Breaking News

ಬೆಳಗಾವಿಯಲ್ಲಿ ಕಾಗೋಡು ಎಕ್ಸಪ್ರೆಸ್… ಸಮಸ್ಯೆಗಳಿಗೆ ಕ್ವಿಕ್ ರಿಸ್ಪಾನ್ಸ

ಬೆಳಗಾವಿ-ಕಂದಾಯ ಸಚಿ ಕಾಗೋಡು ತಿಮಪ್ಪನವರು ಗುರುವಾರ ಬೆಳಗಾವಿಗೆ ಭೇಟಿ ನೀಡಿ ಜಿಲ್ಲೆಯ ಬೆಳೆ ಹಾನಿ ಹಾಗು ಕಂದಾಯ ಇಲಾಖೆಯ ಪ್ರಗತಿಯನ್ನು ಪರಶೀಲಿಸಿದರು
ಸಭೆಯಲ್ಲಿ ಹಲವಾರು ಜನ ಶಾಸಕರ ನೀಡಿದ ದೂರುಗಳಿಗೆ ತಕ್ಷಣ ಸ್ಪಂದಿಸಿದ ಸಚಿವರು ಅಧಿಕಾರಿಗಳ ಬೆವರಿಳಿಸದರು ಹಳೆ ಕಥೆ ಹೆಳುತ್ತ ಕಾಲ ಕಳೆಯಬೇಡಿ ಜನರ ಸಮಸ್ಯೆಗಳಿಗೆ ತ್ವರಿತ ಗತಿಯಲ್ಲಿ ಸ್ಪಂದಿಸಿ ಎಂದು ಸಚಿವರು ಅಧಿಕಾರಿಳನ್ನು ತರಾಟೆಗೆ ತೆಗೆದುಕೊಂಡರು
ಶಾಸಕ ಲಕ್ಷ್ಮಣ ಸವದಿ ಅವರು ಅಥಣಿ ತಾಲೂಕಿನ ಎರಡು ಗ್ರಾಗಳು ಹಾಗು ರಾಯಬಾಗ ತಾಲೂಕಿನ ಎರಡು ಗ್ರಾಗಳು ಅಲಮಟ್ಟಿ ಹಿನ್ನೀರು ಮುಳುಗಡೆ ಪ್ರದೇಶದಿಂದ ವಂಚಿತ ವಾಗಿದ್ದು ಕೂಡಲೇ ಮರು ಸಮೀಕ್ಷೆ ಮಾಡಬೇಕು ಹೀಂಗಾರು ಬೆಳೆ ಹಾನಿಗೆ ಬೆಳೆ ಪರಿಹಾರ ನೀಡಬೇಕು,ಎಂದು ಒತ್ತಾಯಿಸಿದರೆ ಶಾಸಕ ಅರವಿಂದ ಪಾಟಿಲರು ಹಿಡಕಲ್ ಡ್ಯಾಂ ಮುಳುಗಡೆ ಪ್ರದೇಶದ ನೀರಾಶ್ರಿತರಿಗೆ ಹಕ್ಕು ಪತ್ರಗಳನ್ನು ನಡಬೇಕು ಎಂದು ಒತ್ತಾಯಿಸುವದರ ಜೊತೆಗೆ ಖಾನಾಪೂರ ತಹಸಿಲ್ದಾರರಿಗೆ ಕಾರ್ ಇಲ್ಲ ಕಾರ್ ಕೊಡಿ ಎಂದು ಹೇಳಿದಾಗ ಸಭೆ ನಗೆ ಗೆಡಿಲಲ್ಲಿ ಮುಳುಗಿತು
ಇದಕ್ಕೆ ಸ್ಪಂದಿಸಿದ ಸಚಿವರು ಯಾವ ಯಾವ ಅಧಿಕಾರಿಗೆ ವಾಹನ ಇಲ್ಲವೋ ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಲಿಗೆ ಸೂಚಿಸಿದರು
ಒಟ್ಟಾರೆ ಕಾಗೋಡು ಎಕ್ಸಪ್ರೆಸ್ ಬೆಳಗಾವಿಯಲ್ಲಿ ಸದ್ದು ಮಾಡಿತು ಜಿಲ್ಲೆಯ ಎಲ್ಲ ಸಮಸ್ಯೆಗಳಿಗೆ ಕ್ವಿಕ್ ರಿಸ್ಪಾನ್ಸ ಸಿಕ್ಕಿತು.

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *