ಕಲಿತ ಶಾಲೆಯ ಅಭಿವೃದ್ಧಿಗೂ ಸೈ…..ಶತಮಾನೋತ್ಸದ ಸಂಬ್ರಮ ಹೆಚ್ಚಿಸಲೂ ಜೈ…..!

ಕಲಿತ ಶಾಲೆಗೆ ಶಾಸಕನ ಕೊಡುಗೆ,ಶತಮಾನೋತ್ಸವಕ್ಕೂ ವಿಶೇಷ ದೇಣಿಗೆ….!

ಬೆಳಗಾವಿ- ಕಲಿತ ಶಾಲೆ,ಕಲಿಸಿದ ಗುರುಗಳನ್ನು ಸ್ಮರಿಸಿಸುವವರು ಸಿಗೋದು ಬಹಳ ವಿರಳ,ಆದರೆ ಶಾಸಕ ಅಭಯ ಪಾಟೀಲ ಕೆಲ ವರ್ಷಗಳ ಹಿಂದೆ ಕಲಿತ ಶಾಲೆಯಲ್ಲಿ ಗುರುವಂದನೆ ಕಾರ್ಯಕ್ರಮ ನಡೆಸಿ ರಾಜ್ಯದ ಗಮನ ಸೆಳೆದಿದ್ದರು ಈಗ ಅವರು ಕಲಿತ ಶಾಲೆ ಈ ವರ್ಷ ಶತಮಾನೋತ್ಸವದ ಸಂಬ್ರಮದಲ್ಲಿದ್ದು ಇದಕ್ಕೂ ಶಾಸಕ ಅಭಯ ಪಾಟೀಲ ವಿಶೇಷ ಕೊಡುಗೆ ನೀಡಲು ಮುಂದಾಗಿದ್ದಾರೆ.

ಬೆಳಗಾವಿಯ ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ಚಿಂತಾಮಣರಾವ ಶಾಲೆಯಲ್ಲಿ ಶಾಲೆಯಲ್ಲಿ ಶಾಸಕ ಅಭಯ ಪಾಟೀಲರು ಕಲಿತಿದ್ದಾರೆ,ಕಲಿತ ಶಾಲೆಯನ್ನು ಮರೆಯದೇ ಈ ಶಾಲೆಯ ಅಭಿವೃದ್ಧಿಗೆ ಎರಡುವರೆ ಕೋಟಿ ಅನುದಾನ ಖರ್ಚು ಮಾಡಿದ್ದು ಈ ಶಾಲೆ ಇದೇ ವರ್ಷ ಶತಮಾನೋತ್ಸವದ ಸಂಬ್ರಮದಲ್ಲಿದ್ದು ಈ ಕಾರ್ಯಕ್ರಮವನ್ನು ಅರ್ಥಪೂರ್ಣ ಗೊಳಿಸಲು ಶಾಸಕ ಅಭಯ ಪಾಟೀಲ ಕೈಜೋಡಿಸಿದ್ದಾರೆ.

ಇಂದು ಶಾಲೆಗೆ ಭೇಟಿ ನೀಡಿದ ಶಾಸಕ ಅಭಯ ಪಾಟೀಲ ಶಾಲೆಯ ಗುರುಗಳ ಜೊತೆ ಶತಮಾನೋತ್ಸವದ ಕಾರ್ಯಕ್ರಮಗಳ ಕುರಿತು ಚರ್ಚೆ ಮಾಡಿ, ಶತಮಾನೋತ್ಸವದ ಅಂಗವಾಗಿ ಶಾಲೆಯ ಸಭಾಗೃಹದ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದರು ಈ ಕಾಮಗಾರಿ 1.25 ಕೋಟಿ ರೂ ಅನುದಾನದಲ್ಲಿ ಸಭಾಗೃಹದ ನೂತನಿಕರಣ ಕಾಮಗಾರಿಗೆ ಶಾಸಕ, ಅಭಯ ಪಾಟೀಲ ಚಾಲನೆ ನೀಡಿದರು.

ಚಿಂತಾಮಣರಾವ ಶಾಲೆ ಸರ್ಕಾರಿ ಶಾಲೆಯಾಗಿದ್ದು 1920 ರಲ್ಲಿ ಸ್ಥಾಪಿತವಾಗಿತ್ತು ಈ ಶಾಲೆಯ ಸಭಾಗೃಹ ಕ್ಕೆ ಹೆಚ್.ಹೆಚ್ ರಾಜಲಜ್ಷ್ಮೀ ರಾಜೆ,ವಿಜಯಸಿಂಹ ರಾಜೆ,ಪಟವರ್ದನ್ ಸಭಾಗೃಹ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ.

Check Also

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರ ಸದಸ್ಯತ್ವ ರದ್ದು……!!!

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಂದು ಕಡೆ ಅಧಿಕಾರಿಗಳ ನಡುವೆ ತಿಕ್ಕಾಟ ಇನ್ನೊಂದು ಕಡೆ ಪಾಲಿಕೆ ಆಯುಕ್ತರನ್ನೇ ವರ್ಗಾವಣೆ ಮಾಡುವಂತೆ ಪಾಲಿಕೆ …

Leave a Reply

Your email address will not be published. Required fields are marked *