ಬೆಳಗಾವಿ-ಬೆಳಗಾವಿ ಜಿಲ್ಲೆ ವಿಭಜನೆ ಯಾವಾಗ ? ಎಂದು ಬೆಳಗಾವಿಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡಿದಾಗ,ಕೈ ಮುಗಿದು ಸಿಎಂ ಹೊರಟೇ ಬಿಟ್ಟರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಮಾರ್ಗದರ್ಶನ ಮಾಡಲು ಇಂದು ಅರುಣ್ ಸಿಂಗ್ ರಾಜ್ಯಕ್ಕೆ. ಮೊದಲ ಸಹ ಉಸ್ತುವಾರಿಯಾದ ಬಳಿಕ ಬರ್ತಿದ್ದಾರೆ, ಇಂದು, ನಾಳೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡುತ್ತೇವೆ ರಾಜ್ಯದ ಅಧ್ಯಕ್ಷರ ಸಮಸಕ್ಷಮ ಚರ್ಚೆ ಮಾಡುತ್ತೇವೆ. …
Read More »ಈ ಬಾರಿಯೂ ನಡೆಯಲಿದೆ, ಮೌಢ್ಯ ವಿರೋಧಿ ಪರಿವರ್ತನಾ ದಿನ”
ಗೋಕಾಕ: ಸನ್ಮಾನ್ಯ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರತಿ ವರ್ಷ ನಡೆಯುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನದಂದು (ಡಿ.6) ಆಚರಿಸಲಾಗುವ “ಮೌಢ್ಯ ವಿರೋಧಿ ಪರಿವರ್ತನಾ ದಿನ” ಕಾರ್ಯಕ್ರಮವನ್ನು ಗೋಕಾಕನ ಮರಾಠ ಸಮಾಜದ ಸ್ಮಶಾನ ಭೂಮಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕರಾದ ರವೀಂದ್ರ ನಾಯ್ಕರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯಾದ್ಯಂತ ಜನ ಸಮುದಾಯಲ್ಲಿ ವೈಚಾರಿಕ ಜಾಗೃತಿ ಮತ್ತು …
Read More »ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಪುನರ್ ಕಟ್ಟುವ ಬಗ್ಗೆ ವ್ಯಾಪಕ ಚರ್ಚೆ- ಸತೀಶ್ ಜಾರಕಿಹೊಳಿ
ಬೆಳಗಾವಿ-ಬೆಂಗಳೂರಿನಲ್ಲಿ ಆತ್ಮಾವಲೋಕನ ಸಭೆ ಬಗ್ಗೆ ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಪ್ರತಿಕ್ರಿಯೆ ನೀಡಿದ್ದಾರೆ ಬೆಳಗಾವಿಯಲ್ಲಿ ಅವರನ್ನು ಭೇಟಿಯಾದ ಮಾದ್ಯಮ ಮಿತ್ರರ ಜೊತೆ ಮಾತನಾಡಿದಾವರು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಪುನರ್ ಕಟ್ಟುವ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.ಪಕ್ಷದಲ್ಲಿ ಕೆಲ ಬದಲಾವಣೆ ತರುವ ಬಗ್ಗೆ ಸಭೆಯಲ್ಲಿ ನಾಯಕರು ಸಲಹೆ ನೀಡಿದ್ದಾರೆ. ಭವಿಷ್ಯದಲ್ಲಿ ಬದಲಾವಣೆ ಮಾಡಿದರೆ ಮಾತ್ರ ಪಕ್ಷಕ್ಕೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಸೂಕ್ತ …
Read More »ಡಿಸಿ ಹೆಗಲ ಮೇಲೆ ಕಂಬಳಿ, ತಲೇ ಮೇಲೆ ಹಳದಿ ಪೇಟಾ…!!!
ಕನಕದಾಸರ ತತ್ವಗಳು ಇಡೀ ಜಗತ್ತಿಗೆ ತಲುಪಲಿ: ಜಿಲ್ಲಾಧಿಕಾರಿ ಹಿರೇಮಠ ಬೆಳಗಾವಿ, ಡಿ.3(ಕರ್ನಾಟಕ ವಾರ್ತೆ): ಕನಕದಾಸರು ಜಾತಿಮತ ಮೀರಿ ಬೆಳೆದವರು. ಸಮಾಜ ಸುಧಾರಣೆಯಲ್ಲಿ ಕನಕ ದಾಸರ ಕೀರ್ತನೆಗಳು ಹಾಗೂ ತತ್ವಗಳು ಇಂದಿಗೂ ಪ್ರಭಾವಶಾಲಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ(ಡಿ. 3) ಬೆಳಗಾವಿಯ ಬಸವರಾಜ್ ಕಟ್ಟಿಮನಿ ಸಭಾಂಗಣದಲ್ಲಿ ಆಯೋಜಸಲಾಗಿದ್ದ ಶ್ರೀ …
Read More »ಗಡ್ಡೇಕರ್ ತೋರಿಸಿದ್ರು ಖಾಕಿ ಖದರ್…,ಸುಪಾರಿ ಕಮ್ ಆರೋಪಿ ಅಂದರ್…!!!
ಬೆಳಗಾವಿಯ ರೌಡಿಯ ಬರ್ಬರ ಹತ್ಯೆ ಕೇಸ್;ಸುಪಾರಿ ಕೊಟ್ಟವ ಅರೆಸ್ಟ್ ಬೆಳಗಾವಿ: ಬೆಳಗಾವಿಯಲ್ಲಿ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ರೌಡಿಯ ಹತ್ಯೆ ಪ್ರಕರಣ ಸಂಬಂಧ ಮಾಳಮಾರುತಿ ಠಾಣೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಲಕ್ಷ್ಮಣ ದಡ್ಡಿ (55) ಬಂಧಿತ ಆರೋಪಿ. ಅಕ್ಟೋಬರ್ 26 ಮಧ್ಯರಾತ್ರಿ ಸ್ನೇಹಿತನ ಪುತ್ರನ ಮಗನ ಬರ್ತಡೆ ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿದ್ದ ರೌಡಿ ಶಹಬಾಜ್ ಪಠಾಣ್ ನನ್ನು ಬೆನ್ನೆತ್ತಿ ಕೊಲೆ ಮಾಡಲಾಗಿತ್ತು. …
Read More »ಬೆಳಗಾವಿಯಿಂದ ಮೋದಿ,ಅಮೀತ್ ಶಾ ಹೆಸರು ಪ್ರಸ್ತಾಪ ಆಗುವದಷ್ಟೇ ಬಾಕಿ….
ಬೆಳಗಾವಿ-ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ,ಆದ್ರೆ ಆಕಾಂಕ್ಷಿಗಳ ಪಡ್ಟಿ ದಿನದಿಂದ ದಿನಕ್ಕೆ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಸುಮಾರು 70 ಕ್ಕಿಂತ ಹೆಚ್ವು ಜನ ಆಕಾಂಕ್ಷಿಗಳು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸಲು ರೆಡಿಯಾಗಿದ್ದು ಬಿಜೆಪಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ದೆ ಮಾಡ್ತಾರೆ,ಇವರು ಸ್ಪರ್ದೆ ಮಾಡುತ್ತಾರೆ ಎಂಬ ಸುದ್ಧಿಗಳು ಹರದಾಡುತ್ತಲೇ ಇದೆ,ಕೆಲ ದಿನಗಳ ಹಿಂದಷ್ಟೇ ಜಗದೀಶ್ ಶೆಟ್ಟರ್ …
Read More »ಪವಿತ್ರ ಭೇಟಿ,ಮತ್ತು 400 ಕೋಟಿ
*ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರಿಂದ ಜಲಸಂಪನ್ಮೂಲ ಸಚಿವ ಜಾರಕಿಹೊಳಿ ಭೇಟಿ;ವಿವಿಧ ವಿಷಯಗಳ ಕುರಿತು ಚರ್ಚೆ* ಬೆಳಗಾವಿ,ಡಿ. 03(ಕರ್ನಾಟಕ ವಾರ್ತೆ): ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರನ್ನು ಗುರುವಾರ ಭೇಟಿ ಮಾಡಿ ಅಭಿನಂದಿಸಿದರು. ನಂತರ ಪ್ರಾಧಿಕಾರದ ವ್ಯಾಪ್ತಿಯ ಅಚ್ಚುಕಟ್ಟು ಭಾಗದ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ, ಅಧಿಕಾರಿಗಳು ರಚಿಸಿರುವ …
Read More »ಬಿಜೆಪಿ ಕಾರ್ಯಕಾರಿಣಿ ಗೆ ಬೆಳಗಾವಿಯಲ್ಲಿ ಜಬರದಸ್ತ್ ತಯಾರಿ…!!
ಬೆಳಗಾವಿ- ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ಡಿಸೆಂಬರ್ 5 ರಂದು ಬೆಳಗಾವಿಯಲ್ಲಿ ನಡೆಯಲಿದ್ದು ಅದಕ್ಕಾಗಿ ಬೆಳಗಾವಿಯಲ್ಲಿ ಜಬರದಸ್ತ್ ತಯಾರಿ ನಡೆದಿದೆ. ಬೆಳಗಾವಿಯ ಕಾಲೇಜು ರಸ್ತೆಯಲ್ಕಿರುವ ಗಾಂಧಿ ಭವನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸಿಟಿ ರವಿ, ಸೇರಿದಂತೆ ಬಿಜೆಪಿಯ ವರಿಷ್ಠ ನಾಯಕರು ಬೆಳಗಾವಿ ಗೆ ಆಗಮಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಜಿಲ್ಲೆಯ ಸಚಿವರು,ಕಾರ್ಯಕಾರಿಣಿ ಸಭೆಗೆ ಎಲ್ಲ …
Read More »ಪಂಚಾಯತಿ ಚುನಾವಣೆ ಘೋಷಣೆ,ಆಕ್ರಮ ಮದ್ಯ ತಡೆಗೆ ಕಂಟ್ರೋಲ್ ರೂಂ ಸ್ಥಾಪನೆ
ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರು ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ -2020 ಘೋಷಣೆ ಮಾಡಿದ್ದು , ಅದರನ್ವಯ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಪ್ರಯುಕ್ತ ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳ ಭಟ್ಟಿ ಸರಾಯಿ, ಹೊರ ರಾಜ್ಯದ ಮದ್ಯವು ಸಾಗಾಣಿಕೆ ಹಾಗೂ ಮಾರಾಟ ಆಗುವ ಸಂಭವ ಇರುವುದರಿಂದ ಸಾರ್ವಜನಿಕರು ಇದನ್ನು ಕುಡಿಯುವುದರಂದ ಸಾವು ನೋವು ಸಂಭವಿಸಬಹುದಾಗಿರುತ್ತದೆ. ಆದ ಕಾರಣ ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು …
Read More »ಬೆಳಗಾವಿಯ ಅಂಗಡಿಗಳ ಮೇಲೆ ಅಧಿಕಾರಿಗಳ ಅಟ್ಯಾಕ್….
ಬೆಳಗಾವಿ- ಬೆಳಗಾವಿ ನಗರ ಪ್ರದೇಶದಲ್ಲಿರುವ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ತಂಡ ಅನಿರೀಕ್ಷಿತವಾಗಿ ದಾಳಿ ಮಾಡಿ ಮೂವರು ಬಾಲ ಕಾರ್ಮಿಕರನ್ನು ಪತ್ತೆ ಮಾಡಿದ್ದಾರೆ. ಬೆಳಗಾವಿಯ ವಿವಿಧ ಅಂಗಡಿ, ಹೋಟೇಲ, ವಾಣಿಜ್ಯ ಸಂಸ್ಥೆಗಳು, ಬಾರ್ ಹಾಗೂ ರೆಸ್ಟೋರೆಂಟ್ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕಪಾಸಣೆ ಮಾಡಿದ ಅಧಿಕಾರಿಗಳು ತಪಾಸಣಾ ಸಮಯ ಸಂಸ್ಥೆಯಲ್ಲಿರುವ ಮಾಲೀಕರಿಗೆ ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳದಂತೆ, ತಿಳುವಳಿಕೆ ಹೇಳಿ ಭಿತ್ತಿ ಪತ್ರಗಳನ್ನು ಸಂಸ್ಥೆಯಲ್ಲಿ ಅಂಟಿಸಿದರು. ತಂಡದಲ್ಲಿ ಕಾರ್ಮಿಕ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ