Breaking News

ಕಿತ್ತೂರ ತಾಲೂಕಿಗೆ ತಿಮ್ಮಪ್ಪನ ಆಶಿರ್ವಾದ..!

ಬೆಳಗಾವಿ- ಕಂದಾಯ ಸಚಿವ ಕಾಗೋಡು ತಮಪ್ಪನವರು ಕಿತ್ತೂರ ತಾಲೂಕವನ್ನಾಗಿ ಮಾಡಲು ಎಲ್ಲ ರೀತಿಯ ಪ್ರಕ್ರಿಯೆಗಳನ್ನ ಕೂಡಲೇ ಆರಂಭಿಸುಂತೆ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿ ದೂರವಾಣಿ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ
ಬೆಳಗಾವಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿದ ಅವರು ಹೋಬಳಿಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಶಾಸಕ ಲಕ್ಷ್ಷಮಣ ಸವದಿ ಅವರು ಕಿತ್ತೂರ ತಾಲೂಕಿನ ವಿóಯವನ್ನು ಪ್ರಾಸ್ತಾಪಿಸಿದರು ಈ ಹಿಂದೆ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಪ್ರಕರಣವನ್ನ ವೀಶೇಷ ಪ್ರಕರಣವೆಂದು ಪರಗಣಿಸಿ ಕಿತ್ತೂರವನ್ನು ತಾಲೂಕಾಪ್ರದೇಶವನ್ನಾಗಿ ಗೆಜೆಟ್ ನೋಟಿಪಿಕೇಶನ್ ಮಾಡಿ ಆದೇಶ ಹೊರಡಿಸಿದ್ದಾರೆ ಎಂಬ ವಿಷಯವನ್ನು ಸಚಿವರ ಗಮನಕ್ಕೆ ತಂದರು
ಇದಕ್ಕೆ ಕೂಡಲೇ ಸೊಂದಿಸಿದ ಸಚಿವ ಕಾಗೋಡು ತಿಮಪ್ಪ ಕಂದಾಯ ಇಲಾಖೆಯ ಕಾರ್ಯದರ್ಶಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಿತ್ತೂರನ್ನು ಪೂರ್ಣಪ್ರಮಾಣದ ತಾಲೂಕು ಮಾಡಲು ಏನೇನು ಮಾಡಬೇಕೋ ಅದನ್ನು ಮಾಡಿ ಕಿತ್ತೂರಿಗೆ ಸಂಭದಿಸಿದ ಎಲ್ಲ ಪ್ರಸ್ತಾವನೆಗಳಿಗೂ ನಾನು ಮಂಜೂರಾತಿ ನೀಡುತ್ತೇನೆ ಎಂದು ಸಚಿವರು ಹೇಳಿದರು
ಸಭೆಯಲ್ಲಿ ಕತ್ತೂರ ಶಾಸಕ ಡಿಬಿ ಇನಾಮದಾರ ಗೈರು ಹಾಜರಿದ್ದರು ಹೀಗಾಗಿ ಕಿತ್ತೂರಿನ ವಿಷಯವನ್ನ ಅಥಣಿ ಶಾಸಕ ಲಕ್ಷ್ಮಣ ಸವದಿ ಪಸ್ತಾಪಿಸಬೇಕಾಯಿತು

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.