Breaking News
Home / Breaking News / ಬೆಳಗಾವಿಯಲ್ಲಿ ಸರ್ಜರಿ ಸಕ್ಸೆಸ್ ವಾರದಲ್ಲೇ ಪೇಶಂಟ್ ಡಿಸ್ಚಾರ್ಜ್….

ಬೆಳಗಾವಿಯಲ್ಲಿ ಸರ್ಜರಿ ಸಕ್ಸೆಸ್ ವಾರದಲ್ಲೇ ಪೇಶಂಟ್ ಡಿಸ್ಚಾರ್ಜ್….

ಬೆಳಗಾವಿ-ಹೃದ್ರೋಗದಿಂದ ಬಳಲುತ್ತಿದ್ದ ಸುಮಾರು 87 ವರ್ಷ ವಯಸ್ಸಿನ ಹಿರಿಯ ನಾಗರೀಕರಿಗೆ ತೆರೆದ ಹೃದಯ ಶಸ್ತçಚಿಕಿತೆ (ಕರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ)ಯನ್ನು ನೆರವೇರಿಸುವಲ್ಲಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತçಚಿಕಿತ್ಸೆ ವಿಭಾಗದ ತಜ್ಞವೈದ್ಯರು ಯಶಸ್ವಿಯಾಗಿದ್ದು, ಕೇವಲ 7 ದಿನಗಳಲ್ಲಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಬೆಳಗಾವಿಯ ಭಾಗ್ಯನಗರದ ನಿವಾಸಿ ರಾಜಶೇಖರ್ ಅವರು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಹಿರಿಯ ವ್ಯಕ್ತಿಯಾಗಿದ್ದಾರೆ. ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಮುಖ್ಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರಿಚರ್ಡ್ ಸಲ್ಡಾನ್ಹಾ ಮತ್ತು ಅವರ ತಂಡ ಯಶಸ್ವಿಯಾಗಿ ನೆರವೇರಿಸಿತು.

ಎಂಜಿಯೋಗ್ರಾಫಿಯನ್ನು ಮಾಡಿದಾಗ ಆಕ್ಟೋಜೆನೇರಿಯನ್ ಪ್ರಮುಖ ಅಪಧಮನಿಗಳು ರಕ್ತ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲ್ಪಟ್ಟು, ನಡೆಯಲು ತೀವ್ರ ತೊಂದರೆ ಅನುಭವಿಸುತ್ತ, ಎದೆ ನೋವು, ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಯಿAದ ಬಳಲುತ್ತಿದ್ದರು. ಸತತ ಮೂರು ಗಂಟೆಗಳ ಕಾಲ ನಡೆದ ತೆರೆದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಅಪಧಮನಿಗಳಲ್ಲಿ ಉಂಟಾದ ತೊಂದರೆಯನ್ನು ಸರಿಪಡಿಸಲಾಯಿತು. ಕೇವಲ ಮೂರೇ ದಿನದಲ್ಲಿ ರೋಗಿಯು ಹಾಸಿಗೆಯಿಂದ ಎದ್ದು, ನಡೆದಾಡಲು ಸಾಧ್ಯವಾಯಿತಲ್ಲದೇ 7ನೇ ದಿನಕ್ಕೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ನಿವೃತ್ತ ಶಿಕ್ಷಕ ಮತ್ತು ಅವರ ಕುಟುಂಬವು ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿತು. 105 ವರ್ಷಗಳನ್ನು ಮೀರುವ ಗುರಿಯನ್ನು ಹೊಂದಿರುವ ನಿವೃತ್ತ ಶಿಕ್ಷಕರು ಫಲಿತಾಂಶದಿAದ ಅತ್ಯಂತ ಸಂತೋಷಪಟ್ಟಿದ್ದಾರೆ ಮತ್ತು ಅವರಿಗೆ ಒದಗಿಸಿದ ಅತ್ಯುತ್ತಮ ಸೌಲಭ್ಯಗಳು ಮತ್ತು ಸೇವೆಗಳಿಗಾಗಿ ಡಾ. ರಿಚರ್ಡ್ ಮತ್ತು ತಂಡದ ಸದಸ್ಯರಿಗೆ ತಮ್ಮ ಆಳವಾದ ಕೃತಜ್ಞತೆಯ ಭಾವವನ್ನು ವ್ಯಕ್ತಪಡಿಸಿದರು.

ಸ್ನಾಯುಗಳು ಅಪಧಮನಿಗಳಂತೆ ಆಕ್ಟೋಜೆನೇರಿಯನ್‌ನಲ್ಲಿ ಕಾರ್ಯನಿರ್ವಹಿಸುವುದು ಒಂದು ಸವಾಲಿನ ಕರ‍್ಯ. ವಯಸ್ಸಾದ ಕಾರಣ ಅವರ ಮೂಳೆಗಳು ದುರ್ಬಲಗೊಂಡಿದ್ದಲ್ಲದೇ ದುರ್ಬಲ ಹೃದಯ ಸ್ಥಿತಿಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾಗಿತ್ತು ಎಂದು ಡಾ. ರಿಚರ್ಡ್ ಸಲ್ಡಾನ್ಹಾ ಹೇಳಿದ್ದಾರೆ. ಕಳೆದ 4 ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಅವರು ನಿರ್ವಹಿಸಿದ ಅತ್ಯಂತ ವಯಸ್ಸಾದ ರೋಗಿಯಾಗಿದ್ದಾರೆ ಎಂದು ಅವರು ಹೇಳಿದರು.
ಇಲ್ಲಿಯವರೆಗೆ 27,270ಕ್ಕೂ ಅಧಿಕ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ಪರ್ಫ್ಯೂಷನಿಸ್ಟ್ಗಳು, ದಾದಿಯರು ಮತ್ತು ಫಿಸಿಯೋಥೆರಪಿಸ್ಟ್ಗಳನ್ನು ಒಳಗೊಂಡ ತಂಡವು ಒಟ್ಟಾಗಿ ಕರ‍್ಯ ನಿರ್ವಹಿಸುತ್ತಿರುವದರಿಂದ ಒಳ್ಳೆಯ ಫಲಿತಾಂಶ ಕಂಡು ಬರುತ್ತಿದೆ. ಅರವಳಿಕೆ ತಜ್ಞವೈದ್ಯರಾದ ಡಾ. ಶರಣಗೌಡಾ ಪಾಟೀಲ ಹಾಗೂ ಡಾ. ಆನಂದ ವಾಘರಾಳಿ ಅವರು ಸಹಕಾರ ನೀಡಿದರು.

ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಶಸ್ತçಚಿಕಿತ್ಸೆ ನೆರವೇರಿಸಿದ ತಂಡವನ್ನು ಅಭಿನಂದಿಸಿ ಮಾತನಾಡಿದ ಅವರು, ವೈದ್ಯಕೀಯ ತಂತ್ರಜ್ಞಾನ, ನುರಿತ ಜ್ಞಾನವು ಯಾವುದೇ ಶಸ್ತ್ರಚಿಕಿತ್ಸೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಆವಿಷ್ಕಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ ಎಂದು ಹೇಳಿದ್ದಾರೆ. ಯಶಸ್ವಿ ಶಸ್ತçಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದರು.

 

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *