Breaking News
Home / Breaking News (page 29)

Breaking News

ಕಿತ್ತೂರಿನ ಅಭಿವೃದ್ದಿಗೆ ಪ್ರತಿ ವರ್ಷ ಐದು ಕೋಟಿ ಕೊಡ್ತೀನಿ- ಸತೀಶ್ ಜಾರಕಿಹೊಳಿ

ವಿಜಯೋತ್ಸವದ 200 ನೇ ವರ್ಷ ಅದ್ಧೂರಿ ಆಚರಣೆ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ,  -ರಾಜ್ಯ ಸರ್ಕಾರವು ಮುಂದಿನ ವರ್ಷ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಭರವಸೆಯನ್ನು ನೀಡಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ಮಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ರಾಜ್ಯಮಟ್ಟದ ಕಿತ್ತೂರು …

Read More »

ಕಿತ್ತೂರಿನಲ್ಲಿ ಚೆನ್ನಮ್ಮಾಜಿಯ ಇತಿಹಾಸದ ಗತವೈಭವದ ಅನಾವರಣ…

ಕಿತ್ತೂರು ಉತ್ಸವ: ವಿಜಯಜ್ಯೋತಿಗೆ ಅದ್ಧೂರಿ ಸ್ವಾಗತ ಚನ್ನಮ್ಮನ‌ ವಿಜಯೋತ್ಸವಕ್ಕೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆಗಾವ ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಚನ್ನಮ್ಮನ ಕಿತ್ತೂರಿನಲ್ಲಿ ವಿಜಯಜ್ಯೋತಿಯನ್ನು ಸಡಗರ-ಸಂಭ್ರಮದಿಂದ ಬರಮಾಡಿಕೊಂಡು ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಿತ್ತೂರು ಉತ್ಸವ-2023 ಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಲೋಕೋಪಯೋಗಿ ಇಲಾಖೆ ಸಚಿವರು‌ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ರಾಜ್ಯದಾದ್ಯಂತ ಸಂಚರಿಸಿ ಇಂದು ಬೆಳಿಗ್ಗೆ ಚನ್ನಮ್ಮನ ಕಿತ್ತೂರಿಗೆ ಆಗಮಿಸಿದ “ವಿಜಯಜ್ಯೋತಿ”ಗೆ ಪೂಜೆ ಸಲ್ಲಿಸಿ …

Read More »

ಹೈಕಮಾಂಡ್ ಯಾಕೆ ತಡೆಯಿತು ? ಸತೀಶ್ ಅವರನ್ನೇ ಕೇಳಿ- ಹೆಬ್ಬಾಳಕರ್.

ಬೆಳಗಾವಿ ರಾಜಕಾರಣದಲ್ಲಿ ಬಣ ರಾಜಕೀಯ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾವುದೇ ಸಣ್ಣ ಸಮಸ್ಯೆ ಕೂಡ ಇಲ್ಲ, ಬಹಳಷ್ಟು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ನನ್ನ ಮಧ್ಯೆ ಸತೀಶ್ ಮಧ್ಯೆ ಯಾವುದೇ ಸಮಸ್ಯೆ ಇಲ್ಲಾ ಅಂತಾ ಹೇಳಿದ್ರು‌. ಇನ್ನು ನನ್ನ ಮೌನವೂ ವಿಕ್ನೆಸ್ ಅಲ್ಲಾ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ …

Read More »

ಬೆಳಗಾವಿ DDPI ಲೋಕಾಯುಕ್ತ ಬಲೆಗೆ…

ಬೆಳಗಾವಿ-40 ಸಾವಿರ ಲಂಚ ಪಡೆಯುವಾಗ ಬೆಳಗಾವಿ ಡಿಡಿಪಿಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.ಬೆಳಗಾವಿ ‌ಡಿಡಿಪಿಐ ಬಸವರಾಜ್ ನಾಲತವಾಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಪರವಾನಗಿ ನವೀಕರಣ ಮಾಡಿಕೊಡಲು 40 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ,ಕಿತ್ತೂರು ತಾಲೂಕಿನ ತುರುಮುರಿ ಗ್ರಾಮದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಪರವಾನಿಗೆ ನವೀಕರಣ ಮಾಡುವ ವಿಚಾರದಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಡಿಡಿಪಿಐ ವಿರುದ್ಧ ದೂರು ನೀಡಿದ್ದ ಶಾಲೆಯ ಮುಖ್ಯಸ್ಥ ಅರ್ಜುನ ಕುರಿ,ಅವರಿಂದಇಂದು ಹಣ ಸ್ವೀಕರಿಸುವಾಗ …

Read More »

ಕಿತ್ತೂರು ಉತ್ಸವ: ಸಂಗೀತ ದಿಗ್ಗಜ ಹಂಸಲೇಖ ಅವರಿಂದ ಕಾರ್ಯಕ್ರಮ

ಬೆಳಗಾವಿ, ಅ.20(ಕರ್ನಾಟಕ ವಾರ್ತೆ): ಸಂಗೀತ ದಿಗ್ಗಜ ಎನಿಸಿಕೊಂಡಿರುವ ನಾಡಿನ ಪ್ರಖ್ಯಾತ ಸಂಗೀತ‌ ಕಲಾವಿದರಾದ ಹಂಸಲೇಖ ಅವರು ಈ ಬಾರಿಯ ಕಿತ್ತೂರು ಉತ್ಸವದಲ್ಲಿ ಅ.25 ರಂದು ಕಾರ್ಯಕ್ರಮ‌ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ಪ್ರತಿವರ್ಷದಂತೆ ಅ.23, 24 ಹಾಗೂ 25 ರಂದು ಚನ್ನಮನ ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಉತ್ಸವ ನಡೆಯಲಿದೆ.ಉತ್ಸವದ ಕೊನೆಯ ದಿನವಾದ ಅ.25 ರಂದು ಹಂಸಲೇಖ ಅವರು ಸಂಗೀತ ಕಾರ್ಯಕ್ರಮ‌ ನಡೆಸಿಕೊಡಲಿದ್ದಾರೆ. ಉತ್ಸವದ ಮೊದಲ …

Read More »

ಬೆಳಗಾವಿಯಲ್ಲಿ ಅಬಕಾರಿ ದಾಳಿ,ಹೈಟೆಕ್ ಸಾಗಾಟಕ್ಕೆ ಬ್ರೇಕ್..

ಗೋವಾದಿಂದ ಅಕ್ರಮವಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತೆಲಂಗಾಣಕ್ಕೆ ಸಿನಿಮೀಯ ರೀತಿಯಲ್ಲಿ ತೆಲಂಗಾಣ ಚುನಾವಣೆಗೆ ಹಂಚಿಕೆ ಮಾಡಲು ದುಬಾರಿ ಬೆಲೆಯ ಮದ್ಯದ ಬಾಟಲಿ ಇಟ್ಟುಕೊಂಡು ತೆರಳುತ್ತಿದ್ದ ಲಾರಿಯನ್ನು ಮಂಗಳವಾರ ಅಬಕಾರಿ ಇಲಾಖೆಯ ಅಧಿಕಾರಿಗಳು ಹಿರೇಬಾಗೇವಾಡಿ ಟೋಲ್ ಗೆಟ್ ಬಳಿ ವಶಕ್ಕೆ ಪಡೆದಿದ್ದಾರೆ. ಕಳೆದ ಬಾರಿ ಪುಷ್ಪ ಸಿನಿಮಾ ಮಾದರಿಯಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಈಗ ಹೊಸ ತಂತ್ರಜ್ಞಾನ ಬಳಸಿ ಟ್ರಾನ್ಸಪರಬರ್ಮ್ ನಲ್ಲಿ ದುಬಾರಿ ಮದ್ಯದ ಬಾಟಲಿ ಇಟ್ಟು …

Read More »

ಕಿತ್ತೂರು ಉತ್ಸವ: ಬೆಳಗಾವಿ ಡಿಸಿ ಯಿಂದ ಸಿದ್ಧತೆ ಪರಿಶೀಲನೆ.

ಕೋಟೆ ಆವರಣ ಸ್ವಚ್ಛತೆ, ದೀಪಾಲಂಕಾರಕ್ಕೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ಬೆಳಗಾವಿ, ಅ.17(ಕರ್ನಾಟಕ ವಾರ್ತೆ): ಈ ಬಾರಿಯೂ ಕೂಡ ಕಿತ್ತೂರು ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ಅಚ್ಚುಕಟ್ಟಾಗಿ ಆಚರಿಸಲಾಗುವುದು. ಉತ್ಸವದ ಪ್ರಮುಖ ವೇದಿಕೆ ನಿರ್ಮಾಣ, ಕುಸ್ತಿ ಕಣ, ಊಟದ ವ್ಯವಸ್ಥೆ, ವಸ್ತಪ್ರದರ್ಶನ, ಬೋಟಿಂಗ್ ಸೇರಿದಂತೆ ಎಲ್ಲ ಸಿದ್ಧತೆಗಳು ಭರದಿಂದ ನಡೆದಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ಚ.ಕಿತ್ತೂರಿನ ಕೋಟೆ ಆವರಣದಲ್ಲಿ ಮಂಗಳವಾರ(ಅ‌.17) ನಡೆದ ಪೂರ್ವಭಾವಿ …

Read More »

ಮುಂದಿನ ಪಾಲಿಕೆ ಸಭೆಯಲ್ಲಿ ಎಲ್ಲವನ್ನೂ ಬಿಚ್ಚಿಡುತ್ತೇನೆ – ಅಭಯ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಕುರಿತು ಸರ್ಕಾರದಿಂದ ನೋಟೀಸ್ ಜಾರಿಯಾದ ಹಿನ್ನಲೆಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಎಲ್ಲ ಆರೋಪಗಳಿಗೆ ಶನಿವಾರ ನಡೆಯುವ ಪಾಲಿಕೆ ಸಭೆಯಲ್ಲಿ ಎಲ್ಲ ಆರೋಪಗಳಿಗೆ ಉತ್ತರ ಕೊಡುವದಾಗಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಸರ್ಕಾರದ ಎಚ್ಚರಿಕೆಗೆ ಬಿಜೆಪಿ ಶಾಸಕ ಅಭಯ ಪಾಟೀಲ್ ಗರಂ ಆಗಿದ್ದಾರೆ.ಪಾಲಿಕೆ ವಿಸರ್ಜನೆ ಮಾಡಲು ಆಗುವುದಿಲ್ಲ.ಕೆಲ‌ ಅಧಿಕಾರಿಗಳು ಕೆಲವರ ಕೈಗೊಂಬೆ ಆಗಿ ಕೆಲಸ ಮಾಡುತ್ತಿದ್ದಾರೆ.ಸರ್ಕಾರಕ್ಕೆ …

Read More »

ಬೆಳಗಾವಿಯಲ್ಲಿ ಹಾಡಹಗಲೇ, ರಿವಾಲ್ವರ್ ತೋರಿಸಿ ದರೋಡೆಗೆ ಯತ್ನ…

ಹಾಡಹಗಲೇ, ರಿವಾಲ್ವರ್ ತೋರಿಸಿ ದರೋಡೆಗೆ ಯತ್ನ… ಬೆಳಗಾವಿ-ಹಾಡಹಗಲೇ ರಿವಾಲ್ವರ್ ತೋರಿಸಿ ಚಿನ್ನಾಭರಣ ದರೋಡೆಗೆ ಯತ್ನಿಸಿದ ಘಟನೆ,ಬೆಳಗಾವಿಯ ಶಾಹುನಗರದಲ್ಲಿ ನಡೆದಿದೆ. ಇಂದು ಬೆಳಗ್ಗೆ 10-00 ಗಂಟೆಗೆ ಶಾಹುನಗರದ ಸಂತೋಷಿ ಜ್ಯುವೆಲರ್ಸ್ ಮಳಿಗೆಗೆ ನುಗ್ಗಿದ ದರೋಡೆಕೋರರುಮಳಿಗೆ ಮಾಲೀಕ ಪ್ರಶಾಂತ ಹೊನರಾವ್ ಅವರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ,ಇದಕ್ಕೆ ಬೆದರದೇ ದರೋಡೆಕೋರರ ಜೊತೆಗೆ ಕಾದಾಡಿದ ಮಳಿಗೆ ಮಾಲೀಕ ಪ್ರಶಾಂತ ದರೋಡೆಕೋರರಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾನೆ. ಹೊಡೆದಾಟದ ವೇಳೆ ಪ್ರಶಾಂತ ಕುತ್ತಿಗೆಗೆ ಪಿಸ್ತೂಲಿನಿಂದ ಗುದ್ದಿದ ಆಗುಂತಕರು ಮಳಿಗೆ …

Read More »

ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದವ್ರು ಜೈಲಿಗೆ….!

ಘಟಪ್ರಭಾ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಪ್ರಕರಣ! ಮುಖ್ಯ ಆರೋಪಿ ಅರೆಸ್ಟ್! ನ್ಯಾಯಾಲಯಕ್ಕೆ ಹಾಜರು! ಘಟಪ್ರಭಾ: ಹನಿ ಟ್ರ್ಯಾಪ್ ಆರೋಪದಡಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ನಡುರಸ್ತೆಯಲ್ಲಿ ಮೆರವಣಿಗೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಘಟಪ್ರಭಾ ಪೊಲೀಸರು ಸಂತ್ರಸ್ತ ಮಹಿಳೆ ನೀಡಿದ ಮಾಹಿತಿ ಆಧಾರದ ಮೇಲೆ ಮಹಿಳೆಯರು ಸೇರಿದಂತೆ 25 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಅರ್ಜುನ ಗಂಡವ್ವಗೊಳ ಇವನನ್ನು ಶನಿವಾರ …

Read More »