Home / Breaking News / ದೇಶದ ಜನರಿಗೆ ಪ್ರಧಾನಿ ಮೋದಿ ಬಂಪರ್ ಕೊಡುಗೆ

ದೇಶದ ಜನರಿಗೆ ಪ್ರಧಾನಿ ಮೋದಿ ಬಂಪರ್ ಕೊಡುಗೆ

ಬೆಳಗಾವಿ-ದೀಪಾವಳಿಯ ನಂತರ ದೇಶದಲ್ಲಿ ಬದಲಾವಣೆಯ ಸಂಘರ್ಷ ನಡೆಯುತ್ತಿದೆ ದೇಶದ ೧೨೫ ಕೋಟಿ ಜನ ದೇಶವಾಸಿಗಳು ಡಿಸೆಂಬರ ೮ ರ ನಂತರ ಹಲವಾರು ತೊಂದರೆಗಳನ್ನು ಅನುಭವಿಸಿ ದೇಶವನ್ನು ಸ್ವಚ್ಛಗೊಳಿಸುವ ಯದ್ಞದಲ್ಲಿ ಪಶಲ್ಗೊಂಡು ಒಳ್ಳೆಯತನಕ್ಕೆ ಮತ್ತು ಪ್ರಾಮಾಣಿಕತೆಗೆ ಬೆಂಬಲ ಸೂಚಿಸಿ ದೇಶದ ಉತ್ತಮ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಭಾರತಿಯರು ಕೈ ಜೋಡಿಸಿದ್ದಾರೆ ಎಂದು ಪ್ರಧಾನಿ ಮೋದಿ ದೇಶವಾಸಿಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು

ಸಂಜೆ ೭-೩೦ ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದಲ್ಲಿರುವಷ್ಟು ನಗದು ಹಣ ಯಾವ ದೇಶದಲ್ಲಿ ಇಲ್ಲ ದೇಶದ ಎಲ್ಲ ಬ್ಯಾಂಕುಗಳು ಸಾಮಾನ್ಯ ಸ್ಥಿತಿಗೆ ಮರಳುವಂತೆ ಸೂಚಿಸಲಾಗಿದೆ ದೇಶದಲ್ಲಿ ನಗದು ಹಣದ ಸಮಸ್ಯೆ ಇದೆ ಇದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು

ನಮ್ಮ ಹೋರಾಟ ಕಾ ಧನಿಕರ ವಿರುದ್ಧ ಅ ಪ್ರಾಮಾಣಿಕರ ವಿರುದ್ಧವಾಗಿದೆ ಸರಕಾರ ಪ್ರಾಮಾಣಿಕ ನಾಗರಿಕರಿಗೆ ಯಾವದೇ ರೀತಿಯ ತೊಂದರೆ ಕೊಡುವದಿಲ್ಲ ಕಾಳ ಧನಿಕರನ್ನು ಬಿಡುವದಿಲ್ಲ ಅವರ ವಿರುದ್ಧ ಕಶನೂನಾತ್ಮಕ ಕ್ರಮ ಕೈಗೊಳ್ಳುತ್ರೇವೆ ಎಂದು ಮೋದಿ ಎಚ್ಚರಿಕೆ ನೀಡಿದರು

ಕೇಂದ್ರ ಸರ್ಕಾರ ನಡೆಸಿರುವ ಅಭಯಾನ ಯಶಸ್ವಿಗೊಳಿಸಲು ಬ್ಯಾಂಕ ಕಾರ್ಮಿಕರು ಹಗಲು ರಾತ್ರಿ ಶ್ರಮಿಸಿದ್ದಾರೆ ಅವರ ಸೇವೆ ಮರೆಯಲು ಸಾಧ್ಯವಿಲ್ಲ ಕೆಲವು ಬ್ಯಾಂಕ ಅಧಿಕಾರಿಗಳು ಅಪರಾಧವೆಸಗಿದ್ದು ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದರು

ಸ್ಪಷ್ಠ ಗುರಿಯೊಂದಿಗೆ ನೀತಿ ಮತ್ತು ಯೋಜನೆ ರೂಪಿಸಿದರೆ ದೇಶದ ಶೋಷಿತರಿಗೆ ಬಡವರಿಗೆ ನಿರ್ಗತಿಕರಿಗೆ ಅಧರ ಲಾಭ ಸಿಗುತ್ತದೆ ದೇಶಕ್ಜೆ ಸ್ವಾತಂತ್ರ್ಯ ಬಂದು ದಶಕಗಳು ಗತಿಸಿದರು ದೇಶದ ಲಕ್ಷಾಂತರ ಕುಟುಂಬಗಳಿಗೆ ಮನೆ ಇಲ್ಲ ದೇಶದ ಬಡ ಕುಟುಂಬಗಳಿಗೆ ವಸತಿ ವ್ಯೆವಸ್ಥೆ ಕಲ್ಪಿಸಲು ಹೊಸ ಯೋಜನೆ ೨೦೧೭ ರಿಂದ ಆರಂಭವಾಗಲಿದೆ ನಗರದಲ್ಲಿ ಮನೆ ನಿರ್ಮಿಸುವವರಿಗೆ ಯೋಜನೆ ರೂಪಿಸಲಾಗಿದೆ ಮನೆ ಕಟ್ಟಲು ೯ ಲಕ್ಷ ಸಾಲ ಕ್ಕೆ ಶೇ ೪ ರಷ್ಟು ಬಡ್ಡಿ ೧೨ ಲಕ್ಷ ರೂ ಸಾಲ ಪಡೆಯುವವರ ಶೇ ೩ ರಷ್ಟು ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ

ದೇಶದ ಕೃಷಿಕರಿಗೆ ಪ್ರೋತ್ಸಾಹ ನೀಡಲು ದೇಶದ ಸಹಕಾರಿ ಬ್ಯಾಂಕುಗಳಲ್ಲಿ ಬೆಳೆಸಾಲ ಪಡೆದ ರೈತರ ಬಡ್ಡಿ ಮನ್ನಾ ಮಾಡಲಿದೆ ಜೊತೆಗೆ ಹೊಸ ಸಾಲ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ದೇಶದ ಸಣ್ಣ ಸಣ್ಣ ವ್ಯಾಪಾರಿಗಳಿ ಹೆಚ್ಚಿನ ಸಾಲ ನೀಡಲು ಸೂಚಿಸಲಾಗಿದೆ ಸಾಲ ಪಡೆಯುವ ವ್ಯಾಪಾರಿಗಳ ಗ್ಯಾರಂಟಿ ಸರಕಾರವೇ ನೀಡಲಿದೆ

ಗರ್ಭಿನಿಯರಿಗೆ ಪೌಷ್ಠಿಕ ಆಹಾರ ನೀಡಲು ತಾಯಿ ಮತ್ತು ಶಿಶು ಮರಣ ತಡೆಯಲು ಗರ್ಭಿಣಿ ಮಹಿಳೆಯರ ಖಾತೆಗೆ ಆರು ಸಾವಿರ ರೂ ಜಮಾ ಮಾಡಲಾಗುವದು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಬಡವರ ಹಿತದಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಿದರು

ದೇಶದಲ್ಲಿ ಲೋಕ ಸಭೆ ಹಾಗು ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆಯಬೇಕು ಈ ಕುರಿತು ಚರ್ಚೆ ಆರಂಭವಾಗಬೇಕು ದೇಶದಲ್ಲಿ ಸಚ್ಛಾಯಿ ಮತ್ತು ಅಚ್ಛಾಯಿ ಗೆ ದೇಶದ ಜನರ ಬೆಂಬಲ ಸಿಕ್ಕುದೆ ಇವತ್ತು ಮಹಾತ್ಮಾ ಗಾಂಧೀ ನಮ್ಮ ಜೊತೆ ಇಲ್ಕ ಆದರೆ ದೇಶ ಇವತ್ತಿಗೂ ಅವರ ಸನ್ಮಾರ್ಗದಲ್ಲಿ ನಡೆಯುತ್ತಿದೆ ಎಲ್ಲರ ಸಹಕಾರ ದೇಶದ ಉಜ್ವಲ ಭವಿಷ್ಯಕ್ಕೆ ಕಾರಣವಾಗಲಿದೆ ಎಂದು ಮೋದಿ ಜೈ ಹಿಂದ ಹೇಳಿ ಭಾಷಣ ಮುಗಿಸಿದರು

Check Also

28 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ರಂಗೇರಿದೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಚುನಾವಣಾ ಪ್ರಚಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ ವಿವಿಧ ರಾಜಕೀಯ …

Leave a Reply

Your email address will not be published. Required fields are marked *