Breaking News

ಮಟಕಾ ವಿರುದ್ಧ,ಬೆಳಗಾವಿ ಪೋಲೀಸರಿಂದ ಮಹಾ ಯುದ್ಧ…!

ಸಮರ್ಥ ನಗರದಲ್ಲಿ ಮಟಕಾ ದಾಳಿ…
ಬೆಳಗಾವಿ-

ರಾತ್ರಿ ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥನಗರದಲ್ಲಿ *ಮಟ್ಕಾ ದಾಳಿ* ಕೈಕಾಂಡಿದ್ದು, ಈ ಸಂದರ್ಭದಲ್ಲಿ *11 ಜನ* ಆರೋಪಿತರಾದ 1) ಸರ್ಫರಾಜ್ ಮಹಮ್ಮದಾಗೌಸ್ ಶಹಾಪಿರಿ ವಯಸ್ಸು 21, ಸಾ: ಕಾಕತಿ 2) ದಶರಥ ಭೀಮಶಿ ಕಾಂಬಳೆ ವಯಸ್ಸು 40, ಸಾ: ಉಪ್ಪಾರಗಲ್ಲಿ, ಖಾಸಬಾಗ 3)ಪ್ರಕಾಶ ಪಾಂಡುರಂಗ ಮಲಸೂರೆ ವಯಸ್ಸು 64, ಸಾ: ಮೀರಾಪೂರ ಗಲ್ಲಿ ಶಹಾಪೂರ 4) ಬಸವರಾಜ ಜ್ಯೋತಿಬಾ ಪಾಟೀಲ ವಯಸ್ಸು 38 ಸಾ: ರೈತಗಲ್ಲಿ 5) ಮಧು ಕಲ್ಲಪ್ಪಾ ನಾಯಕ ವಯಸ್ಸು 40, ಸಾ: ಮಾಣಿಕಬಾಗ 6) ಅಕ್ಷಯ ಜ್ಯೋತ್ಯ ಸಾಳುಂಕೆ ವಯಸ್ಸು 24, ಸಾ: ಶುಕ್ರವಾರ ಪೇಟೆ 7) ಅರ್ಜುನ ಮಲನಾಯ್ಕ ಜಕ್ಕಪ್ಪನ್ನವರ ವಯಸ್ಸು 28, ಸಾ: ಕಡೋಲ್ಕರ್ ಗಲ್ಲಿ 8) ಖಾಜಾಹುಸೇನ ಘೋರಿ ವಯಸ್ಸು 38 ಸಾ: ವೀರಭದ್ರನಗರ 9) ಆನಂದ ಪ್ರಭು ವೆಂಕಟಪುರ ವಯಸ್ಸು 20, ಸಾ: ಸಮರ್ಥನಗರ, 10) ವಸಂತ ರಾವಳ ನಾಯ್ಕ ವಯಸ್ಸು 38 ಸಾ: ಪೂಲಭಾಗ ಗಲ್ಲಿ 11) ಚಂದ್ರಶೇಖರ ಬರಮಪ್ಪಾ ವೆಂಕಣ್ಣವರ ವಯಸ್ಸು 39 ಸಾ: ರಾಮತೀರ್ಥನಗರ ಬೆಳಗಾವಿ ರವರನ್ನು ವಶಕ್ಕೆ ಪಡೆಯಲಾಗಿದೆ.

ದಾಳಿ ಸಂದರ್ಭದಲ್ಲಿ *ರೂ.27,320/-* ನಗದು ಹಣ ಹಾಗೂ 8 ಮೋಬೈಲಗಳನ್ನು ಜಪ್ತ ಮಾಡಿಕೊಂಡಿದ್ದು, ಈ ಕುರಿತು ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಕೊಳ್ಳಲಾಗಿರುತ್ತದೆ.

ಶಹಾಪೂರದಲ್ಲೂ ಮಟಕಾ ದಾಳಿ

ರಾಘವೇಂದ್ರ ಹವಾಲ್ದಾರ ಪಿಐ ಶಹಾಪುರ ಪೊಲೀಸ್ ಠಾಣೆ ರವರ ತಂಡವು ಬೆಳಗಾವಿ ನಗರದ ವಡಗಾವಿ ರೈತಗಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಾಳಿ ಕೈಕೊಂಡು ಆರೋಪಿತ 1)ಅಶೋಕ ಅನಂತ ಸುತಾರ ವಯಸ್ಸು- 52 ವರ್ಷ ಸಾ: ಮಲಪ್ರಭಾ ನಗರ ವಡಗಾವಿ ರವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ನಗದು ಹಣ ರೂಪಾಯಿ 4,830 ಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪ್ರಕರಣ ತನಿಖೆಯಲ್ಲಿರುತ್ತದೆ.

Check Also

ಶಾಲಿನಿ ರಜನೀಶ್, ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ..

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಇದೇ ಜುಲೈ 31ಕ್ಕೆ ನಿವೃತ್ತಿಯಾಗುತ್ತಿದ್ದು, ಅವರ​ ಪತ್ನಿ ಶಾಲಿನಿ …

Leave a Reply

Your email address will not be published. Required fields are marked *