Home / Breaking News (page 49)

Breaking News

ಬೆಳಗಾವಿಯಲ್ಲಿ ಕಸ ರಸ್ತೆಗೆ ಚೆಲ್ಲಿದ್ರೆ ದಂಡ ಹಾಕ್ತಾರೆ ಹುಷಾರ್..!!

ಕಸ ವಿಲೇವಾರಿಗೆ ಸಹಕರಿಸಲು ಸಾರ್ವಜನಿಕರಿಗೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಮನವಿ ಬೆಳಗಾವಿ, -ಸಾರ್ವಜನಿಕರು ತಮ್ಮಲ್ಲಿ ಉತ್ಪತ್ತಿಯಾಗುವ ದೈನಂದಿನ ತ್ಯಾಜ್ಯವನ್ನು ಹಸಿ ಕಸ, ಒಣ ಕಸ & ಅಪಾಯಕಾರಿ ತ್ಯಾಜ್ಯವೆಂದು ಬೇರ್ಪಡಿಸಿ ಕಸ ಸಂಗ್ರಹಣಕಾರರಿಗೆ ನೀಡುವುದರೊಂದಿಗೆ ಬೆಳಗಾವಿ ನಗರವನ್ನು ಸ್ವಚ್ಛ ನಗರವನ್ನಾಗಿಸುವಲ್ಲಿ ಹಾಗೂ ಘನತ್ಯಾಜ್ಯ ವಸ್ತು ವಿಲೇವಾರಿ ನಿಯಮ 2016 ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಅವರು ತಿಳಿಸಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ …

Read More »

ಕೋಟೆ ಕೆರೆ ಆವರಣದಲ್ಲಿ,ಯೋಧರ ಸ್ಮರಣೆಗೆ ಶಿಲಾಫಲಕ…

ಕೋಟೆ ಕೆರೆ ಆವರಣದಲ್ಲಿ ಅಮೃತ ವಾಟಿಕಾ ನಿರ್ಮಾಣಕ್ಕೆ ಚಾಲನೆ; ಸ್ವಾತಂತ್ರ್ಯ ಯೋಧರ ಸ್ಮರಣೆಗೆ ಶಿಲಾಫಲಕ ಬೆಳಗಾವಿ, .-ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ “ನನ್ನ ಮಣ್ಣು ನನ್ನ ದೇಶ” (ಮೇರಿ ಮಾಟಿ ಮೇರಿ ದೇಶ್) ಅಭಿಯಾನದಡಿಯಲ್ಲಿ ಇಂದು ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಕೋಟೆಕೆರೆ ಆವರಣದಲ್ಲಿ ಸ್ವಾತಂತ್ರ್ಯ ಯೋಧರ ಹೆಸರುಗಳನ್ನು ಒಳಗೊಂಡಿರುವ ಶಿಲಾಫಲಕ (ಸ್ಮಾರಕ) ಸಮರ್ಪಣೆ ಕಾರ್ಯಕ್ರಮ ನಡೆಯಿತು. ಮಹಾಪೌರರಾದ ಶೋಭಾ ಸೋಮನಾಚೆ, ಸಂಸದರಾದ ಮಂಗಲ ಅಂಗಡಿ, ಉಪಮಹಾಪೌರರಾದ …

Read More »

ಸಿಎಂ ಡಿಸಿಎಂ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಪ್ರಕಾಶ್ ಹುಕ್ಕೇರಿ.

ಬೆಳಗಾವಿ-ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾದ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಪ್ರಕಾಶ್ ಹುಕ್ಕೇರಿಯವರು ಅಭಿನಂದನೆ ಸಲ್ಲಿಸಿದರು ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ಅವರಿಗೆ ಸಂಪುಟ ದರ್ಜೆಯ ಸರ್ಕಾರದ ದೆಹಲಿ ಪ್ರತಿನಿಧಿಯ ಸ್ಥಾನ ಸಿಕ್ಕಿರುವ ವಿಚಾರ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತ ರಲ್ಲಿ ಹೊಸ ಹುಮ್ಮಸ್ಸು ನೀಡಿದೆ.ಪ್ರಕಾಶ್ ಹುಕ್ಕೇರಿ ಅವರಿಗೆ ಅಭಿನಂದನೆಗಳ …

Read More »

ಪಾಲಿಕೆ ಅಧಿಕಾರಿ ಮನೆ ಮೇಲೆ, ಲೋಕಾಯುಕ್ತ ದಾಳಿ,ಅಲ್ಲಿ ಸಿಕ್ಕದ್ದೇ ಬೇರೆ…!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿ ,ಸಂತೋಷ ಅನಿಶೆಟ್ಟರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಅಲ್ಲಿ ಸಿಕ್ಕಿದ್ದೇ ಬೇರೆ, ಬೆಳಗಾವಿ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಾಗಿದ್ದ ಸಂತೋಷ ಅವರ ಮನೆ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.ಸಂತೋಷ ಮನೆಯ ಪರಿಶೀಲನೆ ವೇಳೆ ಸ್ಕಾಚ್ ಮದ್ಯದ ಬಾಟಲಿ ಪತ್ತೆಯಾಗಿವೆ. ಬೆಳಗಾವಿಯ ಸುಭಾಷ್ ನಗರದ ಅಪಾರ್ಟ್ಮೆಂಟ್‌ನಲ್ಲಿ ಬಾಡಿಗೆಯಿದ್ದ ಸಂತೋಷ ಅನಿಶೆಟ್ಟರ್ ಅವರ ಮನೆಯಲ್ಲಿ,ಬ್ಲ್ಯಾಕ್ ಆ್ಯಂಡ್ ವೈಟ್, ರಾಯಲ್ ಸ್ಟ್ಯಾಗ್, ತಂಪು …

Read More »

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸ್ಥಗಿತಗೊಳ್ಳುವದಿಲ್ಲ…

  ಬೆಳಗಾವಿ – ರಾಜ್ಯಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕಾ ಶಕ್ತಿ ಯೋಜನೆ ಜಾರಿಗೆ ತಂದಿದ್ದು ,ಈ ಯೋಜನೆ ಶೀಫ್ರದಲ್ಲೇ ಬಂದ್ ಆಗಲಿದೆ ಎಂದು ಕಿಡಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದು ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ,ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ನಿಲ್ಲಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ.ಈ ಯೋಜನೆ ಎಂದಿನಂತೆ ಮುಂದುವರೆಯಲಿದೆ. ಯೋಜನೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ …

Read More »

ಬೆಳಗಾವಿಯಲ್ಲಿ ಇಂದು ಪತ್ತೆಯಾದ ಎರಡು ಶವಗಳ ಕಣ್ಣೀರ ಕಹಾನಿ….!!

ಬೆಳಗಾವಿ- ಇವತ್ತು ಬೆಳಗ್ಗೆ ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಎರಡು ಶವಗಳು ಪತ್ತೆಯಾಗಿದ್ದು ಎರಡೂ ಶವಗಳ ಗುರುತು ಪತ್ತೆಯಾಗಿದೆ.ಸತ್ತವರು ಇಬ್ಬರೂ ಬೇರೆ,ಬೇರೆ,ಇವರಿಬ್ಬರ ಸಾವಿಗೆ ಕಾರಣ ಬೇರೆ ಬೇರೆ ಇದ್ದರೂ ಇಬ್ಬರೂ ಪ್ರತ್ಯೇಕವಾಗಿ ಒಂದೇ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಪತ್ನಿ ತೀರೀಕೊಂಡಿದ್ದಕ್ಕೆ ನೊಂದ ಪತಿ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟರೆ,ತಾಯಿ ತೀರಿಕೊಂಡು ನೊಂದ ಮಗಳೂ ಸಹ ಅದೇ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಇಬ್ಬರ ಶವಗಳು …

Read More »

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೊಳಗಿದ ನಾಡಗೀತೆ…!!!!

ಬೆಳಗಾವಿ-ಕನ್ನಡ- ಮರಾಠಿ ವಾಗ್ವಾದ,ಎಂಇಎಸ್ ಪುಂಡಾಟಿಕೆಗೆ ಗುರಿಯಾಗುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಇಂದು ಪಾಲಿಕೆಯ ಇತಿಹಾಸದಲ್ಲಿ ಎರಡನೇಯ ಬಾರಿಗೆ ನಾಡಗೀತೆ ಮೊಳಗಿತು. ಇಂದು ಪಾಲಿಕೆಯ ಸಾಮಾನ್ಯಸಭೆಯಲ್ಲಿ ಮಹಾಪೌರ ಶೋಭಾ ಸೋಮನ್ನಾಚೆ ಅವರ ಸೂಚನೆ ಮೇರೆಗೆ ನಾಡಗೀತೆಯನ್ನು ನುಡಿಸಲಾಯಿತು ಎಂಇಎಸ್ ನಗರಸೇವಕರು ಸೇರಿದಂತೆ ಎಲ್ಲ ನಗರ ಸೇವಕರು ಎದ್ದು ನಿಂತು ಗೌರವ ಸಲ್ಲಿಸಿದ್ದು ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯ ವಿಶೇಷ. ಎಂಇಎಸ್ ಕಿರಿಕ್… ಪಾಲಿಕೆ ಸಭೆಯಲ್ಲಿ ನಾಡಗೀತೆ ಮುಗಿದ ಬಳಿಕ …

Read More »

ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಎರಡು ಶವ ಪತ್ತೆ…

  ಬೆಳಗಾವಿ- ಬೆಳಗಾವಿಯ ಕಪಲೇಶ್ವರ ಮಂದಿರದ ಹತ್ತಿರವಿರುವ ಕಪಿಲೇಶ್ವರ ಹೊಂಡದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಎರಡು ಶವಗಳು ಪತ್ತೆಯಾಗಿವೆ. ಒಂದು ಹೆಣ್ಣು ಒಂದು ಗಂಡು ಹೀಗೆ ಎರಡು ಶವಗಳು ಕಪಿಲೇಶ್ವರ ಹೊಂಡದಲ್ಲಿ ತೇಲಾಡುತ್ತಿವೆ.ಎರಡು ಶವಗಳ ಮುಖ ಕೆಳಗಾಗಿದ್ದರಿಂದ ಶವಗಳ ಗುರುತು ಪತ್ತೆಯಾಗಿಲ್ಲ ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ್ದು ಶವಗಳನ್ನು ಗುರುತಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಸದ್ಯಕ್ಕೆ ಒಂದು ಹೆಣ್ಣು ಒಂದು ಪುರುಷನ ಶವ ಎಂದು ಗೊತ್ತಾಗಿದೆ.ಕಪಿಲೇಶ್ವರ ಹೊಂಡದ ಸುತ್ತಲು ಜನ …

Read More »

ಬೆಳಗಾವಿಯ ಹಳ್ಳಿಯಲ್ಲಿ ಕಂಡ ಕನಸು ಉಡುಪಿಯಲ್ಲಿ ನನಸಾಯಿತು…!!

ಬೆಳಗಾವಿ: ಇಂದಿನ ಕಾಲದಲ್ಲಿ ಮಹಿಳೆಯರು ರಾಜಕೀಯ ರಂಗದಲ್ಲಿ ಮುಂದೆ ಬರುವುದು ಅಪರೂಪ. ಆದರೆ, ಇದಕ್ಕೆ ಅಪವಾದವೆಂಬಂತೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಪುಟ್ಟ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿ, ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕಾರಣ ಆರಂಭಿಸಿ ರಾಜ್ಯಮಟ್ಟದ ನಾಯಕಿಯಾಗಿ ಹೊರಹೊಮ್ಮಿರುವುದು ಮಹತ್ಸಾಧನೆಯೇ ಸರಿ. ಬಿಎ ಪದವಿ ಪಡೆದರೂ ಗೃಹಿಣಿಯಾಗಿ ಜೀವನ ಆರಂಭಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕಾರಣಕ್ಕೆ ಬಂದಿದ್ದೇ ಆಕಸ್ಮಿಕ. ಅಕ್ಷರಸ್ಥೆಯಾಗಿದ್ದ ಹೆಬ್ಬಾಳ್ಕರ್ ಗೌಡ್ರ ಮನೆತನದ ಮಹಿಳೆಯಾಗಿ ಸಾಮಾಜಿಕ ವ್ಯವಸ್ಥೆ ಬಗ್ಗೆ …

Read More »

ಸ್ವಾತಂತ್ರ್ಯೋತ್ಸವ ದಿನದಂದೇ ಬೆಳಗಾವಿ ವಿಭಜನೆಯ ಘೋಷಣೆ…!!

ಬೆಳಗಾವಿ- ಬೆಳಗಾವಿ ನಗರ ತಾಲ್ಲೂಕು ಬೆಳಗಾವಿ ಗ್ರಾಮೀಣ ತಾಲ್ಲೂಕು ಎಂದು ಬೆಳಗಾವಿ ತಾಲ್ಲೂಕು ವಿಭಜನೆ ಮಾಡಲು ನಿರ್ಧರಿಸಲಾಗಿದೆ ಈ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿ ತಾಲ್ಲೂಕು ವಿಭಜನೆ ಆಗೋದು ಖಚಿತ,ಆದ್ರೆ ಅದನ್ನು ಯಾವ ರೀತಿ ವಿಭಜಿಸಬೇಕು ಅನ್ನೋದರ ಬಗ್ಗೆ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು. ಬೆಳಗಾವಿ ಜಿಲ್ಲೆ ವಿಭಜನೆಯ ಬಗ್ಗೆ ಈಗಾಗಲೇ ಜಿಲ್ಲೆಯ ಶಾಸಕರ ಜೊತೆ ಒಂದು …

Read More »