Breaking News
Home / Breaking News (page 90)

Breaking News

ಬಂಪರ್ ಲಾಟರಿ ಹೊಡೆದ ಶಾಸಕ ಅಭಯ ಪಾಟೀಲ…!!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ,ವಿಜಯಪೂರ ಮಹಾನಗರ ಪಾಲಿಕೆ,ಗೋವಾ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಹಗಲು ರಾತ್ರಿ ಶ್ರಮಸಿ ರಾಜ್ಯದ ಬಿಜೆಪಿ ನಾಯಕರ ಹಾಗೂ ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರೀತಿಗೆ ಪಾತ್ರರಾಗಿ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿರುವ ಶಾಸಕ ಅಭಯ ಪಾಟೀಲ ಬಂಪರ್ ಲಾಟರಿ ಹೊಡೆದಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕ್ಷೇತ್ರದ ಜನತೆಯಿಂದ ಮೀಸ್ಟರ್ …

Read More »

ಬೆಳಗಾವಿ ಮೇಯರ್ ಉಪ ಮೇಯರ್, ಖುರ್ಚಿಗೆ ಜಾತಿ ಆಧಾರಿತ ಕಸರತ್ತು ….!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ,ಭಾಷಾ ಆಧಾರಿತ ಚುನಾವಣೆ ಕೈಬಿಟ್ಟು, ಪಕ್ಷ ಆಧಾರಿತ ಚುನಾವಣೆ ನಡೆದು 58 ರಲ್ಲಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ. ಅನೇಕ ತಾಂತ್ರಿಕ,ಮತ್ತು ಕಾನೂನಾತ್ಮಕ ತೊಡಕುಗಳಿಂದಾಗಿ ಒಂದು ವರ್ಷದ ನಂತರ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.ಫೆಬ್ರುವರಿ 6 ರಂದು ಬೆಳಗಾವಿ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಇಲೆಕ್ಷನ್ ನಡೆಯಲಿದೆ. ಮೇಯರ್ ಸ್ಥಾನ …

Read More »

ಅಥಣಿ ಕಾಂಗ್ರೆಸ್ಸಿಗೆ ಹೊಸ ಶಕ್ತಿ ತುಂಬಿದ ಧರೆಪ್ಪ ಠಕ್ಕಣ್ಣವರ

ಬೆಳಗಾವಿ :ಅಥಣಿ ಮತ ವಿಧಾನಸಭಾ ಮತಕ್ಷೇತ್ರದಲ್ಲಿ ಯುವ ನಾಯಕ ಧರೆಪ್ಪ ಠಕ್ಕಣ್ಣವರ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಸಾಮಾಜಿಕ ಸೇವಾ ಕಾರ್ಯಗಳಿಂದ ಹಳ್ಳ-ಹಳ್ಳಿಗೂ ಚಿರಪರಿಚಿತರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಮಹೇಶ ಕುಮಠಳ್ಳಿ ಅವರು ಪಕ್ಷಾಂತರ ನಡೆಸಿದ್ದರಿಂದ ಅಥಣಿಯಲ್ಲಿ ಕಾಂಗ್ರೆಸ್ ಶೂನ್ಯಕ್ಕೆ ತಲುಪಿತ್ತು. ಈ ನಿಟ್ಟಿನಲ್ಲಿ ಅವರು ಪಕ್ಷ ಸಂಘಟನೆ ಜೊತೆ ಮತ್ತೆ ಹಿಂದಿನ ವರ್ಚಸ್ಸು ತರಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇಡೀ ಜಗತ್ತು …

Read More »

ಸುವರ್ಣ ವಿಧಾನಸೌಧ ಆವರಣದಲ್ಲಿ ಸಾವಿರಾರು ಜನರಿಂದ “ಯೋಗ”ಥಾನ್

ಬೆಳಗಾವಿ, : ಸೂರ್ಯದೇವನು ಪಥ ಬದಲಾಯಿಸಿದ ಸಂಕ್ರಮಣದ ಶುಭ ದಿನದಂದು ರಾಜ್ಯವನ್ನು ದೇಶದ ಮೊದಲ “ಯೋಗ ಸಾಕ್ಷರತಾ ರಾಜ್ಯ”ವನ್ನಾಗಿಸುವುದರ ಜತೆಗೆ ಯೋಗ ಪ್ರದರ್ಶನದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುವ ಭಾಗವಾಗಿ ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಭಾನುವಾರ (ಜ.15) ಬೃಹತ್ ಯೋಗಥಾನ್-2023 ಕಾರ್ಯಕ್ರಮ ನಡೆಯಿತು. ಮುಂಜಾನೆಯ ಮಂಜು ಮುಸುಕಿದ ವಾತಾವರಣದಲ್ಲಿ ನೇಸರನ ಹೊಂಗಿರಣಗಳ ಮಧ್ಯೆ ಸುವರ್ಣ ವಿಧಾನಸೌಧದ ಪಶ್ಚಿಮದ್ವಾರದ ಮೆಟ್ಟಿಲುಗಳ ಎದುರು ಸಾವಿರಾರು ಜನರು ಯೋಗ ಪ್ರದರ್ಶಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, …

Read More »

ಬೆಳಗಾವಿಯ ಹಿಂಡಲಗಾ ಜೈಲಿಗೆ ನಾಗಪೂರ ಪೋಲೀಸ್ರು ಬಂದಿದ್ದು ಯಾಕೆ ಗೊತ್ತಾ ??

ಬೆಳಗಾವಿ-ಹಿಂಡಲಗಾ ಜೈಲಿಗೆ ಬಂದಿರುವ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.ಬೆಳಗಾವಿಯಿಂದಲೇ ಕೇಂದ್ರ ‌ಹೆದ್ದಾರಿ ಸಚಿವ ನಿತೀನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಪೂರ ಪೋಲೀಸರು ಹಿಂಡಲಗಾ ಜೈಲಿಗೆ ದೌಡಾಯಿಸಿದ್ದಾರೆ.ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ‌ ಕೈದಿಯಿಂದಲೇ ನಿತೀನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.ಶನಿವಾರ ಬೆಳಗ್ಗೆ, ನಿತೀನ್ ಗಡ್ಕರಿ ಮೊಬೈಲ್‌ಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕಿರುವ ಕೈದಿಯ ವಿಚಾರಣೆಗೆ ನಾಗಪೂರ ಪೋಲೀಸರು ಬೆಳಗಾವಿಗೆ …

Read More »

ಯುವ ಸಮೂಹದ ಬಗ್ಗೆ ಲೇಖನ ಬರೆದ ಶಾಲಿನಿ ರಜನೀಶ್…

26 ನೇ ರಾಷ್ಟ್ರೀಯ ಯುವ ಜನೋತ್ಸವದ ಉಸ್ತುವಾರಿವಹಿಸಿಕೊಂಡಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಯುವ ಸಮೂಹದ ಸ್ಥಿತಿಗತಿಗಳ ಕುರಿತು ಸಮಗ್ರ ಲೇಖನ ಬರೆದಿದ್ದಾರೆ. *ರಾಷ್ಟೀಯ ಯುವಜನೋತ್ಸವದಲ್ಲಿ ಯುವ ಶೃಂಗಸಭೆ: ಯುವ ಸಮೂಹಕ್ಕೆ ಪ್ರೇರಣಾದಾಯಕ* ಡಾ ಶಾಲಿನಿ ರಜನೀಶ್‌ ಐಎಎಸ್‌ ಅಪರ ಮುಖ್ಯ ಕಾರ್ಯದರ್ಶಿಗಳು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ …

Read More »

ಬೆಳಗಾವಿ ಕಾಂಗ್ರೆಸ್ಸಿನಲ್ಲಿ , ಹಮ್ ಸಾಥ್ ಸಾಥ್ ಹೈ….!!

ಬೆಳಗಾವಿ- ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆ, ಕಾರ್ಯಕರ್ತರಿಗೆ ಅನೇಕ ಸಂದೇಶಗಳನ್ನು ನೀಡಿದೆ. ಈ ಸಂಧರ್ಭದಲ್ಲಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿರುವ ತಿಲಕವಾಡಿಯ ಐತಿಹಾಸಿಕ ವೀರಸೌಧದಲ್ಲಿ ಬಸ್ ಯತ್ರೆಗೆ ಚಾಲನೆ ಕೊಡುವ ಮೊದಲು ಗಾಂಧಿ ಟೋಪಿಧಾರಿಗಳಾಗಿದ್ದ ಮಾಜಿ ಶಾಸಕ ಫಿರೋಜ್ ಸೇಠ,ಹಾಗೂ ವಿಧಾನ ಪರಿಷತ್ ಸದಸ್ಯ ಚನ್ಬರಾಜ್ ಹಟ್ಟಿಹೊಳಿ ಕ್ಯಾಮೆರಾಗೆ ಫೋಜು ಕೊಟ್ಟು ಎಲ್ಲರ ಗಮನ ಸೆಳೆದರು. ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ …

Read More »

ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ರೇಸ್ ಮಹಾರಾಷ್ಟ್ರದಲ್ಲೂ ಫೇಮಸ್..!!

ಬೆಳಗಾವಿ- ಬೆಳಗಾವಿ ಮಹಾನಗರ,ವಿಭಿನ್ನ, ವಿಶಿಷ್ಟ,ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ.ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ರೇಸ್ ಪಕ್ಕದ ಮಹಾರಾಷ್ಟ್ರದಲ್ಲೂ ಪ್ರಭಾವ ಬೀರಿದೆ. ಅಂತರ್ ರಾಜ್ಯಗಳಲ್ಲಿ ಗಮನ ಸೆಳೆದಿರುವ ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ಓಟವನ್ನು ಬೆಳಗಾವಿಯ ಕುಲಕರ್ಣಿ ಗಕ್ಲಿಯ ಗವಳಿ ಸಮಾಜದವರು ಆಯೋಜನೆ ಮಾಡಿದ್ಸರು ಈ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಮುರುಘೇಂದ್ರ ಗೌಡ ಪಾಟೀಲ (ಕಣಬರ್ಗಿ) ಅವರು ಪ್ರಾಯೋಜಕತ್ವ ನೀಡಿದ್ದರು. ಎಮ್ಮೆಗಳ ರೇಸ್ ನಲ್ಲಿ ವಿಜೇತರಾದವರಿಗೆ ಮುರುಘೇಂದ್ರಗೌಡ್ರು ನಗದು ಬಹುಮಾನ ನೀಡಿ,ಗವಳಿ ಸಮಾಜ ಆಯೋಜಿಸಿದ …

Read More »

ಕೊನೆಗೂ,ಬೆಳಗಾವಿ ಮೇಯರ್ ಇಲೆಕ್ಷನ್ ಗೆ ಮುಹೂರ್ತ ಫಿಕ್ಸ್…!!

ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರ ಆಯ್ಕೆಗೆ ಫೆಬ್ರವರಿ 6, 2023 ರಂದು ಚುನಾವಣೆ ನಿಗದಿಪಡಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತರಾದ ಎಂ‌.ಜಿ.ಹಿರೇಮಠ ತಿಳಿಸಿದ್ದಾರೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ, ಉಪ ಮೇಯರ್ ಸ್ಣಾನ ಹಿದುಳಿದ ಬ ವರ್ಗದ ಮಹಿಳೆಗೆ ಮಿಸಲಿಡಲಾಗಿದೆ.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದು ಬಿಜೆಪಿ ಪಕ್ಷದಿಂದ ಚುನಾಯಿತರಾದ ನಗರಸೇವಕಿಯರು ಮೇಯರ್ ಉಪ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗುವದು ಖಚಿತವಾಗಿದೆ. ಫೆಬ್ರುವರಿ 6 …

Read More »

ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ , ಕುಕ್ಕರ್ ಅವಾಜ್…ಟೆಂಗಿನಕಾಯಿ ಫೈಟ್….!!!

ಬೆಳಗಾವಿ-ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಗ್ರಾಮೀಣದಲ್ಲಿ ಹಂಚಿಕೆಯಾದ ಕುಕ್ಕರ್ ಹಂಚಿಕೆಯಾಗುತ್ತಿರುವ ಮಿಕ್ಸರ್ ಜೊತೆಗೆ ಟೆಂಗಿನಕಾಯಿ ಪ್ರಮಾಣ ಸದ್ದು ಮಾಡಿದ್ದು ಈ ವಿಚಾರದ ಕುರಿತು ಮಾಜಿ ಶಾಸಕ ಸಂಜಯ ಪಾಟೀಲ ಮಾದ್ಯಮ ಮಿತ್ರರಜೊತೆ ವಾಗ್ವಾದ ಮಾಡಿ, ನಂತರ ಕ್ಷಮೆಯಾಚಿಸಿದ ಪ್ರಸಂಗ ನಡೆದಿದೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಎಂ.ಬಿ ಝಿರಲಿ, ಸಂಜಯ ಪಾಟೀಲ ಸಂಸದೆ ಮಂಗಲಾ ಅಂಗಡಿ,ಶಾಸಕ ಅನೀಲ ಬೆನಕೆ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಎಂ.ಬಿ …

Read More »