Breaking News
Home / Breaking News (page 245)

Breaking News

ಬೆಳಗಾವಿಯ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಬೆಳಗಾವಿ- smart city ಯೋಜನೆಯಡಿ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ಮಾರ್ಗಗಳ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಸೋಮವಾರ (ಡಿ.೧೪) ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೫.೩೦ ಘಂಟೆಯವರೆಗೆ ೩೩ ಕೆ.ವ್ಹಿ. ಸದಾಶಿವ ನಗರ ಉಪಕೇಂದ್ರದಿಂದ ವಿತರಣೆಯಾಗುವ ಕಂಗ್ರಾಳಿ ಕೆ.ಎಚ್ ಹಾಗೂ ಅಲತಗಾ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಅದೇ ರೀತಿ ಹು.ವಿ.ಸ.ಕಂ.ನಿ. ವತಿಯಿಂದ ತುರ್ತು ನಿರ್ವಹಣೆಯಿಂದ ಬೆಳಿಗ್ಗ್ಗೆ ೧೦ ಘಂಟೆಯಿಂದ ಸಂಜೆ ೪ ಘಂಟೆಯವರೆಗೆ ೧೧೦ ಕೆ.ವ್ಹಿ. ಉಚಗಾಂವ ಉಪಕೇಂದ್ರದಿಂದ …

Read More »

ಬೆಳಗಾವಿಯಲ್ಲಿ,ಖಾಕಿಗೆ ಖಾಕಿ ಸಾಥ್…!!!!

ಬೆಳಗಾವಿಯಲ್ಲಿ,ಖಾಕಿಗೆ ಖಾಕಿ ಸಾಥ್… ಸಾರಿಗೆ ನೌಕರರ ಜೋಳಿಗೆಯಲ್ಲಿ ಖಾಸ್ ಬಾತ್.. ಬೆಳಗಾವಿ- ಬೆಳಗಾವಿಯಲ್ಲಿ ಸಾರಿಗೆ ನೌಕರರ ಮುಷ್ಕರ ಇಂದು ಬೆಳಿಗ್ಗೆಯಿಂದಲೇ ಮುಂದುವರೆದಿದ್ದು ಇವರ ಹೋರಾಟ ಕ್ಷಣ ಕ್ಷಣಕ್ಕೂ ಹೊಸ ಆಯಾಮ,ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಸಾರಿಗೆ ನೌಕರರು ರಾಜ್ಯವ್ಯಾಪಿ ಹೋರಾಟ ನಡೆಸಿದ್ದು,ಬೆಳಗಾವಿಯಲ್ಲೂ ಇವರ ಹೋರಾಟ ತೀವ್ರಸ್ವರೂಪ ಪಡೆದುಕೊಂಡಿದೆ. ಇಂದು ಬೆಳಿಗ್ಗೆಯಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ,ಊಟ,ಉಪಹಾರದ ವ್ಯೆವಸ್ಥೆ ಮಾಡಲು ಜೋಳಗಿ …

Read More »

ಬೆಳಗಾವಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ

ಬೆಳಗಾವಿ- ಬೆಳಗಾವಿಯಲ್ಲಿ ಬೆಳಗ್ಗೆಯಿಂದ ಸಾರಿಗೆ ನೌಕರರ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಓಡಾಡುತ್ತಿದ್ದ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಕೋಟೆ ಕೆರೆ ಬಳಿ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ ಬೆಳಗಾವಿ- ಸಂಕೇಶ್ವರ ಮಾರ್ಗದ ಬಸ್ ಮೇಲೆ ಕಲ್ಲು ತೂರಾಟ ನಡೆದಿದ್ದು ಸ್ಥಳಕ್ಕೆ ಪೋಲೀಸರು ದೌಡಾಯಿಸಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ಧಾಣದಲ್ಲಿ ಸಾರಿಗೆ ನೌಕರರು ಬಸ್ ನಿಲ್ಲಿಸಿ ಹೋರಾಟ ಮಾಡುತ್ತಿರುವ ಸಮಯದಲ್ಲೇ ಬಸ್ …

Read More »

ಬೆಳಗಾವಿಯಲ್ಲಿ ,ನೀಲಿ ವಿರುದ್ಧ ಖಾಕಿ ಕಿಚ್ಚು….!!!

ಬೆಳಗಾವಿ-ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಹೋರಾಟ ಜೋರಾಗಿಯೇ ನಡೆದಿದೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಗಳನ್ನು ನಿಲ್ಲಿಸಿ ಹೋರಾಟ ಆರಂಭಿಸಿರುವ ಸಾರಿಗೆ ನೌಕರರು ಹೊಟ್ಟೆಯ ಮೇಲೆ ಕಲ್ಲಿಟ್ಟು,ಅರಬೆತ್ತಲೆಯಾಗಿ ಹೋರಾಟ ನಡೆಸಿದ್ದಾರೆ‌. ಸಾರಿಗೆ ನೌಕರರು ನಡೆಸಿರುವ ಹೋರಾಟಕ್ಕೆ ವಿವಿಧ ರೈತಪರ ಸಂಘಟನೆಗಳು,ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಇಂದು ಬೆಳಿಗ್ಗೆಯಿಂದಲೇ ಪ್ರಯಾಣಿಕರು ಪರದಾಡುತ್ತಿದ್ದಾರೆ.ಬೆಳಗಾವಿ ನಗರ ಕರ್ನಾಟಕ,ಗೋವಾ,ಮಹಾರಾಷ್ಡ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿದ್ದು,ಬೆಳಗಾವಿಯಿಂದ ಗೋವಾ,ಮತ್ತು ಮಹಾರಾಷ್ಟ್ರಕ್ಕೆ ಹೋಗುವ ಪ್ರಯಾಣಿಕರು ಕಂಗಾಲಾಗಿದ್ದು,ದೂರದ …

Read More »

ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ ಓರ್ವನ ಬಂಧನ

ಬೆಳಗಾವಿ ಸಾರಿಗೆ ನೌಕರರ ಪ್ರತಿಭಟನೆಯ ವೇಳೆ ಸುದ್ದಿ ಮಾಡಲು ತೆರಳಿದ್ದ ಖಾಸಗಿ ವಾಹಿನಿಯ ಕ್ಯಾಮರಾ ಮನ್ ರವಿರಾಜ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ. ಸಾರಿಗೆ ನೌಕರರನ್ನು ಖಾಯಂ ಸರಕಾರಿ ನೌಕರರೆಂದ ಪರಿಗಣಿಸಿ ಹೋರಾಟ ನಡೆಸುತ್ತಿದ್ದ ವೇಳೆ ಸುದ್ದಿಗೆಂದು ತೆರಳಿದ್ದ ಖಾಸಗಿ ಸುದ್ದಿವಾಹಿನಿಯ ಕ್ಯಾಮರಾ ಮನ್ ಮೇಲೆ ಸ್ಟೋರ್ ಕೀಪರ್‌ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಕೂಡಲೇ ಅವನನ್ನು ಮಾರ್ಕೇಟ್ ಪೊಲೀಸ್ ರು ಹಲ್ಲೆ ನಡೆಸಲು ಯತ್ನಿಸಿದ್ದ ವ್ಯಕ್ತಿಯನ್ನು …

Read More »

ಪಗಾರ ಕೊಡಲಿಲ್ಲ ಅಂತಾ,ಡಿಸಿ ಕಚೇರಿ ಮೇಲಿಂದ ಜಿಗಿಯಲು ಹೊರಟಿದ್ದ….

ಬೆಳಗಾವಿ-ಪಗಾರ ಕೊಡಲಿಲ್ಲ ಅಂತಾ,ಡಿಸಿ ಕಚೇರಿ ಮೇಲಿಂದ ಜಿಗಿಯಲು ಹೊರಟಿದ್ದ ಸಕ್ಕರೆ ಕಾರ್ಖಾನೆಯ ನೌಕರನನ್ನು ಪೋಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ರಾಯಬಾಗದ ರೇಣುಕಾ ಶುಗರ್ ಕಾರ್ಖಾನೆಯವರು ಆರು ತಿಂಗಳಿಂದ ವೇತನ ನೀಡಿಲ್ಲ ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮನನೊಂದು ಬೆಳಗಾವಿಯ ಡಿಸಿ ಕಚೇರಿ ಕಟ್ಟಡ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ನೌಕರ ಈಗ ಪೋಲೀಸರ ಅತಿಥಿ ಶುಕ್ರವಾರ ಕೇರಳದ ಮೂಲದ ವ್ಯಕ್ತಿಯೊಬ್ಬ ನಗರದ ಜಿಲ್ಲಾಧಿಕಾರಿ ಕಚೇರಿ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ‌. …

Read More »

ಬೆಳಗಾವಿಯಲ್ಲಿ ಕೊರೊನಾ‌ ಯೋಧರಿಗೆ ಸನ್ಮಾನ

ಬೆಳಗಾವಿ -: ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಮುಖ್ಯ ಉದ್ದೇಶ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ಆದರೆ ಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗುವ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕಿವಿಮಾತು ಹೇಳಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ‌ ಶಾಖೆ, ಗೃಹರಕ್ಷಕದಳ ಮತ್ತು ಪೌರರಕ್ಷಣೆ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಗುರುವಾರ (ಡಿ.10) ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ …

Read More »

ಬೆಳಗಾವಿಯಲ್ಲಿ ಧಿಡೀರ್ ಬಸ್ ಬಂದ್,ಸಾರಿಗೆ ನೌಕರರ ಮುಷ್ಕರ.

ಬೆ ಬೆಳಗಾವಿ- ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಗಣಿಸುವಂತೆ ಆಗ್ರಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಹೋರಾಟ ನಡೆದಿದ್ದು ಬೆಳಗಾವಿಯ ಸಾರಿಗೆ ನೌಕರರು ಈ ಹೋರಾಟಕ್ಕೆ ಬೆಂಬಲ ವ್ಯೆಕ್ತ ಪಡಿಸಿ ಇಂದು ಬೆಳ್ಳಂ ಬೆಳಗ್ಗೆ ಮುಷ್ಕರ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಬೆಳಗಾವಿಯ ನಗರ ಸಾರಿಗೆ,ಮತ್ತು ಕೇಂದ್ರ ಬಸ್ ನಿಲ್ಧಾಣದಲ್ಲಿ ,ಹಾಗೂ ನಗರದ ಎಲ್ಲ ಡಿಪೋಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ನೌಕರರು ಧಿಢೀರ್ ಮುಷ್ಕರ ಆರಂಭಿಸಿದ್ದಾರೆ. ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲಿ ಸಾವಿರಾರು ನೌಕರರು ಸೇರದ್ದು,ಸರ್ಕಾರ …

Read More »

ಹಿಂಡಲಗಾ ಜೈಲಿಗೆ ಬಂದಿದ್ರು ವಿನಯ್ ಕುಲಕರ್ಣಿ ಕುಟುಂಬಸ್ಥರು

ವಿನಯ್ ಕುಲಕರ್ಣಿ ಭೇಟಿಗೆ ಕುಟುಂಬಸ್ಥರಿಗೆ ಅವಕಾಶ ಬೆಳಗಾವಿ-ಕೊಲೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೊಳಗಾಗಿ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗೆ ಮಾನ್ಯ ನ್ಯಾಯಾಲಯ ಕುಲಕರ್ಣಿ ಕುಟುಂಬಸ್ಥರಿಗೆ ಅವಕಾಶ ನೀಡಿತ್ತು. ಧಾರವಾಡ ಮೂರನೇ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯದಿಂದ ಅವಕಾಶ ದೊರೆತ ಹಿನ್ನಲೆಯಲ್ಲಿ, ಈ ಸಂಬಂಧ ಜೈಲು ಅಧೀಕ್ಷಕರಿಗೆ ಪತ್ರ ರವಾನೆ ಆಗಿತ್ತು, ಇಂದು ಸಂಜೆ 4 ಗಂಟೆಯಿಂದ 5 ಗಂಟೆ ಮಧ್ಯದೊಳಗೆ ಭೇಟಿಗೆ ಅವಕಾಶ ನೀಡಲಾಗಿತ್ತು …

Read More »

ರಸ್ತೆಯಲ್ಲಿ ಲಂಚ್….ಕೇಂದ್ರದ ಕೃಷಿ ನೀತಿಗೆ, ಪಂಚ್…!!!

ರಸ್ತೆಯಲ್ಲೇ ಅಡುಗೆ, ರಸ್ತೆಯಲ್ಲೇ ಊಟ…!!! ಬೆಳಗಾವಿ-/ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು, ಬೆಳಗಾವಿಯ ಸುವರ್ಣಸೌಧ ಎದುರು ಪ್ರತಿಭಟನೆ ನಡೆಸಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ರೈತರ ಧರಣಿ ಮುಂದುವರೆದಿದೆ. ರೈತರು, ರಸ್ತೆಯಲ್ಲಿ ಅಡುಗೆ ಮಾಡಿಕೊಂಡು, ಎನ್‌ಹೆಚ್‌4 ಪಕ್ಕದ ಸರ್ವೀಸ್ ರಸ್ತೆಯಲ್ಲಿಯೇ ಕುಳಿತು ಊಟ ಮಾಡುವ ಮೂಲಕ ಧರಣಿ ನಿರತ ರೈತರು ನ್ಯಾಷನಲ್ ಹೈವೇ ಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಊಟ ಮಾಡಿ ಮತ್ತೆ ಪ್ರತಿಭಟನೆ ಮುಂದುವರೆಸಿರುವ ರೈತರ ಧರಣಿಯಲ್ಲಿ ರಾಜ್ಯ ರೈತ ಸಂಘ, …

Read More »