ ಪಡೆದುಕೊಳ್ಳಬೇಕು ಮನಯ ಕೆಲಸದವಳಿಂದ ನಾನು ಮೋಸ ಹೋದ ಹಾಗೆ ಬೇರೆ ಯಾರೂ ಮೋಸ ಹೋಗಬಾರದು,ಅವರು ಹೇಳಿದ್ದೆ ನಿಜ ಎಂದು ನಾನು ನಂಬಿಕೊಂಡಿದ್ದೆ ಆದ್ರೆ …

Read More »

ಎಂ.ಪಿ ಟಿಕೆಟ್,, ಅಮರನಾಥ ಜಾರಕಿಹೊಳಿ ಹೇಳಿದ್ದೇನು ಗೊತ್ತಾ….?

  *KMF ನಿರ್ದೇಶಕರಾದ ಶ್ರೀ ಅಮರ್ ನಾಥ್ ರಮೇಶ್ ಜಾರಕಿಹೊಳಿ‌ ಅವರ ಹೇಳಿಕೆ* ನಾನು ವಯಸ್ಸಿನಲ್ಲಿ ತುಂಬಾ ಚಿಕ್ಕವನು. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ ಇನ್ನೂ ಸಾಕಷ್ಟು ಕೆಲಸ‌ ಮಾಡುವ ಮನಸ್ಸಿದೆ. ನನ್ನ ತಂದೆಯವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಗೋಕಾಕ್ ಕ್ಷೇತ್ರದ ಸಾರ್ವಜನಿಕರ ಕುಂದು‌ ಕೊರತೆಗಳನ್ನು ಆಲಿಸಿ ; ಸಮಸ್ಯೆಗಳನ್ನು ಪರಿಹರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಸನ್ಮಾನ್ಯ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿಯವರು …

Read More »

ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ ನಿಲುವು ಸ್ಪಷ್ಟಪಡಿಸಿ

ಬೆಳಗಾವಿ ರಾಜ್ಯದಲ್ಲಿರುವ ವಿವಿಯಿಂದ ಪರೀಕ್ಷೆ ನಡೆಸುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸರಕಾರ ಮತ್ತು ವಿವಿಯ ನಡುವೆ ಸಮನ್ವಯತೆ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆಗ್ರಹಿಸಿ ಸೋಮವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೆಲ ವಿಶ್ವವಿದ್ಯಾಲಯಗಳು ಪಠ್ಯಕ್ರಮವನ್ನು ಬದಲಾವಣೆ ಮಾಡಿದ್ದಾರೆ. ಅವು ಇಲ್ಲಿಯವರೆಗೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಕೈಗೆ ಸೇರಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಿಂದಿನ ಸೆಮಿಸ್ಟರ್ ಅಧ್ಯಯನ ಮಾಡಬೇಕೋ ಅಥವಾ ಈಗೀನ ಸಮಿಸ್ಟರ್ …

Read More »

ಮೈಯ್ಯಾಗ ದೇವರು ಬಂದಿದ್ದ….ಆರು ಕೋಟಿ ಆಸ್ತಿ ನುಂಗಿದ್ದ….!

ಬೆಳಗಾವಿ- ರಿಮೋಟ್ ಕಂಟ್ರೋಲ್ ಯುಗದಲ್ಲೂ ಜನ ಮಾಟ ಮಂತ್ರಕ್ಕೆ ಕಂಟ್ರೋಲ್ ಕಳೆದುಕೊಳ್ಳುತ್ತಾರೆ ಅಂದ್ರೆ ನಂಬಲಾಗುತ್ತಿಲ್ಲ,ಪ್ರೇಮ ಕವಿ ಕೆ.ಕಲ್ಯಾಣ ಕುಟುಂಬದಲ್ಲಿ ಮಾಟ ಮಂತ್ರದ ಪ್ರಭಾವ ಬೀರೀದ್ದು ಮೈಯ್ಯಾಗ ಬಂದ ದೇವ್ರು ಆರು ಕೋಟಿ ಆಸ್ತಿ ನುಂಗಿದ ರೋಚಕ ಕಹಾನಿ ಈಗ ಬಯಲಾಗಿದೆ ಮಾಟ,ಮಂತ್ರವಾದಿ ಶಿವಾನಂದ ವಾಲಿಯ ಆಟ ಬೀಳಗಿಯಿಂದ ಡೈರೇಕ್ಟ್ ಬೆಂಗಳೂರಿಗೆ ತಲುಪಿದೆ,ಬೀಳಗಿಯ ಮಂತ್ರವಾದಿ,ಶಿವಾನಂದ ವಾಲಿ ಕೆ.ಕಲ್ಯಾಣ ಅವರ ಮನೆಯ ಕೆಲಸದವಳನ್ನು ಪಟಾಯಿಸಿ ನಂತರ ಕೆ.ಕಲ್ಯಾಣ ಮನೆಗೆ ಹೋಗಿ, ಮಾಟ ಮಂತ್ರ …

Read More »

ಶಿವಾನಂದ ವಾಲಿ,ಮಾಟ ಮಾಡಿ ,5 ರಿಂದ 6 ಕೋಟಿ ಕೆ.ಕಲ್ಯಾಣ ಆಸ್ತಿ ಕಬಳಿಕೆ.

ಬೆಳಗಾವಿ-ಶಿವಾನಂದ ವಾಲಿ,ಮಾಟ ಮಾಡಿ ,5 ರಿಂದ 6 ಕೋಟಿ ಕೆ.ಕಲ್ಯಾಣ ಆಸ್ತಿ ಕಬಳಿಕೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಕಾನೂನು ಸುವ್ಯವಸ್ಥೆಯ ಡಿಸಿಪಿ ಡಾ.ವಿಕ್ರಮ್ ಆಮಟೆ ತಿಳಿಸಿದ್ದಾರೆ. ಸೋಮವಾರ ಮಾಳಮಾರುತಿ ಠಾಣೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪ್ರೇಮಕವಿ, ಸಾಹಿತಿ ಕೆ.ಕಲ್ಯಾಣ ದಾಂಪತ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆಯಲ್ಲಿ ಚಿಟಿಂಗ್ ಮತ್ತು ಅಪಹರಣ ದೂರು ದಾಖಲಿಸಿದ ಪರಿಣಾಮ ಗಡ್ಡೇಕರ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಿ ಕಲ್ಯಾಣ ಅವರ ಪತ್ನಿ ಹಾಗೂ …

Read More »

ಬೆಳಗಾವಿಯಲ್ಲಿ ಜನಜಾಗೃತಿಗಾಗಿ ಸೈಕಲ್ ರ್ಯಾಲಿ

ಬೆಳಗಾವಿ- ಬೆಳಗಾವಿಯಲ್ಲಿ,ವ್ಯಸನಮುಕ್ತ ಭಾರತ,ಡ್ರಗ್ಸ್ ಮುಕ್ತ ಭಾರತ,ಫಿಟ್ ಇಂಡಿಯಾ,ಕೊರೋನಾ ಮುಂಜಾಗೃತಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು,ಕೆ ಎಸ್ ಆರ್ ಪಿ ಪೋಲೀಸ್ ಮತ್ತು ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಗಾವಿಯಲ್ಲಿ ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಚನ್ನಮ್ಮನ ವೃತ್ತದಲ್ಲಿ ಬೆಳಗಾವಿ ನಗರ ಪೋಲೀಸ್ ಆಯುಕ್ತರು,ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ,ರ್ಯಾಲಿಗೆ ಹಸಿರು ನಿಶಾನೆ ತೋರಿಸಿದರು, ವಿವಿಧ ವಿಷಯಗಳ ಕುರಿತು ಜನಜಾಗೃತಿ ಮೂಡಿಸುವ ಸೈಕಲ್ ರ್ಯಾಲಿ ಯಲ್ಲಿ ಪೋಲೀಸ್ ಅಧಿಕಾರಿಗಳು ಗಣ್ಯರು ಭಾಗವಹಿಸಿದ್ದರು. …

Read More »
Sahifa Theme License is not validated, Go to the theme options page to validate the license, You need a single license for each domain name.