ಬೆಳಗಾವಿ:ಕಬ್ಬಿಗೆ ೩೨೦೦ ರೂ ದರ ನಿಗದಿ ಮಾಡುವಂತೆ ಆಗ್ರಹಿಸಿ ಕುಣಿಗಲ್ ತಾಲೂಕಿನ ಚಂದ್ರಾ ಎಂಬ ರೈತ ಬೆಳಗಾವಿಯ ಸುವರ್ಣ ಸೌಧ ಎದುರಿನ ಮೋಬೈಲ್ ಟವರ್ ಏರಿ ಕುಳಿತುಕೊಂಡಿದ್ದು ಸರ್ಕಾರಕ್ಕೆ ಒಂದು ಘಂಟೆಯ ಗಡುವು ನೀಡಿದ್ದಾನೆ ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ್ದು ರೈತನನ್ನು ಮೊನವೊಲಿಸುತ್ತಿದ್ದಾರೆ ಸುವರ್ಣ ವಿಧಾನಸೌಧದ ಎದುರು ಟವರ್ ಏರಿ ಕುಳಿತು ರೈತ ಯುವಕನ ಪ್ರತಿಭಟನೆ. ಕಳೆದ ಮೂರು ದಿನಗಳಿಂದ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿದ್ರು ಸಿಎಂ ಕ್ಯಾರೆ …
Read More »ಬೆಳಗಾವಿ ಮೇಯರ್ ನಡೆಯಿಂದ ನೋವಾಗಿದೆ-ರೋಷನ್ ಬೇಗ್
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದ ನಂತರವು ಅವರು ಮುಂಬೈ ಮೇಯರ್ಗೆ ಭೇಟಿಯಾಗಿರುವ ವಿಷಯ ತಮಗೂ ಹಾಗೂ ಮುಖ್ಯಮಂತ್ರಿಗಳಿಗೂ ನೋವನ್ನುಂಟು ಮಾಡಿದೆ ಈ ಬಗ್ಗೆ ಬುಧವಾರ ಸಂಜೆ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಅವರ ವಿರದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆನ್ನುವದರ ಬಗ್ಗೆ ತಿರ್ಮಾಣ ಕೈಗೊಳ್ಳಲಾಗುವುದೆಂದು ನಗರಾಭಿವೃದ್ದಿ ಸಚಿವ ರೋಷನ ಬೇಗ ತಿಳಿಸಿದ್ದಾರೆ. ಸುವಣ್ ವಿಧಾನ ಸೌಧದಲ್ಲಿ ಅವರನ್ನು ಭೇಟಿಯಾದ …
Read More »ಬೆಳಗಾವಿಯ ವ್ಯಾಕ್ಸೀನ್ ಡಿಪೋ ಗೆ ಅಭಿವೃದ್ಧಿಯ ಭಾಗ್ಯ..!
ಬೆಳಗಾವಿ- ನಗರದ ಹೃದಯ ಭಾಗದಲ್ಲಿರುವ ವ್ಯಾಕ್ಸೀನ್ ಡಿಪೋ ಅಭವೃದ್ಧಿಗೆ ಸಮಂಧಿಸಿದಂತೆ ಬುಧವಾರ ಬೆಳಿಗ್ಗೆ ಮಹತ್ವದ ಸಭೆ ನಡೆಯಿತು ಆರೋಗ್ಯ ಸಚಿವ ರಮೇಶ ಕುಮಾರ,ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಹಾಗು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಭೆಯಲ್ಲಿ ಭಾಗವಹಿಸಿದ್ದರು ಆರೋಗ್ಯ ಇಲಾಖೆ ನಗರದ ವ್ಯಾಕ್ಸೀನ್ ಡಿಪೋದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವ ಯೋಜನೆ ರೂಪಿಸಲಾಗಿದೆ ಈ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಲಾಯಿತು ವ್ಯಾಕ್ಸೀನ್ ಡಿಪೋದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಬೇಕು ಹಣ್ಣಿನ …
Read More »ರಾಯಣ್ಣ ಬ್ರಿಗೇಡ್ ಗೆ ಬಿಜೆಪಿಯಿಂದ ಗ್ರೀನ್ ಸಿಗ್ನಲ್-ಈಶ್ವರಪ್ಪ
ಬೆಳಗಾವಿ- ಪ್ರಾರಂಭದಲ್ಲಿ ಯಡಿಯೂರಪ್ಪ ಬ್ರಿಗೇಡ್ ಹೊಗಬೇಡಿ ಎಂದು ಹೇಳಿದ್ದು ನಿಜ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯರ್ಶಿ ರಾಮಲಾಲ್ ಸಲಹೆ ಮೇರೆಗೆ ಬಿ ಎಸ್ ವೈ ಚರ್ಚೆ ನಡೆಸಲಾಗಿದೆ. ಪರಿವಾರದ ಹಿರಿಯರ ಸಮ್ಮುಖದಲ್ಲಿ ನಾನು ಬಿ ಎಸ್ ವೈ ಚರ್ಚೆ ಮಾಡಿದ್ದೆವೆ. ಸಂಗೊಳ್ಳಿ ರಾಯಣ್ಣ ಬ್ರೀಗೆಡಗೆ ಈಗ ಯಡಿಯೂರಪ್ಪ ವಿರೋಧವಿಲ್ಲ. ರಾಯಣ್ಣ ಬ್ರಿಗೇಡ್ ಸಂಘಟನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ ಬ್ರಿಗೇಡ್ ಮುಂದುವರಿಸಲು …
Read More »ಕಸದ ಪ್ರಶ್ನೆ ಕಸದ ಬುಟ್ಟಿಗೆ……
ಬೆಳಗಾವಿ- ಬೆಳಗಾವಿ ನಗರದಲ್ಲಿ ಸಂಗ್ರಹ ವಾಗುವ ಕಸವನ್ನು ಸಮೀಪದ ತುರಮರಿ ಗ್ರಾಮದಲ್ಲಿ ಡಂಪ್ ಮಾಡಲಾಗುತ್ತಿದೆ ಇಲ್ಲಿರುವ ತ್ಯಾಜ್ಯ ಘಟಕದಿಂದ ಿಲ್ಲಿಯ ಜನ ತತ್ತರಿಸಿ ಹೋಗಿದ್ದಾರೆ ಈ ಕಚರಾ ಡಿಪೋ ಸ್ಥಳಾಂತರ ಮಾಡುವ ಕುರಿತು ಸರ್ಕಾರದ ಗಮನ ಸೆಳೆಯಲು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಶಾಸಕ ಸಂಜಯ ಪಾಟೀಲ ನಿರ್ಧರಿಸಿ ಸಭಾಪತಿಗಳಿ ಅರ್ಜಿ ಸಲ್ಲಿಸಿದ್ದರು ಮಂಗಳವಾರ ಬೆಳಿಗ್ಗೆ 11 ಘಂಟೆಗೆ ನಡೆದ ಶೂನ್ಯ ವೇಳೆಯಲ್ಲಿ ಸಂಜಯ ಪಾಟೀಲರ ಪ್ರಶ್ನೆ ಪ್ರಾಸ್ತಾಪವಾಯಿತು ಆದರೆ ಈ …
Read More »ರೈತರೇನು ಡಕಾಯಿತರೇ. ಸರ್ಕಾರದ ವಿರುದ್ಧ ಪಿ ರಾಜೀವ ಗರಂ
ಬೆಳಗಾವಿ – ಮಹದಾಯಿ ಮತ್ತು ಕಾವೇರಿ ಗಲಾಟೆಯಲ್ಲಿ ರೈತರ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಅಮಾಯಕ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಕುಡಚಿ ಶಾಸಕ ಪಿ. ರಾಜೀವ ಒತ್ತಾಯಿಸಿದರು. ಮಂಗಳವಾರ ಸುವರ್ಣ ಸೌಧದಲ್ಲಿ ನಡೆದ ಬರಗಾಲದ ಚರ್ಚೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಕುಡುಚಿ ಶಾಸಕ ಮಾತನಾಡಿದರು. ನವಲಗುಂದ ತಾಲೂಕಿನ ಯಮನೂರಿನಲ್ಲಿ ರೈತರ ಮೇಲೆ ಅಮಾನವೀಯವಾಗಿ ಹಲ್ಲೆ …
Read More »ರೈತ ನಾಯಕರು ಸಕ್ಕರೆ ಸಚಿವರಿಗೆ ಏನಂದ್ರು ಗೊತ್ತಾ..?
ಬೆಳಗಾವಿ.ರಾಜ್ಯ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ಹಗ್ಗ ಜಗ್ಗಾಟ ನಡೆದಿದೆ. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಕ್ಕರೆ ಸಚಿವ ರೈತ ನಾಯಕರ ಜೊತೆ ನಡೆಸಿದ ಸಂಧಾನ ಸಭೆ ಸಂಪೂರ್ಣವಾಗಿ ವಿಫಲವಾಗಿದ್ದು ಹೋರಾಟವನ್ನು ಮುಂದುವರೆಸಲು ರೈತ ನಾಯಕರು ನಿರ್ಧರಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ರೈತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಸರ್ಕಾರ ಕಳೆದ ಮೂರು ವರ್ಷಗಳಿಂದ ಕಬ್ಬಿಗೆ ನಿರ್ದಿಷ್ಟವಾದ ಬೆಲೆಯನ್ನು ನಿಗದಿ ಮಾಡಿಲ್ಲ. …
Read More »ಸದನದ ಮೊದಲ ದಿನ…ಡ್ರಾಟ್ ಕದನ
ಬೆಳಗಾವಿ: ಚಳಿಗಾಲದ ಅಧಿವೇಶನದ ಮೊದಲ ದಿನ ಬರ ಪರಿಹಾರ ಕಾಮಗಾರಿಗಳ ನಿಧಾನ ಗತಿಯನ್ನು ವಿರೋಧಿಸಿ ಪ್ರತಿ ಪಕ್ಷ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತಗೆದುಕೊಂಡರು ಮದ್ಯಾನ್ಹದ ವೇಳೆಗೆ ವಿರೋದ ಪಕ್ಷದ ನಾಯಕ ಜಗದೀಶ ಶೆಟ್ಟರ ಮಾತನಾಡಿ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲು ಮುಂದಾದ ರೈತರನ್ನು ಬಂಧಿಸಿರುವ ಸರ್ಕಾರ ರೈತರ ವಿರೋಧಿಯಾಗಿದೆ ಅಧಿಕಾರಿಗಳು ಮಂತ್ರಿಗಳ ಮಾತು ಕೇಳುತ್ತಿಲ್ಲ ಅಧಿಕಾರಿಗಳ ಜಿಡ್ಡು ಇಳಿಸುವ ಪ್ರಯತ್ನವನ್ನು …
Read More »ಬೆಳಗಾವಿ ನಗರದಲ್ಲಿ ರಾಜಧಾನಿಯ ಕಳೆ..ಗೂಟದ ಕಾರುಗಳ ಕಹಳೆ…!
ಬೆಳಗಾವಿ-ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಆಧಿವೇಶನ ಸೋಮವಾರದಿಂದ ಆರಂಭವಾಯಿತು ರಾಜ್ಯ ಸರ್ಕಾರ ಗಂಟೆ ಮೂಟೆ ಕಟ್ಟಿಕೊಂಡು ಬೆಳಗಾವಿ ನಗರದಲ್ಲಿ ಠಿಖಾನಿ ಹೂಡಿದ್ದು ಬೆಳಗಾವಿ ನಗರಕ್ಕೆ ಈಗ ರಾಜಧಾನಿಯ ಕಳೆ ಬಂದಿದೆ ಸಚಿವರು,ಶಾಸಕರು ವಿಧಾನ ಪರಿಷತ್ತಿನ ಸದಸ್ಯರು ಹಾಗು ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಸೇತರಿದಂತೆ ಎಲ್ಲ ಜನ ಪ್ರತಿನಿಧಿಗಳು ಈಗ ಬೆಳಗಾವಿ ನಗರಕ್ಕೆ ಆಗಮಿಸಿದ್ದು ನಗರದಲ್ಲಿ ಗೂಟದ ಕಾರುಗಳ ಕಹಳೆ ಮೊಳಗಿದೆ ಅಧಿವೇಶನದ ಮೊದಲ ದಿನ ಆರಂಭದಲ್ಲಿ ಸೋಮವಾರ ಸದನ ಆರಂಭವಾಗುತ್ತಿದ್ದಂತೆ ಇತ್ತೀಚಿಗೆ …
Read More »ಎಂಈಎಸ್ ದುರಹಂಕಾರಿ…ಕಲಾಪ ಬಿಟ್ಟು ಪರಾರಿ…!
ಬೆಳಗಾವಿ-ಅಧಿವೇಶನದ ಮೊದಲ ದಿನವೇ ನಾಡ ವಿರೋಧಿ ಎಂಈಎಸ್ ಶಾಸಕರು ವಿಧಾನಸಭೆಯಲ್ಲಿ ತಮ್ಮ ಪುಂಡಾಟಿಕೆ ಪ್ರದರ್ಶಿಸಿದರು ಅಗಲಿದ ಗಣ್ಯರಿಗೆ ಶೃದ್ಧಾಂಜಲಿ ಅರ್ಪಿಸಿದ ಬಳಿಕ ಝಾಲಾಚ್ ಪಾಯಿಜೆ ಘೋಷಣೆ ಕೂಗಿ ಕಲಾಪ ಗಳಿಗೆ ಬಹಿಷ್ಕಾರ ಹಾಕಿ ಸಭತ್ಯಾಗ ಮಾಡಿದರು ಶಾಸಕ ರವಿಂದ ಪಾಟೀಲ ಸದನದಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಲು ಮುಂದಾದರು ಇದಕ್ಕೆ ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಶಾಸಕರು ಪ್ರತಿರೋಧ ವ್ಯಕ್ತಪಡಿಸಿದರು ಇವರಿಗೆ ಕನ್ನಡ ಮಾತನಾಡಲು ಬರುತ್ತದೆ ಹಿಂದಿಯಲ್ಲಿ …
Read More »