ಜಾತಿ ಮರಾಠಾ, ಹಾಡುವುದು ಕವ್ವಾಲಿ…!

ಬೆಳಗಾವಿ:
ಬೆಳಗಾವಿ ನಗರದಲ್ಲಿ ಕೊಲ್ಲಾಪುರ ಮೂಲದ ನಾಲ್ಕು ಜನ ಗಾನ ಗಾರುಡಿಗರು ಬೆಳಗಾವಿ ನಗರಕ್ಕೆ ಲಗ್ಗೆ ಇಟ್ಟಿದ್ದಾರೆ. ಇವರು ಒಂದೇ ಕುಟುಂಬದವರಾಗಿದ್ದು ಇವರ ಗಾನ ಸುಧೆ ಬೆಳಗಾವಿ ನಗರದ ನಿವಾಸಿಗರನ್ನು ಮಂತ್ರ ಮುಗ್ದರನ್ನಾಗಿಸಿದೆ.
ಕೊಲ್ಲಾಪುರ ಜಿಲ್ಲೆಯ ಶಿರೋಲಿ ಗ್ರಾಮದವರಾದ ಇವರು ಜಾತಿಯಿಂದ ಮರಾಠಾರಾಗಿದ್ದರೂ ನಿರ್ಗಳವಾಗಿ ಕವ್ವಾಲಿಗಳಾಗಿದ್ದು, ಮುಸ್ಲೀಂ ಧರ್ಮದ ಗೀತೆಗಳನ್ನು ಹಾಡುತ್ತಾರೆ. ಪ್ರತಿ ಎರಡು ಗಂಟೆಗೊಮ್ಮೆ ಜಾಗ ಬದಲಾಯಿಸುವ ಇವರು ರಸ್ತೆ ಬದಿಯಲ್ಲಿ ಕುಳಿತುಕೊಂಡು ಕವ್ವಾಲಿ ಹಾಡಲು ಆರಂಭಿಸುತ್ತಾರೆ.ಇವರು ಹಾಡುವ ಕವ್ವಾಲಿಗಳ ಕೇಳಿದ ಜನ ಇವರ ಪ್ರತಿಭೆಯ ನೋಡಿ ಧನ ಸಹಾಯ ಮಾಡುತ್ತಿದ್ದಾರೆ.
ಶಿರೋಲಿ ಗ್ರಾಮದ ಪವಾರ್ ಕುಟುಂಬದವರಾದ ಇವರು ದೃಷ್ಠಿ ಹೀನರಾಗಿದ್ದಾರೆ. ಆದರೂ ಸಹ ಹಲವಾರು ವರ್ಷಗಳಿಂದ ಬೀದಿ ಕಲಾವಿದರಾಗಿ ತಮ್ಮ ಬದುಕಿನ ಬಂಡಿಯನ್ನು ಸಾಗಿಸುತ್ತಿದ್ದಾರೆ. ಇವರು ಕವಾಲಿ ಹಾಡುಗಳನ್ನು ಕೇಳಿದರೇ ಇವರು ಯಾವುದೋ ಮುಸ್ಲಿಂ ಕುಟುಂಬದಿಂದ ಬಂದಿರಬಹುದೆಂದು ಭಾಸವಾಗುತ್ತದೆ. ಆದರೆ ಇವರನ್ನು ವಿಚಾರಿಸಿದಾಗ ಅಚ್ಚರಿ ಹೊರಬಿತ್ತು. ಕೊಲ್ಲಾಪುರ ಜಿಲ್ಲೆಯ ಶಿರೋಲಿ ಗ್ರಾಮದ ನಾವು ನನ್ನ ಹೆಸರು ಗಣೇಶ ಪವಾರ ಉಳಿದ ಮೂವರು ನನ್ನ ಸಹೋದರರು. ನಾವು ನಾಲ್ಕು ಜನ ಸೇರಿಕೊಂಡು ಕವ್ವಾಲಿಗಳನ್ನು ಹಾಡಲು ಆರಂಭಿಸಿದ್ದೇವೆ. ಮಹಾರಾಷ್ಟ್ರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಂಚಾರ ಮಾಡುತ್ತೇವೆ. ರಸ್ತೆ ಬದಿಯಲ್ಲೇ ಕುಳಿತುಕೊಂಡು ತಮ್ಮ ಕಾರ್ಯಕ್ರಮ ಆರಂಭಿಸುತ್ತೇವೆ. ತಮ್ಮ ಕಲೆಯನ್ನು ನೋಡಿ ಜನ ಸಹಾಯ ಮಾಡುತ್ತಾರೆ. ಅದರಿಂದಲೇ ನಮ್ಮ ಜೀವನ ನಡೆಸುತ್ತಿದ್ದೇವೆ ಅಂತ್ತಾರೆ ಗಣೇಶ ಪವಾರ.
ಆಜಂ ನಗರದ ವೃತ್ತದಲ್ಲಿ ಈ ಬೀದಿ ಕಲಾವಿದರು ಪ್ರಸ್ತುತಪಡಿಸಿದ ನಜರ ಮೇರೇ ಪೀರ ಕೀ ಎಂಬ ಕವ್ವಾಲಿ ಹಾಡಿಗೆ ಅಲ್ಲಿಯ ಜನರು ಮನಸೋತರು. ಇದೇ ಕವ್ವಾಲಿಯನ್ನು ಮೂರು ಭಾರೀ ಹಾಡುವಂತೆ ಜನರು ಒತ್ತಾಯಿಸಿದ್ದು ವಿಶೇಷವಾಗಿತ್ತು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *