Breaking News
Home / Breaking News / ಯಾರನ್ನೂ ಯಾರೂ ಕಟ್ಟಿ ಹಾಕಕ್ಕಾಗಲ್ಲ,- ಲಕ್ಷ್ಮೀ ಹೆಬ್ಬಾಳಕರ

ಯಾರನ್ನೂ ಯಾರೂ ಕಟ್ಟಿ ಹಾಕಕ್ಕಾಗಲ್ಲ,- ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ-ಸಿಬಿಐ ದಾಳಿ ಖಂಡಿತ ರಾಜಕೀಯ ಪ್ರೇರಿತ ರಾಜಕೀಯ ದುರುದ್ದೇಶದಿಂದ ಮಾಡಿದ್ದು ಎಂದು ಬೆಳಗಾವಿಯಲ್ಲಿ ಮಾದ್ಯಮಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.

ಉಪಚುನಾವಣೆ ನಡೀತಿದೆ ಈ ವೇಳೆ ದಾಳಿ ಮಾಡಿದ್ದಾರೆ, ಸಾರ್ವಜನಿಕವಾಗಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಹತ್ತು ಸಾರಿ ಹೇಳಿದ್ದಾರೆ, ವಿಶೇಷವಾಗಿ ಈ ವಿಚಾರವಾಗಿ ನನ್ನ ಜೊತೆ ಏಕೆ ಮಾತನಾಡುತ್ತಾರೆ?, ಪ್ರತಿಯೊಂದು ರಾಜ್ಯದಲ್ಲಿ ಯಾರು ಕಾಂಗ್ರೆಸ್ ಪರವಾಗಿದ್ದಾರೆ ಅವರ ವಿರುದ್ಧ ಈ ರೀತಿ ದಾಳಿ ಮಾಡ್ತಿದಾರೆ, ಅದನ್ನ ನನ್ನ ಬಾಯಿಂದ ಏಕೆ ಹೇಳಿಸುತ್ತೀರಾ ಯಾರನ್ನೂ ಯಾರೂ ಕಟ್ಟಿ ಹಾಕಕ್ಕಾಗಲ್ಲ, ದೇಶದಲ್ಲಿ ಕಾನೂನು ಇದೆ ಕಾನೂನು ಹೋರಾಟ ಮಾಡ್ತಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.

ಪೂರಕ ದಾಖಲೆ ಇಟ್ಟುಕೊಂಡು ದಾಳಿ ಮಾಡಲು ಯಾರು ಬೇಡ ಅಂತಾರೆ, ಇದೇ ಸಮಯ ಬೇಕಿತ್ತಾ? ಒಂದು ವರ್ಷದಿಂದ ದಾಳಿ ಮಾಡಿಲ್ಲ, ಈಗ ಉಪಚುನಾವಣೆ ವೇಳೆ ಸಿಬಿಐ ದಾಳಿ ಮಾಡಿದ್ದಾರೆ,ಇದು ರಾಜಕೀಯ ಪಿತೂರಿ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ವಕ್ತಾರೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *