Home / Breaking News (page 36)

Breaking News

ಇಂದು ಬೆಳಗಾವಿಯಲ್ಲಿ ಇಬ್ಬರೂ ಮಂತ್ರಿಗಳ ಕಾರ್ಯಕ್ರಮ…!!

ಬೆಳಗಾವಿ -ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ,ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇಬ್ಬರೂ ಮಂತ್ರಿಗಳ ಕಾರ್ಯಕ್ರಮ ಬೆಳಗಾವಿ ನಗರದಲ್ಲಿ ಪ್ರತ್ಯೇಕವಾಗಿ ಏಕಕಾಲಕ್ಕೆ ಜರುಗಲಿವೆ. ಇದು ಆಕಸ್ಮಿಕವೋ ಅಥವಾ ಸಮಯದ ಅಭಾವವೋ ಗೊತ್ತಿಲ್ಲ,ಆದ್ರೆ ಇತ್ತೀಚೆಗೆ ಇಬ್ಬರು ಮಂತ್ರಿಗಳು ಒಂದೇ ದಿನ ಬೆಳಗಾವಿ ನಗರದಲ್ಲಿ ಕಾಣಿಸಿಕೊಳ್ತಾರೆ,ಇಬ್ಬರೂ ಮಂತ್ರಿಗಳು ಬೆಳಗಾವಿಗೆ ಬಂದಾಗ ಕಾರ್ಯಕ್ರಮ ಆಯೋಜನೆ ಮಾಡ್ತಾರೆ. ಎರಡೂ ಕಾರ್ಯಕ್ರಮ ಒಂದೇ ದಿನ ಇರ್ತಾವೆ ಕಾರ್ಯಕ್ರಮಗಳ ಟೈಮೀಂಗ್ ಕೂಡಾ ಒಂದೇ ಆಗಿರುತ್ರದೆ. ಇದು ಬೆಳಗಾವಿ …

Read More »

ಬೆಳಗಾವಿ: ಲಾರಿಗೆ ಕರೆಂಟ್ ಶಾಕ್, ಓರ್ವನ ಬಲಿ…

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾದಲ್ಲಿ ಲಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊರ್ವ ಲಾರಿ ಚಾಲಕನ ನಿರ್ಲಕ್ಷತನದಿಂದ ಲಾರಿಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ ಘಟನೆ ಸುರೇಬಾನದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಸ್ಥಳೀಯ ವ್ಯಾಪಾರಸ್ಥರು ಹಾಗೂ ಲಾರಿ‌ ಮಾಲೀಕರಾದ ರಾಮಚಂದ್ರ ಪಾಂಡಪ್ಪ ರಾಮಚಂದ್ರಪ್ಪ ಗೋಕಾವಿ ಎಂಬುವವರ ಲಾರಿಯಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೃತಪಟ್ಟ ದುರ್ದೈವಿ ಮನಿಹಾಳ ಗ್ರಾಮದ ನಿವಾಸಿ ಈರಪ್ಪ ಮಾರುತೆಪ್ಪ ಕಟಾವಕರ (೫೨) ಎಂದು ತಿಳಿದು ಬಂದಿದೆ. ಲಾರಿಯಲ್ಲಿದ್ದ …

Read More »

ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿದ ಇನಾಮ್ದಾರ್ ಚಿತ್ರ ತಂಡ..

ಸವದತ್ತಿ: ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡುತ್ತಿರುವ ಇನಾಮ್ದಾರ್ ಚಿತ್ರ ಇದೀಗ ಸೌದತ್ತಿ ಎಲ್ಲಮ್ಮ ಗುಡ್ಡದಲ್ಲಿ ನಟ ರಂಜಿನ್ ಛತ್ರಪತಿ, ನಿರ್ದೇಶಕ ಸಂದೇಶ ಶೆಟ್ಟಿ ಹಾಗೂ ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು ಸೇರಿದಂತೆ ಚಿತ್ರತಂಡದ 45 ಜನ ಉರುಳು ಸೇವೆ ಮಾಡುವುದರ ಮೂಲಕ ಚಿತ್ರದ ಯಶಸ್ವಿಗೆ ಶ್ರೀ ದೇವರ ಮೊರೆ ಹೋಗಿದ್ದಾರೆ. ಮೂಲತಃ ಉತ್ತರ ಕರ್ನಾಟಕದ ಗಟ್ಟಿ ನೆಲದ ಯುವಕ ರಂಜನ್ ಚತ್ರಪತಿ ಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡುತ್ತಿರುವ …

Read More »

ಕಬ್ಬಿನ ತೋಟದಲ್ಲಿ ಗಾಂಜಾ ಘಾಟು…!!

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮುದೇನೂರ ಗ್ರಾಮದ ಲಕ್ಕಪ್ಪ ಬಾಲಪ್ಪ ಮೇತ್ರಿ ಊರ್ಫ ಮಾದರ ಈತನ ಹೊಲದಲ್ಲಿ ಅಭಕಾರಿ ಅಧಿಕಾರಿಗಳ ದಾಳಿ ಅಂದಾಜು 35000=00 ರೂ. ಮೌಲ್ಯದ ಗಾಂಜಾ ಗಿಡಗಳು ಜಪ್ತಿ ಮಾಡಿದ್ದಾರೆ. ದಿನಾಂಕ: 20/09/2023 ರಂದು ಮಾನ್ಯ ಅಬಕಾರಿ ಆಯುಕ್ತರಾದ ಡಾ!! Y ಮಂಜುನಾಥ, ಬೆಳಗಾವಿ ಕೇಂದ್ರ ಸ್ಥಾನ ಹಾಗೂ ಬೆಳಗಾವಿ ದಕ್ಷಿಣ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಕುಮಾರಿ ವನಜಾಕ್ಷೀ, ಎಮ್ ಇವರ ಮಾರ್ಗದರ್ಶನದಲ್ಲಿ ಮತ್ತು ರಾಮನಗೌಡರ …

Read More »

ಕಿತ್ತೂರು ಉತ್ಸವ: ಪೂರ್ವಭಾವಿ ಸಭೆ ಸೆ.ರಂದು 26 ರಂದು

ಬೆಳಗಾವಿ, -ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ(ಸೆ.26) ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ ನಡೆಯಲಿದೆ. ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ***

Read More »

ಸೆ.30 ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಉಪನೋಂದಣಾಧಿಕಾರಿಗಳ ಓಪನ್

ಬೆಂಗಳೂರು-ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ ( Valuation Committee) 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ, ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳ ಕೆಲಸದ ಅವಧಿಯನ್ನು ಸೆ.23 ರಿಂದ ಜಾರಿಗೆ ಬರುವಂತೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸಲು ಕಛೇರಿ …

Read More »

ಕತ್ತು ಸೀಳಿ ಬಾರ್ ಕಾರ್ಮಿಕನ ಮರ್ಡರ್…

ಬೆಳಗಾವಿ- ನಿನ್ನೆ ಶನಿವಾರ ಬಾರ್ ಗೆ ರಜೆ ಇದ್ದು ರಾತ್ರಿ ಊಟ ಮಾಡಿ ಮಲಗುವಾಗ ಜಗಳಾಡಿಕೊಂಡ ಬಾರ್ ಕಾರ್ಮಿಕರು ಓರ್ವನ ಕತ್ತು ಸೀಳಿ ಮರ್ಡರ್ ಮಾಡಿ,ಕಟ್ಟಡದ ಎರಡನೇಯ ಮಹಡಿಯಿಂದ ಎಸೆದ ಘಟನೆ ಘಟಪ್ರಭಾದಲ್ಲಿ ನಿನ್ನೆ ರಾತ್ರಿ ನಡೆದಿದೆ. ಸಂಜು ಎಂಬಾತ ಕಳೆದ ಒಂದು ತಿಂಗಳಿನಿಂದ ಘಟಪ್ರಭಾದ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ನಿನ್ನೆ ಬಾರ್ ಗೆ ರಜೆ ಇತ್ತು ರಾತ್ರಿ ಕಾರ್ಮಿಕರ ನಡುವೆ ಯಾವುದೋ ಕಾರಣಕ್ಕೆ ಜಗಳ ಆಗಿದೆ ಇದು …

Read More »

ಬೆಳಗಾವಿ,ಚಿಕ್ಕೋಡಿಗೆ ಕಾಂಗ್ರೆಸ್ ಉಸ್ತುವಾರಿಗಳ ನೇಮಕ

ಬೆಳಗಾವಿ- ಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭವಾಗಿದ್ದು ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶಿವರಾಜ್ ತಂಗಡಗಿ,ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಡಿ ಸುಧಾಕರ್ ಹಾಗೂ ಧಾರವಾಡ ಕ್ಷೇತ್ರಕ್ಕೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ನೇಮಿಸಲಾಗಿದೆ.

Read More »

26 ರಂದು ಬೆಳಗಾವಿಯಲ್ಲಿ, ಜನತಾ ದರ್ಶನ

ಸಾರ್ವಜನಿಕರ ಅಹವಾಲು ಆಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಸೆ.26 ರಂದು “ಜನತಾ ದರ್ಶನ”- ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸುವ ಉದ್ಧೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸೆ.26 ರಂದು ಜಿಲ್ಲಾಮಟ್ಟದ “ಜನತಾ ದರ್ಶನ” ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ(ಸೆ.22) ನಡೆದ ಜನತಾ ದರ್ಶನ …

Read More »

ಎರಡು ಗುಂಪುಗಳ ನಡುವೆ ಗಲಾಟೆ,ಪೋಲೀಸರ ದೌಡು…

ಖಾನಾಪೂರ-ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿರುವ ಘಟನೆ,ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ನಿನ್ನೆ ಸಂಜೆ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ನಡೆದಿದ್ದ ಗಲಾಟೆ ನಡೆದಿದೆ.ನಡೆದುಕೊಂಡು ಹೋಗುವಾಗ ಕೈ ತಾಗಿದಕ್ಕೆ ಯುವಕರ ಮಧ್ಯೆ ಗಲಾಟೆ ಆಗಿದೆ. ಹಿರಿಯರು ಯುವಕರನ್ನು ಮನವೊಲಿಸಿ ಗಲಾಟೆಯನ್ನು ನಿಯಂತ್ರಿಸಿದ್ದರು. ಸಂಜೆ ಆಗ್ತಿದ್ದಂತೆ ಒಂದು ಗುಂಪಿನ ಯುವಕರ ಕಾಲನಿಗೆ ಹೋಗಿ ಮತ್ತೊಂದು ಗುಂಪಿನವರ ಜೊತೆ ಗಲಾಟೆ ಮಾಡಿದ್ದಾರೆ.ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಾಸಕ ವಿಠ್ಠಲ ಹಲಗೇಕರ …

Read More »