Breaking News

ಪಿ ಎಸ್ ಐ ಅವಟಿ ದರ್ಪಕ್ಕೆ ಬೀದುಗಿಳಿದ ಲಾಯರ್ಸ್

*ಬೆಳಗಾವಿ ಸುದ್ದಿ:-*
ಬೆಳಗಾವಿ:- ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪೋಲಿಸ್ ಅಧಿಕಾರಿ ವಿರುದ್ದ ನ್ಯಾಯವಾದಿಗಳು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ತಮ್ಮ ಕಕ್ಷಿದಾರನ ದೂರು ದಾಖಲಿಸಲು ಹಿಂದೇಟು ಹಾಕಿದ್ದಕ್ಕೆ ಪ್ರಶ್ನೆ ಮಾಡಿದ ನ್ಯಾಯವಾದಿಗೆ ಅಥಣಿ ಪಿ ಎಸ್ ಐ ಯು ಎಸ್ ಅವಟಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದುಆರೋಪಿಸಿನ್ಯಾಯವಾದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯವಾದಿ ಬಿ ಆರ್ ರಾವ್ ಮೇಲೆ ಹಲ್ಲೆಗೆ ಯತ್ನಿಸಿದ
ಅಥಣಿ ಪಿ ಎಸ್ ಐ ಉಸ್ಮಾನ್ ಅವಟಿ ವಿರುದ್ದ ನೂರಾರು ನ್ಯಾಯವಾದಿಗಳು ಕೋರ್ಟ್ ಕಲಾಪದಿಂದ ಬಹಿಷ್ಕರಿಸಿ ಪ್ರತಿಭಟನೆಗೆ ನಡೆಸುತ್ತಿದ್ದಾರೆ.
ಇನ್ನು ಪಿ ಎಸ್ ಐ ಆಗಿರುವ ಯು. ಎಸ್. ಅವಟಿ ವಿರುದ್ದ ದೂರು ದಾಖಲಿಸಲು ಹೋದಾಗ ಹಿರಿಯ ಪೋಲಿಸ್ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿರುವದಾಗಿ ನ್ಯಾಯವಾದಿಗಳು ಆರೋಪಿಸಿದ್ದು ಜಿಲ್ಲಾ ಪಂಚಾಯತಿ ಅದ್ಯಕ್ಷೆ ಆಶಾ ಐಹೋಳೆ ಮತ್ತು ಅವರ ಪತಿ ವಂಚನೆ ಕುರಿತು ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಪಿ ಎಸ್ ಐ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ನ್ಯಾಯವಾದಿ ಬಿ ಆರ್ ರಾವ ಆರೋಪಿಸಿದ್ದಾರೆ…
ಇನ್ನೂ ಅರ್ಧಗಂಟೆಗು ಹೆಚ್ಚುಕಾಲ ವಿಜಯಪುರ-ಸಂಕೇಶ್ವರ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ.ನಡೆಸ ಲಾಗುತ್ತಿದೆ
ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಪೋಲಿಸರು ಹರಸಾಹಸ ಮಾಡಬೇಕಾದ ಸ್ಥಿತಿ ನಿರ್ಮಾಣಾಗಿದೆ.

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *