Home / Breaking News (page 365)

Breaking News

ಸ್ಟೇರಿಂಗ್ ಲಾಕ್ ಆಗಿ ಸೇತುವೇ ಮೇಲಿಂದ ಟ್ರ್ಯಾಕ್ಟರ್ ಹಳ್ಳಕ್ಕೆ ಬಿತ್ತು….!!!

ಸ್ಟೇರಿಂಗ್ ಲಾಕ್ ಆಗಿ ಸೇತುವೇ ಮೇಲಿಂದ ಟ್ರ್ಯಾಕ್ಟರ್ ಹಳ್ಳಕ್ಕೆ ಬಿತ್ತು….!!! ಬೆಳಗಾವಿ- ಇಂದು ಬೆಳಗಿನ ಜಾವ ಆ ಬಡಜೀವಿಗಳು ಬದುಕಿನ ಬಂಡಿ ಸಾಗಿಸಲು ಮನೆಯಲ್ಲಿ ಚಹಾ ಕುಡಿದು,ಬುತ್ತಿ ಕಟ್ಟಿಕೊಂಡು ಕಬ್ನು ಕಟಾವು ಮಾಡಲು ಟ್ರ್ಯಾಕ್ಟರ್ ನಲ್ಲಿ ಬೋಗೂರು ಗ್ರಾಮದಿಂದ ಇಟಗಿ ಗ್ರಾಮಕ್ಕೆ ಹೊರಟಿರುವಾಗ ಈ ಟ್ರ್ಯಾಕ್ಟರಿನ ಸ್ಟೇರಿಂಗ್ ಲಾಕ್ ಆಗಿ ಹಳ್ಳಕ್ಕೆ ಬಿದ್ದು ಆರು ಜನ ಕೃಷಿ ಕೂಲಿ ಕಾರ್ಮಿಕರು ಪ್ರಾಣ ಕಳೆದು ಕೊಂಡಿದ್ದಾರೆ. ಟ್ರ್ಯಾಕ್ಟರ್ ನಲ್ಲಿ ಬರೊಬ್ಬರಿ 23 …

Read More »

ವಿಟಿಯು ೧೯ ನೇ ಘಟಿಕೋತ್ಸವ: ಮಹಿಮಾ ರಾವ್ ಗೆ ೧೩ ಚಿನ್ನದ ಪದಕ

ವಿಟಿಯು ೧೯ ನೇ ಘಟಿಕೋತ್ಸವ: ಮಹಿಮಾ ರಾವ್ ಗೆ ೧೩ ಚಿನ್ನದ ಪದಕ ———————————————————————– ಸೃಜನಶೀಲತೆ, ಕೌಶಲ್ಯತೆಗೆ ವಿಫುಲ ಉದ್ಯೋಗಾವಕಾಶ: ಪ್ರೊ.ಅಗರವಾಲ್ ಬೆಳಗಾವಿ, ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಸೃಜಶೀಲತೆಗೆ ಹೆಚ್ಚಿನ ಮಹತ್ವ ಇರುವುದರಿಂದ ಕಲೆ, ವಿಜ್ಞಾನ, ವಾಣಿಜ್ಯ ಅಥವಾ ಔದ್ಯೋಗಿಕ ಹೀಗೆ ಯಾವುದೇ ಕ್ಷೇತ್ರವಿದ್ದರೂ ಹೊಸತನಕ್ಕೆ ತೆರೆದುಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್.ಬಿ.ಎ.)ಯ ಅಧ್ಯಕ್ಷರಾದ ಪ್ರೊ.ಕೆ.ಕೆ.ಅಗರವಾಲ್ ಹೇಳಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ “ಜ್ಞಾನಸಂಗಮ” ಆವರಣದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶನಿವಾರ …

Read More »

ಇಟಗಿ ಬಳಿ ಟ್ರ್ಯಾಕ್ಟರ್ ಪಲ್ಟಿ ಆರು ಜನರ ದುರ್ಮರಣ

ಇಟಗಿ ಬಳಿ ಟ್ರ್ಯಾಕ್ಟರ್ ಪಲ್ಟಿ ಆರು ಜನರ ದುರ್ಮರಣ ಬೆಳಗಾವಿ- ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಆರು ಜನರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಟಗಿ ಬೋಗುರ್ ನಡುವೆ ನಡೆದಿದೆ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮವಾಗಿ ಆರು ಜನರು ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ . ಸ್ಥಳಕ್ಕೆ ನಂದಗಡ ಪೋಲೀಸರು ದೌಡಾಯಿಸಿದ್ದು ಹಲವು ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದೆ.

Read More »

ಹೆಲಿಕಾಪ್ಟರ್ ಮೂಲಕ ರವಿವಾರ ಗೋಕಾಕಿಗೆ ರಮೇಶ್ ಜಾರಕಿಹೊಳಿ….!!

ಹೆಲಿಕಾಪ್ಟರ್ ಮೂಲಕ ರವಿವಾರ ಗೋಕಾಕಿಗೆ ರಮೇಶ್ ಜಾರಕಿಹೊಳಿ….!! ಬೆಳಗಾವಿ- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಮಾಡಿದ ಸಂಕಲ್ಪವನ್ನು ಈಡೇರಿಸಿ ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ರಮೇಶ್ ಜಾರಕಿಹೊಳಿ ರವಿವಾರ ಹೆಲಿಕಾಪ್ಟರ್ ಮೂಲಕ ಗೋಕಾಕಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ರವಿವಾರ ಬೆಳಿಗ್ಗೆ ಗೋಕಾಕಿಗೆ ಆಗಮಿಸುವ ಅವರು ತಂದೆ,ತಾಯಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನಗಳನ್ನು ಸಲ್ಲಿಸಿ ಆಶಿರ್ವಾದ ಪಡೆಯಲಿದ್ದಾರೆ ನಂತರ ಅಭಿಮಾನಿ ಕಾರ್ಯಕರ್ತರನ್ನು ಭೇಟಿಯಾಗಿ ಬೆಳಗಾವಿಯ ರಾಣಿ ಚನ್ನಮ್ಮ …

Read More »

ಬೆಳಗಾವಿ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ, ಶ್ರೀಶೈಲ ಮಠದ ಸಂಘದ ಅದ್ಯಕ್ಷ

ಬೆಳಗಾವಿ : ಇಂದಿನ ದಿನಗಳಲ್ಲಿ ಕಿರಿಯ ಪತ್ರಕರ್ತರಿಗೆ ಹಿರಿಯ ಪತ್ರಕರ್ತರು ನೈಜ ವರದಿಗಳ ಬರವಣಿಗೆಯ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಅವರು ಶುಕ್ರವಾರ ನಗರದ ವಾರ್ತಾ ಭವನದಲ್ಲಿ ನಡೆದ ಬೆಳಗಾವಿ ಪತ್ರಕರ್ತರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಮಾತನಾಡಿದರು. ಪತ್ರಕರ್ತರ ಸಂಘದಿಂದ ವಿವಿದ ಸಮಾಜದ ಮುಖಂಡರ, ಹಿರಿಯರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡರೆ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ.  ಸಂಘಟನೆ ಎನ್ನುವುದು …

Read More »

ಒಂದೇ ಕಲ್ಲಿನಿಂದ ಜೋಡಿ ಹಕ್ಕಿ ಹೊಡೆದ ಸವದಿ ಸಾಹುಕಾರ್….!!!

ಒಂದೇ ಕಲ್ಲಿನಿಂದ ಜೋಡಿ ಹಕ್ಕಿ ಹೊಡೆದ ಸವದಿ ಸಾಹುಕಾರ್….!!! ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜಕೀಯವಾಗಿ ,ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ,ಜಿಲ್ಲೆಯ ನಾಯಕರು ಪರಸ್ಪರ ಕಾಲೆಳೆದರೂ ಕುಸ್ತಿ ಗೆದ್ದ ಕೀರ್ತಿ,ಮಾತ್ರ ಬೆಳಗಾವಿಗೆ ಸಿಗುತ್ತಿದೆ. ಬಿಜೆಪಿ ಸರ್ಕಾರದ ರಚನೆಯಲ್ಲಿ ಅತೃಪ್ತ ಶಾಸಕರ ಸರ್ದಾರನಾಗಿ ಸಾಹುಕಾರ್ ರಮೇಶ್ ಜಾರಕಿಹೊಳಿ ಮುಖ್ಯ ಪಾತ್ರ ನಿಭಾಯಿಸಿ,ಹೊಸ ಸರ್ಕಾರದ ರಚನೆಯ ರೂವಾರಿಯಾದರು,ಈಗ ಬೆಳಗಾವಿ ಜಿಲ್ಲೆಯವರಾದ ಲಕ್ಷ್ಮಣ ಸವದಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ,ರಾಜ್ಯದ ಉಪ ಮುಖ್ಯಮಂತ್ರಿಯಾದರು ಅಥಣಿ ಕ್ಷೇತ್ರದಿಂದ …

Read More »

ಕೊನೆಯ ಕ್ಷಣದಲ್ಲಿ ಸಚಿವರ ಪಟ್ಟಿಯಿಂದ ಉಮೇಶ್ ಕತ್ತಿ ಔಟ್….!!!

ಬೆಳಗಾವಿ- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 10+3 ಸೂತ್ರಕ್ಕೆ ಬಿಜೆಪಿ ಹೈಕಮಾಂಡ್ ಸಮ್ಮತಿ ನೀಡದೇ ಇರುವದರಿಂದ ಕೇವಲ ಹತ್ತು ಜನ ಶಾಸಕರಿಗೆ ಮಾತ್ರ ಮಂತ್ರಿ ಭಾಗ್ಯ ಲಭಿಸಿದ್ದು ಬೆಳಗಾವಿ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕ ಉಮೇಶ್ ಕತ್ತಿ ಕೊನೆಯ ಕ್ಷಣದಲ್ಲಿ ಸಚಿವರ ಪಟ್ಟಿಯಿಂದ ಔಟ್ ಆಗಿದ್ದಾರೆ ಮಾಜಿ ಸಚಿವ ಉಮೇಶ್ ಕತ್ತಿ ಅವರು ಸಚಿವರಾಗ್ತಾರೆ ಎಂದು ಸ್ವತಃ ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಮಾದ್ಯಮಗಳ ಎದುರು ಹೇಳಿಕೆ ನೀಡಿದ್ದರು ಇಂದು ಮದ್ಯಾಹ್ನದವರೆಗೆ …

Read More »

ಉಮೇಶ್ ಕತ್ತಿಯ ಕೃಷಿಹೊಂಡ,ಶ್ರೀಮಂತರ ತೋಟಕ್ಕೆ ಸಾಹುಕಾರನ,ನೀರಾವರಿ.,..!!!!

ಉಮೇಶ್ ಕತ್ತಿಯ ಕೃಷಿಹೊಂಡ,ಶ್ರೀಮಂತರ ತೋಟಕ್ಕೆ ಸಾಹುಕಾರನ,ನೀರಾವರಿ.,..!!!! ಬೆಳಗಾವಿ- ನಾಳೆ ರಾಜ್ಯ ಸಚಿವ ಸಂಪುಟದ ವಿಸ್ತರಣೆ ನಡೆಯಲಿದೆ.ಜಿಲ್ಲೆಯ ಸಾಹುಕಾರ್,ರಮೇಶ್ ಜಾರಕಿಹೊಳಿ,ಉಮೇಶ್ ಕತ್ತಿ,ಮತ್ತು ಶ್ರೀಮಂತ ಪಾಟೀಲ ಅವರು ಮಂತ್ರಿಯಾಗುವದು ಬಹುತೇಕ ಖಚಿತವಾಗಿದೆ. ಯಾರಿಗೆ ಯಾವ ಖಾತೆ ? ಎನ್ನುವ ಲೆಕ್ಕಾಚಾರ ಈಗ ಶುರುವಾಗಿದೆ‌.ರಮೇಶ್ ಜಾರಕಿಹೊಳಿ ಅವರ ಬೇಡಿಕೆಯಂತೆ,ನೀರಾವರಿ,ಉಮೇಶ್ ಕತ್ತಿ ಅವರಿಗೆ ಕೃಷಿ,ಶ್ರೀಮಂತ ಪಾಟೀಲರಿಗೆ ತೋಟಗಾರಿಕೆ,ಇಲಾಖೆಯ ಖಾತೆಗಳು ಸಿಗುವ ಸಾದ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಕೃಷಿ ಬಜೆಟ್ ಮಂಡಿಸಿ ಇತಿಹಾಸ ಸೃಷ್ಠಿಸಿದ್ದ …

Read More »

ಅಧಿಕಾರಕ್ಕಿಂತ ಪಕ್ಷ ದೊಡ್ಡದು-ಅಭಯ ಪಾಟೀಲ

ಬೆಳಗಾವಿ- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಒಬ್ಬೊಬ್ಬರಾಗಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ ಆದ್ರೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಅಧಿಕಾರಕ್ಕಿಂತ ಪಕ್ಷ ದೊಡ್ಡದು ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ . ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ,ರಾಜ್ಯದಲ್ಲಿ ಸಮರೋಪಾದಿಯಲ್ಲಿ ನೆರೆಪರಿಹಾರದ …

Read More »

ಎಂ ಈ ಎಸ್ ನಿಷೇಧಿಸಲು ಬೆಳಗಾವಿಯಲ್ಲಿ ರಕ್ತ ಪತ್ರ….

ಬೆಳಗಾವಿ – ಗಡಿ ಭಾಗದ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುತ್ತಿರುವ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿ ಯನ್ನು ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಎಲ್ಲರ ಗಮನ ಸೆಳೆದಿದ್ದಾರೆ. ಗಡಿ ಸಂರಕ್ಷಣಾ ಆಯೋಗದ ಅದ್ಯಕ್ಷ ಕೆ. ಎಲ್  ಮಂಜುನಾಥ ಅವರಿಗೆ ಈ ಪತ್ರವನ್ನು ಸಮರ್ಪಿಸಿದ್ದಾರೆ.ಆಯೋಗದ ಅದ್ಯಕ್ಷರು ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಕನ್ನಡ ಸಂಘಟನೆಗಳು, ಮತ್ತು ಗಡಿಭಾಗದ ಬುದ್ಧಿಜೀವಿಗಳ …

Read More »