ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಮನೆಯಲ್ಲಿ ನಡೆಸುತ್ತಿರುವ ಮಗ್ಗಗಳನ್ನು ಕಮರ್ಷಿಯಲ್ ಎಂದು ಪರಗಣಿಸಿ ದುಪ್ಪಟ್ಟು ತೆರಿಗೆ ಹಾಗು ದಂಡ ವಸೂಲಿ ಮಾಡುತ್ತಿದ್ದು ನೇಕಾರರ ಉದ್ಯಮ ಸಂಕಷ್ಟದಲ್ಲಿದ್ದು ನೇಕಾರರನ್ನು ಕಮರ್ಷಿಯಲ್ ಎಂದು ಪರಗಣಿಸಬೇಡಿ ರೆಸಿಡೆನ್ಸಿಯಲ್ ಎಂದು ಪರಿಗಣಿಸುವಂತೆ ಬಡ ನೇಕಾರ ಬಂಧುಗಳು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು ಮಾಜಿ ಶಾಸಕ ಅಭಯ ಪಾಟೀಲ ಅವರು ಈ ಹಿಂದೆ ನೇಕಾರರ ದಂಡ ವಸೂಲಿ ತಡೆಯುವಂತೆ ಪ್ರತಿಭಟನೆ ನಡೆಸಿ ನೇಕಾರರ ಪರವಾಗಿ ಕಳ ಕಳಿ …
Read More »ಬೆಳಗಾವಿ ಐನಾಕ್ಸ ಥೇಟರ್ ಸೀಜ್..
ಬೆಳಗಾವಿ- ನಗರದಲ್ಲಿರುವ ಐನಾಕ್ಸ ಚಿತ್ರಮಂದಿರದ ಕ್ಯಾಂಟೀನ್ ದಲ್ಲಿ ಆಹಾರ ಪದಾರ್ಥ ಮತ್ತು ನೀರಿನ ಬಾಟಲ್ ಗಳಿಗೆ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಜಯರಾಮ ಅವರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಚಿತ್ರಮಂದಿರದ ಮೇಲೆ ಹಠಾತ್ ದಾಳಿ ಮಾಡಿ ಚಿತ್ರಮಂದಿರವನ್ನು ಸೀಜ್ ಮಾಡಿದ್ದಾರೆ ಬೆಳಗಾವಿ ಎಸಿ ಕವಿತಾ ಯೋಗಪ್ಪನವರ, ತಹಸೀಲ್ದಾರ ಗಿರೀಶ ಸ್ವಾಧಿ ನೇತೃತ್ವದ ತಂಡದಿಂದ ದಾಳಿ ನಡೆಸಿ ಸೀಜ್. ಮಾಡಿದೆ ಐನಾಕ್ಸ ಮಾಲನಲ್ಲಿ ದುಬಾರಿ ಬೆಲೆಯಲ್ಲಿ …
Read More »ಹೈಕೋರ್ಟ ಆದೇಶ ಬಂದರೂ ಅತಿಕ್ರಮಣ ತೆರವು ಮಾಡದ PWD ಗೆ ದಿಕ್ಕಾರ..!
ಬೆಳಗಾವಿ- ಬೆಳಗಾವಿ ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆದಾಗ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೇ ಬಡವರ ಮನೆಗಳ ಮೇಲೆ ಬೋಲ್ಡೇಝರ್ ಚಲಾಯಿಸಿದರು ಬಡವರ ಅಂಗಡಿಗಳಲ್ಲಿ ಜೆಸಿಬಿ ಸೊಂಡೆಯಿಂದ ಅತೀಕ್ರಮಣ ತೆರವು ಮಾಡಿ ರಸ್ತೆ ಅಗಲೀಕರಣ ಮಾಡಿದ್ದು ಬೆಳಗಾವಿಯ ಇತಿಹಾಸ ಬೆಳಗಾವಿ ಖಾನಾಪೂರ ರಸ್ತೆಯಲ್ಲಿ ಬಸವೇಶ್ವರ ಸರ್ಕಲ್ ನಿಂದ ಪೀರನವಾಡಿ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ನಡೆಯಿತು ಈ ರಸ್ತೆ ಕಾಮಗಾರಿಯನ್ನು ಆಗಿನ ಮಹಾಪೌರರಾಗಿದ್ದ ಕಿರಣ ಸೈನಾಯಕ ಅವರೇ ಉದ್ಘಾಟಿಸಿದ್ದರು ಅದಕ್ಕೆ ಆಗಿನ ಜಿಲ್ಲಾ …
Read More »ಬೆಳಗಾವಿಯಲ್ಲಿ ATM ಮುಂದೆ ಸರದಿ ಸಾಲು..ಗ್ರಾಹಕರ ದಿಕ್ಕಾಪಾಲು
ಬೆಳಗಾವಿ- ಬೆಳಗಾವಿ ನಗರದ ಎಟಿಎಂ ಗಳ ಮುಂದೆ ಮತ್ತೆ ಸರದಿಯಲ್ಲಿ ನಿಂತು ಹಣ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ನಗರದ ಕೆಲವು ಕಡೆ ಎಟಿಎಂ ಗಳ ಮುಂದೆ ಜನ ಕ್ಯು ನಿಂತಿರುವದನ್ನು ಕಂಡರೆ ಇನ್ನು ಕೆಲವು ಕಡೆ ನೋ ಕ್ಯಾಶ್ ಎನ್ನುವ ಫಲಕಗಳು ಕಾಣಿಸುತ್ತಿವೆ ಕೇಂದ್ರ ಸರ್ಕಾರ 500 ಹಾಗು ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿದ ಬಳಿಕ ಬ್ಯಾಂಕಿನ ಗ್ರಾಹಕರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಂದಿನಿಂದ ಇಂದಿನವರೆಗೆ …
Read More »ನೋ ಪಾಲಿಟಿಕ್ಸ ಓನ್ಲೀ ರಿಲ್ಯಾಕ್ಸ..ಸತೀಶ ಸಾಹುಕಾರ್…!
ಬೆಳಗಾವಿ-ರಾಜಕೀಯ ಕಿತ್ತಾಟ ಅಧಿಕಾರ ಪಡೆಯಲು ನಡೆದಿರುವ ಪರಾಟ ರಾಜಕೀಯ ತಂತ್ರ ಮಂತ್ರ ಗಳಿಂದ ದೂರ ಉಳಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಈಗ ನೋ..ಪಾಲಿಟಿಕ್ಸ ಓನ್ಲೀ ರಿಲ್ಯಾಕ್ಸ ಎನ್ನುವ ಮೂಡ್ನಲ್ಲಿದ್ದಾರೆ ಮಹಾರಾಷ್ಟ್ರದ ರಾಯಗಡ ಗೆ ತೆರಳಿದ ಸತೀಶ ಸಾಹುಕಾರ್ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ತಿಳಿದುಕೊಂಡು ಬುದ್ಧ.ಬಸವ.ಅಂಬೇಡ್ಕರ್ ಜೊತೆ ಶಿವಾಜಿ ಮಹಾರಾಜರನ್ನು ಸೇರಿಸಿ ಮಾನವ ಬಂಧುತ್ವವವನ್ನು ಇಮ್ಮಡಿ ಗೊಳಿಸುವ ಪ್ರಯತ್ನದಲ್ಲಿದ್ದಾರೆ ರಾಯಗಡದಲ್ಲಿರುವ ಶಿವಾಜಿ ಮಹಾರಾಜರ ವಿಶಾಲ ಕೋಟೆಯಲ್ಲಿ ಏನೆಲ್ಲ …
Read More »ಹೆಣ್ಣು ಬ್ರೂಣ ಹತ್ಯೆ ,ಡಾಕ್ಟರ್ ಬಂಧನ…
ಬೆಳಗಾವಿ- ಬೆಳಗಾವಿಯಲ್ಲಿ ಹೆಣ್ಣುಭ್ರೂಣ ಹತ್ಯೆ ಪ್ರಕರಣಕ್ಜೆ ಸಮಂಧಿಸಿದಂತೆ ಬೆಳಗಾವಿ ಪೋಲೀಸರು ಬಿ.ಎಚ.ಎಸ.ಎಂ ವೈದ್ಯ ಬಸವರಾಜ ಪುಗ್ತ್ಯಾನಟ್ಟಿ ಬಂಧಿಸಿದ್ದಾರೆ ಬೆಳಗಾವಿ ಖಡೇಬಜಾರ ಪೊಲೀಸರಿಂದ ಕಿರಾತಕ ವೈದ್ಯನ ಬಂಧನ ಮಾಡಲಾಗಿದೆ ಬೆಳಗಾವಿ ಡಿ.ಎಚ.ಒ ಅಪ್ಪಾಸಾಬ ನರಟ್ಟಿಯಿಂದ ವೈದ್ಯನ ವಿರುದ್ಧ ದೂರು ದಾಖಲು ಹಿನ್ನಲೆಯಲ್ಲಿ ವೈದ್ಯನ ಬಂಧನ ಮಾಡಲಾಗಿದೆ ಆರೋಗ್ಯ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ವೈದ್ಯ ಬಸವರಾಜ ಗರ್ಭಪಾತಕ್ಕೆ ಯತ್ನಿಸಿದ್ದು ಕಂಡು ಬಂದಿದೆ ವೈಷ್ಣವಿ ಮೋಹಿತೆ ಎಂಬ ಮಹಿಳೆ ಗರ್ಭಪಾತ ಮಾಡಿದ್ದ ವೈದ್ಯ ತಾಯಿಯ …
Read More »ಪೋಲೀಸರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಕೊಡಿ
ಮಹಿಳಾ ದೌರ್ಜನ್ಯದ ವಿವಿಧ ರೂಪವನ್ನು ಕಂಡಿದ್ದೇನೆ. ಬೆಳಗಾವಿ ಸುತ್ತಲಿನ ೭ ಜಿಲ್ಲೆಗಳನ್ನು ಸೇರಿಸಿ ಮಹಿಳೆ ಸಬಲೆ ಎಂದು ಸಾಬೀತು ಪಡಿಸಲು ಈ ಕಾರ್ಯಾಗಾರ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಪ್ರಾಸ್ತಾವಿಕದಲ್ಲಿ ಹೇಳಿದರು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲು ಬೆಳಗಾವಿ ಇದರ ಸಹಯೋಗದಲ್ಲಿ ಇಂದಿನ ಮಹಿಳೆ ಎದುರಿಸುತ್ತಿರುವ ಸವಾಲುಗಳು ಹಾಗೂ ಮಹಿಳಾ ಸಬಲೀಕರಣ ವಿಭಾಗಮಟ್ಟದ ಮಹಿಳಾ ಕಾರ್ಯಾಗಾರವನ್ನು ಮಂಗಳವಾರ ಇಲ್ಲಿನ ವಿಟಿಯು …
Read More »ರೋಹನ್ ಸತ್ತಿಲ್ಲ ಆತ ಬಂದೇ ಬರ್ತಾನೆ….. ರೋಹನ್ ತಾಯಿ.
ಬೆಳಗಾವಿ – ಕಳೆದ ಎರಡು ವರ್ಷದಿಂದ ರೋಹಣ ರೇಡೇಕರ ಕಿಡ್ನ್ಯಾಪ್ ಆದಾಗಿನಿಂದ ಕಣ್ಣೀರಧಾರೆಯಲ್ಲಿ ನಿತ್ಯ ಮುಖತೊಳೆದುಕೊಳ್ಳುತ್ತಿರುವ ಆತನ ತಾಯಿ ತನ್ನ ಮಗ ಸತ್ತಿದ್ದಾನೆ ಎಂದು ಈ ತಾಯಿ ನಂಬುತ್ತಲೇ ಇಲ್ಲ ನನ್ನ ಮಗ ಸತ್ತಿಲ್ಲ ಆತ ತನ್ನ ಬಳಿ ಬಂದೇ ಬರ್ತಾನೆ ಪೋಲೀಸರು ಸುಳ್ಳು ಹೇಳುತ್ತಿದ್ದರೆ ಅಂತಾಳೆ ರೋಹಣ ತಾಯಿ ರೇಣುಕಾ ಇಂದು ತಾಯಂದಿರ ದಿನ ಮಕ್ಕಳೆಲ್ಲರೂ ತಮ್ಮ ತಾಯಂದಿರುಗಳಿಗೆ ಶುಭಾಶಯ ಹೇಳಿ ಗಿಫ್ಟ ಕೊಡುತ್ತಿದ್ದರೆ ಇತ್ತ ರೋಹಣ ತಾಯಿ …
Read More »ಬ್ಯಾಂಕ್ ದರೋಡೆ 5kg ಬಂಗಾರ ಕಳುವು..!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಡಿಸಿಸಿ ಬ್ಯಾಂಕನ ಹೆಬ್ಬಾಳ ಶಾಖೆಯಲ್ಲಿ ಶುಕ್ರವಾರ ಮದ್ಯ ರಾತ್ರಿ ಬ್ಯಾಂಕಿನ ಕಿಡಕಿ ಮುರಿದು ಗ್ರಾಸ್ ಕಟರ ಮುಖಾಂತರ ಲಾಕರ್ ಮುರಿದು ಸುಮಾರು ೨೮ ಲಕ್ಷ, ರೂ ಹಣ ಮತ್ತು ೫ ಕೆಜಿ ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ ಇಂದು ಬೆಳಿಗ್ಗೆ ಬ್ಯಾಂಕ ಮ್ಯಾನೇಜರ ಬಂದು ಚೆಕ್ ಮಾಡಿದಾಗ. ಕಳ್ಳತನ ಆಗಿರುವದರ ಬಗ್ಗೆ ಗಮನಕ್ಕೆ ಬಂದಿದೆ. ಇನ್ನು ಬ್ಯಾಂಕಗೆ ಬೆಳಗಾವಿ ಎಸ್ಪಿ ರವಿಕಾಂತೇಗೌಡ, ಶ್ವಾನ …
Read More »ನದಾಫ್ ನಜೀರ್ ಭೂಗತ ಲೋಕದ ವಜೀರ್..!
ಬೆಳಗಾವಿ: ಬೆಳಗಾವಿಯಲ್ಲಿ ಭೂಗತ ಲೋಕದ ಡಾನ್ ಗಳ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿ ಜೀವದ ಹಂಗು ತೊರೆದು ಪಾತಕಿಗಳ ಬೆನ್ನಟ್ಟಿದ ಬೆಳಗಾವಿ ನಗರದ ಪೊಲೀಸರು ಹಲವಾರು ಕೊಲೆ ಮತ್ತು ಅಪಹರಣ ಪ್ರಕರಣಗಳನ್ನು ಬೇಧಿಸಿ ಭೂಗತ ಲೋಕದ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಭೂಗತ ಲೋಕದ ಪಾತಕಿಗಳಿಗೆ ತನ್ನ ಫಾರ್ಮ್ ಹೌಸ್ ನಲ್ಲಿ ಆಶ್ರಯ ನೀಡಿ ಬೆಳಗಾವಿ ನಗರದ ಕೋಟ್ಯಾಧೀಶರ ಬಗ್ಗೆ ಮಾಹಿತಿ ನೀಡಿ ಪಾತಕಿಗಳನ್ನು ಸಂರಕ್ಷಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ …
Read More »