Breaking News

ಶಿಸ್ತಿನ ಕ್ರಮ,ಪದದ ಬೆಲೆ ಕಳೆಯಬೇಡಿ….ಯಡಿಯೂರಪ್ಪನ ವಿರುದ್ಧ ಈಶ್ವರಪ್ಪ ಲೇವಡಿ…!

 ಬೆಳಗಾವಿ- ನನ್ನ ಜೀವ ಇರೋ ವರೆಗೆ ಬ್ರೀಗೆಡ್ ಒಪ್ಪಲ್ಲ ಎಂದು ಯಡಿಯೂರಪ್ಪ ಹೇಳಿಕೆ ವಿಚಾರ. ಇದು ಯಡಿಯೂರಪ್ಪ ಅವರದು ಬಹಳ ಅವಸರದ ಹೇಳಿಕೆ. ಹಿಂದೆ ಕೆಜೆಪಿ ಕಟ್ಟಿದಾಗ ಉಸಿರು ಇರೋ ವರೆಗೆ ಬಿಜೆಪಿಗೆ ಬರಲ್ಲ ಎಂದು ಅವಸರದ ಹೇಳಿಕೆ ನೀಡಿದ್ದರು. ಇದು ಸಹ ಅವಸರದ ಹೇಳಿಕೆಯಾಗಿದೆ. ಎಂದು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ
 ಬೆಳಗಾವಿಯ ಸರ್ಕ್ಯಟ್ ಹೌಸ್ ನಲ್ಲಿ ಅವರನ್ನು ಭೇಟಿಯಾದ ಮಾದ್ಯಮಗಳ ಜೊತೆ ಮಾತನಾಡಿದ ಅವರು
ರಾಷ್ಟ್ರೀಯ ನಾಯಕರ ಜತೆಗೆ ಚರ್ಚೆಯ ನಂತರ ಅವರ ಹೇಳಿಕೆ ಬದಲಾವಣೆ ಆಗಲಿದೆ. ಬ್ರೀಗೆಡ್ ಬಿಜೆಪಿ ಹೆಸರು ಪ್ರಸ್ತಾಪ ಮಾಡಬೇಡಿ ಎಂಬ ಹೇಳಿಕೆ ವಿಚಾರ. ಶಿಸ್ತು ಕ್ರಮ ಎಂಬ ಪದಕ್ಕೆ ಇತ್ತೀಚಿನ ತೂಕ ಕಡಿಮೆಯಾಗುತ್ತಿದೆ. ನಂದಘಡ ಕಾರ್ಯಕ್ರಮ ಪಾಲ್ಗೊಂಡ ಸಂಧರ್ಬದಲ್ಲಿ ಈ‌ರೀತಿಯ ಹೇಳಿಕೆ ನೀಡಿದ್ದರು. ಪದೇ ಪದೇ ಶಿಸ್ತುಕ್ರಮ ಎಂದು ಹೇಳಿ ಪದದ ಬೆಲೆ ಕಳೆಯಬೇಡಿ. ಎಂದು ಈಶ್ವರಪ್ಪ ಯಡಿಯೂರಪ್ಪನವರ ವಿರುದ್ಧ ಲೇವಡಿ ಮಾಡಿದರು

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.