Breaking News

ಸವದತ್ತಿಯಲ್ಲಿ ತಂದೆಯಿಂದ ಲವರ್ಸ ಮಟ್ಯಾಶ್…ಡಬಲ್ ಮರ್ಡರ್

ಬೆಳಗಾವಿ-

ಬೆಳಗಾವಿ ಜಿಲ್ಲೆಯಲ್ಲಿಯೊಂದು ಮರ್ಯಾದೆ ಹತ್ಯೆ ನಡೆದಿದೆ. ತಂದೆಯೆ ಸ್ವತಹ ತನ್ನ ಮಗಳು ಹಾಗೂ ಆಕೆಯ ಪ್ರಿಯಕರನನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ

. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೆಡಸೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ರುಕ್ಮವ್ವ ಆಡೀನ್ (೧೬) ಹಾಗೂ ಆಕೆಯ ಪ್ರಿಯಕರ
ಮಂಜುನಾಥ್ ಪಡೇಶ್ವರ್ (೨೧) ಕೊಲೆಯಾದ ಜೋಡಿಗಳು.

ತಂದೆ ಯಲ್ಲಪ್ಪ ಭೀಮಪ್ಪ ಆಡೀನ್ (೪೫) ಎಂಬಾತನೆ ಮರ್ಯಾದೆ ಹತ್ಯೆ ಮಾಡಿದ ಕಿರಾತಕ ತಂದೆ.
ನಿನ್ನೆ ರಾತ್ರಿ ತಂದೆ ಮಲಗಿದ್ದಾಗ ರುಕ್ಜವ್ವ ಆಕೆಯ ಪ್ರಿಯಕರ ಮಂಜುನಾಥನನ್ನ ಮನೆಗೆ ಕರೆಸಿದ್ದಾಳೆ. ನಿದ್ರೆಯಿಂದ ಎಚ್ಚರಕೊಂಡ ತಂದೆ ಇಬ್ಬರನ್ನ ಕಂಡವನೇ, ಕೊಡಲಿಯಿಂದ ನೆತ್ತರ ಹರಿಸಿದ್ದಾನೆ

. ಬಳಿಕ ಆರೋಪಿ
ಕೊಲೆ ಮಾಡಿ ಪೊಲಿಸರಿಗೆ ಶರಣಾಗಿದ್ದು, ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಶಾಲಿನಿ ರಜನೀಶ್, ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ..

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಇದೇ ಜುಲೈ 31ಕ್ಕೆ ನಿವೃತ್ತಿಯಾಗುತ್ತಿದ್ದು, ಅವರ​ ಪತ್ನಿ ಶಾಲಿನಿ …

Leave a Reply

Your email address will not be published. Required fields are marked *