Breaking News

ಬೆಳಗಾವಿಯಲ್ಲಿ ಶುರುವಾಯ್ತು ಊಸಾಬರಿ ಕಟ್ಟೆ….!!!

ಬೆಳಗಾವಿ- ಬೆಳಗಾವಿಯಲ್ಲಿ ತಿನಿಸು ಕಟ್ಟೆ ನಿರ್ಮಿಸಿ ರಾಜ್ಯದ ಗಮನ ಸೆಳೆದಿದ್ದ ಶಾಸಕ ಅಭಯ ಪಾಟೀಲ ಈಗ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಹಲವು ಕಡೆ ಊಸಾಬರಿ ಕಟ್ಟೆಗಳನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಸಂಜೆಯಾದ್ರೆ ಸಾಕು,ಹಳ್ಳೆಯ ಜನ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯೋದನ್ನು ನೋಡಿದ್ದೇವೆ.ಸಿಟಿಯಲ್ಲಿ ಈ ರೀತಿಯ ಹರಟೆ ಹೊಡೆಯಲು ಜಾಗವೇ ಸಿಗೋದಿಲ್ಲ.ರಸ್ತೆ ಬದಿಯಲ್ಲಿ ನಿಂತ್ಕೊಂಡು ಹರಟೆ ಹೊಡೆದ್ರೆ ಪೋಲೀಸರು ಸೀಟಿ ಊದಿ ಓಡಿಸ್ತಾರೆ.ಊರ ಊಸಾಬರಿ ಮಾಡುವವರು ಒಂದು ಕಡೆ ಕುಳಿತು ಊಸಾಬರಿ ಮಾಡಲಿ ಅಂತಾ ಶಾಸಕ ಅಭಯ ಪಾಟೀಲ ತಮ್ಮ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಊಸಾಬರಿ ಕಟ್ಟೆಗಳನ್ನು ನಿರ್ಮಿಸಿ ಊರ ಊಸಾಬರಿ ಮಾಡುವವರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು ದೇಶದಲ್ಲಿ ವಿಭಿನ್ನ ವಿಶಿಷ್ಟವಾಗಿದ್ದು ಈ ರೀತಿಯ ಊಸಾಬರಿ ಮಾಡಿದ್ದು ಅಭಯ ಪಾಟೀಲ ದೇಶದಲ್ಲೇ ಮೊದಲಿಗರು.

ಊಸಾಬರಿ ಕಟ್ಟೆಯನ್ನು ಸ್ವತಃ ಅಭಯ ಪಾಟೀಲರು ಉದ್ಘಾಟಿಸಿ ಊಸಾಬರಿ ಮಾಡೋವ್ರಿಗೆ ಸಮರ್ಪಿಸಿದ್ದಾರೆ. ಹಾಗಾದ್ರೆ ಅಲ್ಲಿ ಇಲ್ಲಿ ನಿಂತು ಉಸಾಬರಿ ಮಾಡಬೇಡಿ ಉಸಾಬರಿ ಮಾಡೋದಿದ್ರೆ ಬೆಳಗಾವಿಯ ಊಸಾಬರಿ ಕಟ್ಟೆಗಳಿಗೆ ಬನ್ನೀ…..

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.