Breaking News

ಹಿಂಡಲಗಾ ಜೈಲಿನಲ್ಲಿ ಕಾಶ್ಮೀರಿ ವಿಧ್ಯಾರ್ಥಿಗಳನ್ನು ಭೇಟಿಯಾದ ಬೆಂಗಳೂರಿನ ಮೂವರು ವಕೀಲರು

ಬೆಳಗಾವಿ : ಹುಬ್ಬಳ್ಳಿ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೂವರು ವಕೀಲರು ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ

ಬೆಳಗಾವಿ ಹಿಂಡಲಗಾ ಕೇಂದ್ರ ಕಾರಗ್ರಹಕ್ಕೆ ಮೂವರು ನ್ಯಾಯವಾದಿಗಳು ಭೇಟಿ ನೀಡಿದ್ದಾರೆ.‌ ಬೆಳ್ಳೆಂಬೆಳ್ಳಗ್ಗೆ ವಕೀಲರ ತಂಡ ಆರೋಪಿಗಳನ್ನು ಭೇಟಿ ಮಾಡಿ, ವಕಾಲತ್ತು ಅರ್ಜಿಗೆ ಸಹಿ ಹಾಕಿಸಿಕೊಳ್ಳುವ ಪ್ರಕ್ರಿಯೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಿಂದ ಆಗಮಿಸಿದ ಮೂವರು ವಕೀಲರು ತಂಡ ಆರೋಪಿಗಳ ಬಳಿ ಸಾಕಷ್ಟು ಮಾಹಿತಿ ಪಡೆದಿದ್ದಾರೆ.

ಇನ್ನು ಧಾರವಾಡಕ್ಕೆ ಫೆ-24 ಕ್ಕೆ ಆಗಮಿಸಿದ್ದ ಈ ವಕೀಲರು ಮೇಲೆ ಧಾರವಾಡ ವಕೀಲರ ಸಂಘದಿಂದ ವಿರೋಧವಾಗಿತ್ತು. ವಕೀಲರ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ವಕೀಲರ ವಿರುದ್ಧ ಘೋಷಣೆ ಹಾಕಲಾಗಿತ್ತು. ಇದರಿಂದ ಬೆಂಗಳೂರು ಹೈಕೋರ್ಟ್ ಮೊರೆ ಹೋಗಿದ್ದ ಆರೋಪಿ ಪರ ವಕೀಲರು. ಅರ್ಜಿ ಸಲ್ಲಿಸಲು ವಿರೋಧ ಮಾಡದಂತೆ ಹೈಕೋರ್ಟ ಧಾರವಾಡ ವಕೀಲರಿಗೆ ಸೂಚನೆ ನೀಡಿತ್ತು. ಸದ್ಯ ಕೇಂದ್ರ ಕಾರಗೃಹದ ಸುತ್ತ ಬಿಗಿ ಭದ್ರತೆಯನ್ನು ಪೊಲೀಸ್ ಇಲಾಖೆ ನೀಡಿದೆ. ಇದಾದ ಬಳಿಕ ಧಾರವಾಡ ಕೋರ್ಟ್ ಗೆ ಆರೋಪಿಗಳ ಪರ ವಕೀಲರು ತೆರಳಲಿದ್ದಾರೆ. ಎಂದು ತಿಳಿದು ಬಂದಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *