Breaking News

ಬೆಳಗಾವಿ: ಮಾಜಿ ಸೈನಿಕನ ಮರ್ಡರ್.

ಆಸ್ತಿ ವಿವಾದ : ಬರ್ಬರ ಹತ್ಯೆ
ಆಸ್ತಿ ವಿಚಾರವಾಗಿ ಸಹೋದರರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ತಿಗಡಿ ಗ್ರಾಮದ ನಿವಾಸಿ ಸುರೇಶ್ ಖಣಗಾಂವಿ ಹತ್ಯೆಯಾದವ. ಸದಾ ಖಣಗಾಂವಿ ಗಂಭೀರವಾಗಿ ಗಾಯಗೊಂಡವ.ಶಂಕರ್ ಖಣಗಾಂವಿ ಕೊಲೆ ಮಾಡಿದ ವ್ಯಕ್ತಿ.ಹತ್ಯೆಗೀಡಾದ ಸುರೇಶ್ ಮಾಜಿ ಸೈನಿಕನಾಗಿದ್ದು, ಸದ್ಯ ಕೃಷಿ ಮಾಡಿಕೊಂಡು ಜಮೀನಿನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು.

ಆಸ್ತಿ ವಿಚಾರವಾಗಿ ಆರೋಪಿ ಶಂಕರ್ ಖಣಗಾಂವಿ ಹಾಗೂ ಹತ್ಯೆಗೀಡಾದ ಸುರೇಶ್ ನಡುವೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗಿದ್ದರಿಂದ ಸುರೇಶ್ ನ ಚಿಕ್ಕಪ್ಪ ಶಂಕರ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರಿಂದ ಬಲವಾಗಿ ಪೆಟ್ಟುಬಿದ್ದಿದ್ದರಿಂದ ಸುರೇಶ್ ಖಣಗಾಂವಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಾಗೂ ಸ್ಥಳದಲ್ಲೇ ಇದ್ದ ಸದಾ ಖಣಗಾಂವಿಗೆ ಗಂಭೀರವಾಗಿ ಗಾಯವಾಗಿದ್ದಿಂದ ಸದ್ಯ ಪರಿಸ್ಥಿತಿ ಚಿಂತಾಜಕನವಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Check Also

ಬೆಳಗಾವಿಯಲ್ಲಿ 300 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ

ಬೆಳಗಾವಿ- ಸಪ್ತರ್ಷಿಗಳ ದಾನ, ಅಷ್ಠ ಋಷಿ ಡಾ.ಪ್ರಭಾಕರ್ ಕೋರೆ ಅವರ ಶ್ರಮದಾನದಿಂದ ಹಳ್ಳಿಯಿಂದ ದೆಹಲಿಗೆ ,ದೆಹಲಿಯಿಂದ ದುಬಾಯಿ ವರೆಗೆ ಅಂತರಾಷ್ಟ್ರೀಯ …

Leave a Reply

Your email address will not be published. Required fields are marked *