Breaking News

ಬೆಳಗಾವಿಯ, ಜನಕಲ್ಯಾಣ ಟ್ರಸ್ಟ್ ಸೇವೆಗೆ ಸಮ್ಮಾನ…..

ಜನ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿಂದ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಸೇವಾ ಕೋವಿಡ್ -19 ಕೇಂದ್ರದ ಸಮಾರೋಪ ಸಮಾರಂಭ ರವಿವಾರ ಸಂಜೆ 4. ಗಂಟೆಗೆ

ಅನಗೋಳದ ಸಂತಮೀರಾ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಜರುಗಿತು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು ಪ್ರಮುಖ ವಕ್ತಾರರಾಗಿ ಆರ್‍ಎಸ್‍ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶಜಿ ಭೇಂಡೆ ಉಪಸ್ಥಿತರಿದ್ದರು.

ಸಮಾರೋಪ ಸಭೆಯಲ್ಲಿ ಸುಮಾರು 124 ಚಿಕಿತ್ಸೆ ಪಡೆದ ಗುಣಮುಖರಾದ ರೋಗಿಗಳು ಭಾಗವಹಿಸಿದ್ದರು.
ಉತ್ತಮವಾಗಿ ಚಿಕಿತ್ಸೆ ನೀಡಿದ ವೈದ್ಯರು, ಶೂಶ್ರಕ/ಶೂಶ್ರಕಿಯರು, ದಾನಿಗಳನ್ನು ಹೃದಯ ಪೂರ್ವಕವಾಗಿ ಅವರು ಸೇವೆ ಸ್ಮರಿಸಿ ಸನ್ಮಾನ ಸಲ್ಲಿಸಲಾಯಿತು.
ಗುಣಮುಖರಾದ ರೋಗಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ಪ್ರೀತಿ ವಿಶ್ವಾಸದ ಸೇವಾ ಚಿಕಿತ್ಸಾ ವ್ಯವಸ್ಥೆಗೆ ಧನ್ಯವಾದ ಅರ್ಪಿಸಿದರು.

Check Also

ಮಳೆಯ ಅವಾಂತರಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಬಲಿ.

ಬೆಳಗಾವಿ- ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ,ಮಳೆಯ ಅವಾಂತರಕ್ಕೆ ಬೆಳಗಾವಿಯಲ್ಲಿ ಮತ್ತೊಂದು ಬಲಿಯಾಗಿದೆ. ನಿರಂತರ ಮಳೆಯ ಪರಿಣಾಮ ಮನೆ ಗೋಡೆ …

Leave a Reply

Your email address will not be published. Required fields are marked *