Breaking News

Breaking News

ಇನ್ನೊಂದು ತಿಂಗಳು,ಯಲ್ಲಮ್ಮ, ಮಾಯಕ್ಕ,ದೇವಿ ದರ್ಶನ ಇಲ್ಲ.

ಬೆಳಗಾವಿ- ನೆರೆಯ ಮಹಾರಾಷ್ಟ್ರ ಮತ್ತು ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಇನ್ನೂ ಒಂದು ತಿಂಗಳು ಭಕ್ತರಿಗೆ ದರ್ಶನವಿಲ್ಲ. ಜುಲೈ 31ರ ವರೆಗೂ ಬೆಳಗಾವಿ ಜಿಲ್ಲೆಯ ಎರಡು ದೇವಸ್ಥಾನಗಳಿಗೆ ಭಕ್ತರ ದರ್ಶನಕ್ಕೆ ನಿಷೇಧ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿರುವ ಪ್ರಮುಖ ಶಕ್ತಿಪೀಠ ಯಲ್ಲಮ್ಮದೇವಿ ದೇವಸ್ಥಾನ,ಮತ್ರು ರಾಯಬಾಗದ ಚಿಂಚಲಿ ಮಾಯಕ್ಕಾದೇವಿ ದರ್ಶನವಿಲ್ಲ ಎಂದು ಬೆಳಗಾವಿ ಡಿಸಿ ಡಾ.ಎಸ.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಜೂನ 30ರವರೆಗೆ ಇದ್ದ ನಿಷೇಧ ಜುಲೈ …

Read More »

ಯುವರಾಜನ ಲಂಚ್…..ಸಾಹುಕಾರ್ ಪಂಚ್…..!

ಬೆಳಗಾವಿ- ಎಪಿಎಂಸಿ ಅದ್ಯಕ್ಷ ಯುವರಾಜ್ ಕದಂ ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸಾಹುಕಾರ್ ಗೆ ಎಪಿಎಂಸಿಯಲ್ಲಿ ಔತನಕೂಟ ಏರ್ಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇಂದು ಮದ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಎಪಿಎಂಸಿ ಗೆ ಭೇಟಿ ನೀಡಿ ಯುವರಾಜ್ ಕದಂ ಅವರ ಜೊತೆ ಲಂಚ್ ಮಾಡಿದ್ರು. ಯುವರಾಜ್ ಕದಂ,ರಮೇಶ್ ಸಾಹುಕಾರ್ ಜೊತೆ ಲಂಚ್ ಮಾಡುವದರ ಜೊತೆ ಪ್ರತ್ಯೇಕವಾಗಿ ಕಾಲಕಳೆದರು.ಯುವರಾಜ್ ಕದಂ ಅವರು ಸಚಿವ …

Read More »

ಚೈಲ್ಡೀಶ್ ಹೇಳಿಕೆಗೆ ಪ್ರತಿಕ್ರಿಯಿಸಲು,ನನ್ನ ಹತ್ತಿರ ಸಮಯವೂ ಇಲ್ಲ,ನನಗೆ ಇಂಟ್ರೆಸ್ಟೂ ಇಲ್ಲ- ಹೆಬ್ಬಾಳಕರ

ಬೆಳಗಾವಿ- ನಾನು ನನ್ನ ಕ್ಷೇತ್ರದಲ್ಲಿ ತುಂಬಾ ಬ್ಯುಸಿ ಇದ್ದೇನೆ,ಯಾರ್ಯಾರೋ ಹೇಳಿಕೆ ಕೊಡ್ತಾರಂತ ನಾನು ಪ್ರತಿಕ್ರಿಯಸಲ್ಲ ,ಚೈಲ್ಡೀಶ್ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳಕರ ಟಾಂಗ್ ಕೊಟ್ಟಿದ್ದಾರೆ. ತೈಲಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ, ಮಾದ್ಯಮಗಳ ಜೊತೆ ಮಾತನಾಡಿದ ಅವರು,ಯುವರಾಜ್ ಕದಂ ಅವರನ್ನು ಎಪಿಎಂಸಿ ಅದ್ಯಕ್ಷರನ್ನಾಗಿ ಮಾಡಿದ್ದು ನಾನೇ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಕೇಳಿದಾಗ ,ಇದೊಂದು …

Read More »

ಯುವರಾಜ್ ಕದಂ ಅವರನ್ನು ಎಪಿಎಂಸಿ ಅದ್ಯಕ್ಷ ಮಾಡಿದ್ದು ನಾನೇ- ರಮೇಶ್ ಜಾರಕಿಹೊಳಿ

ಬೆಳಗಾವಿ- ಬೆಳಗಾವಿ ಎಪಿಎಂಸಿ ಯಲ್ಲಿ ಬಿಜೆಪಿ ಕೇವಲ ಒಂದೇ ಸ್ಥಾನ ಹೊಂದಿತ್ತು,ಹೀಗಾಗಿ ಅಲ್ಲಿ ಏನೂ ಮಾಡಲು ಸಾದ್ಯವಿರಲಿಲ್ಲ,ಯುವರಾಜ್ ಕದಂ ಅವರನ್ನು ಅದ್ಯಕ್ಷ ಮಾಡಿದ್ದು ನಾನೇ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾಡಿದ ಅವರು ಹೆಚ್ ವಿಶ್ವನಾಥ,ಮತ್ತು ಉಮೇಶ್ ಕತ್ರಿ ಅವರಿಗೆ ಸ್ಥಾನಮಾನ ನೀಡುವ ಕುರಿತು ಬಿಜೆಪಿ ಹೈಕಮಾಂಡ ನಿರ್ಧರಿಸುತ್ತದೆ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ ಈ ಕುರಿತು ಏನೂ …

Read More »

ಬೆಳಗಾವಿ ಪೋಲೀಸ್ ಕಮಿಷ್ನರ್ ಕೆ ತ್ಯಾಗರಾಜನ್ ಅಧಿಕಾರ ಸ್ವೀಕಾರ

ಬೆಳಗಾವಿ-ರಾಜ್ಯದ ಎರಡನೇಯ ರಾಜಧಾನಿ ಎಂದೇ ಕರೆಯಲ್ಪಡುವ, ಬೆಳಗಾವಿ ನಗರದ ಪೋಲೀಸ್ ಕಮಿಷ್ನರ್ ಆಗಿ ಡಾ ಕೆ ತ್ಯಾಗರಾಜನ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಿನ್ನೆ ಸಂಜೆ ಬೆಳಗಾವಿ ನಗರಕ್ಕೆ ಆಗಮಿಸಿದ್ದ ಅವರು ಇಂದು ಅಧಿಕಾರ ಸ್ವೀಕರಿಸಿದರು.ಬೆಳಗಾವಿಯ ಪೋಲೀಸ್ ಕಮಿಷ್ನರ್ ಆಗಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದ ಲೋಕೇಶ್ ಕುಮಾರ ಅವರು ಡಾ.ಕೆ ತ್ಯಾಗರಾಜನ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು

Read More »

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 8 ಜನ ಸೊಂಕಿತರ ಪತ್ತೆ

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕರ್ಮಕಾಂಡ ಮುಂದುವರೆದಿದೆ,ಜಿಲ್ಲೆಯ ಜನ ಸಂಡೇ ಮೂಡ್ ನಲ್ಲಿ ಇರುವಾಗಲೇ ಈ ಮಹಾಮಾರಿ ಹೊಡೀ ಒಂಬತ್ತ್ ಎಂದಿದೆ,ಯಾಕಂದ್ರೆ ಇವತ್ತು ಒಂದೇ ದಿನ 8 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಭಾನುವಾರದ ಹೆಲ್ತ್ ಬುಲೀಟೀನ್ ಬಿಡುಗಡೆಯಾಗಿದ್ದು,ಈ ಬುಲೀಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 8 ಜನರಿಗೆ ಸೊಂಕು ಇರುವದು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲೀಟೀನ್ ಪ್ರಕಾರ 326 ಕ್ಕೇರಿದಂತಾಗಿದೆ. ಇಂದು ಪತ್ತೆಯಾದ 9 …

Read More »

ಗೋಕಾಕಿನಲ್ಲಿ ಅಭಿವೃದ್ಧಿಯ ಪರ್ವ….!

*ವಿವಿಧ ಕಾರ್ಯಕ್ರಮಗಳಿಗೆ ಚಾಲನೆ‌ ನೀಡಿದ ಸಚಿವ ರಮೇಶ್ ಜಾರಕಿಹೊಳಿ.* ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜ್ಯದ ಜಲಸಂಪನ್ಮೂಲ ಸಚಿವ *ರಮೇಶ್ ಜಾರಕಿಹೊಳಿ* ಯವರು ಗೋಕಾಕ್‌ನ ಜನತಾ ಫ್ಲಾಟ್ ನಲ್ಲಿ ನಿರ್ಮಿಸಿರುವ *ಅಲೆಮಾರಿಗಳಿಗಾಗಿ ನಿರ್ಮಿಸಿರುವ ವಸತಿ ನಿಲಯ* ಗಳನ್ನು ಇಂದು ಉದ್ಘಾಟಿಸಿದರು. ಗೋಕಾಕ್ ನಗರದ *ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ‌ ಪೂಜೆ‌* ನೆರವೇರಿಸಿದ‌ ಸಚಿವರು ಅಂಗವಿಕಲರಿಗೆ *ತ್ರಿಚಕ್ರ ವಾಹನ* ಗಳನ್ನು ವಿತರಿಸಿದರು ಮಾರ್ಕಂಡೆಯ ನಗರದಲ್ಲಿ *13/11 …

Read More »

ಪ್ರತಿಜ್ಞಾವಿಧಿ ಕಾರ್ಯಕ್ರಮ ದೇಶದಲ್ಲೇ ಹೊಸ ಇತಿಹಾಸ ಸೃಷ್ಠಿಸಲಿದೆ-ಹೆಬ್ಬಾಳಕರ

ಬೆಳಗಾವಿ- ಜುಲೈ 2 ರಂದು ಬೆಂಗಳೂರಿನಲ್ಲಿ ನಡೆಯುವ,ಕೆಪಿಸಿಸಿ ಅದ್ಯಕ್ಷರು ಮತ್ತು,ಕಾರ್ಯಾದ್ಯಕ್ಷರುಗಳ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಹತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡುವದರ ಜೊತೆಗೆ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ,ಡಿಜಿಟಲ್ ಮಿಡಿಯಾ ಮೂಲಕ ಪ್ರಸಾರವಾಗುವ ಈ ಕಾರ್ಯಕ್ರಮ ದೇಶದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ನಾನು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷೆಯಾಗಿರುವಾಗ,ಬಹಳಷ್ಟು ಹೋರಾಟ ಮಾಡಿ,ಜಾಗೆಯನ್ನು ಖರೀಧಿಸಿ,ಬಹಳಷ್ಟು …

Read More »

ಹೆತ್ತ ಮಗನ ಎದೆಗೆ ಕೊಡಲಿ ಕೊಚ್ಚಿ ಕೊಂದ ಪಾಪಿ ತಂದೆ

ಬೆಳಗಾವಿ- ಅತೀ ಕ್ಷುಲ್ಲಕ ಕಾರಣಕ್ಕಾಗಿ ತಂದೆಯೊಬ್ಬ ಹೆತ್ತಗನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗೋಕಾಕ ತಾಲ್ಲೂಕಿನಲ್ಲಿ ನಡೆದಿದೆ.ದನಕ್ಕೆ ಮೇವು ಹಾಕುವ ವಿಚಾರದಲ್ಲಿ ತಂದೆ ಮತ್ತು ಮಗನ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಹೆತ್ತ ಮಗನ ಎದೆಗೆ ಕೊಡಲಿ ಏಟು ನೀಡಿ ಮಗನನ್ನೇ ಕೊಂದ ಪಾಪಿ ತಂದೆ,ಈಗ ಪರಾರಿಯಾಗಿದ್ದಾನೆ.ಗೋ ಕಾಕ ತಾಲ್ಲೂಕಿನ ಮೇಲ್ಮನಹಟ್ಟಿಯಲ್ಲಿ ಯಮನಪ್ಪ (41) ಹತ್ಯೆಯಾದ ದುರ್ದೈವಿ ಹತ್ಯೆಗೈದ ತಂದೆ ಬಾಳಪ್ಪ ಗುತ್ತಿಗೆ ಪರಾರಿಯಾಗಿದ್ದಾನೆ.‌ ಕೊಡಲಿಯಿಂದ ಮಗನ ಎದೆಗೆ …

Read More »

ಬೆಳಗಾವಿ ಜಿಲ್ಲೆಗೆ ತಪ್ಪದ ಮಹಾಮಾರಿ ಕೊರೋನಾ ಕಾಟ…..!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಕಾಟ ತಪ್ಪುತ್ತಿಲ್ಲ,ಪ್ರತಿ ದಿನ ಈ ಹೆಮ್ಮಾರಿ ಜಿಲ್ಲೆಯಲ್ಲಿ ಚೆಲ್ಲಾಟ ಮುಂದುವರೆಸಿದೆ.ಶನಿವಾರ ಸಂಜೆ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಜಿಲ್ಲೆಯ ಮತ್ತೋರ್ವ ಯುವತಿಗೆ ಕೊರೊನಾ ಸೊಂಕು ಇರುವದು ದೃಢವಾಗಿದೆ. ಸಿಂಗಾರಗೊಪ್ಪ ಗ್ರಾಮದ 22 ವರ್ಷದ ಯುವತಿಗೆ ಕೊರೊನಾ ಸೋಂಕು ತಗಲಿದ. ಮಹಾರಾಷ್ಟ್ರ ಟ್ರಾವೆಲ್ ಹಿಸ್ಟರಿ ಹೊಂದಿರುವ ಯುವತಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಗಾರಗೊಪ್ಪ ಗ್ರಾಮದವಳಾಗಿದ್ದಾಳೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ …

Read More »