ರಾಜಕುಮಾರ್ ಟಾಕಳೆ,ಬೇಲ್ ಅರ್ಜಿ ವಜಾ,ನವ್ಯಶ್ರೀಗೆ ಮಜಾ…!!

ಬೆಳಗಾವಿ-ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆಗೆ ಸಂಕಷ್ಟ ಎದುರಾಗಿದೆ.ಯಾಕಂದ್ರೆ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.ಟಾಕಳೆ ಹೆಂಡತಿ ಎಂದೇ ಹೇಳಿಕೊಳ್ಳುತ್ತಿರುವ ನವ್ಯಶ್ರೀಗೆ ಆರಂಭಿಕ ಜಯ ಸಿಕ್ಕಿದಂತಾಗಿದೆ.

ರಾಜಕುಮಾರ ಟಾಕಳೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಆರೋಪಗಳ ಸುರಿಮಳೆ ಮಾಡಿದ್ದರು,ರಾಜಕುಮಾರ್ ಟಾಕಳೆ ವಿರುದ್ಧ ಪ್ರಕರಣ ದಾಖಲಾಗಿದೆ.ರಾಜಕುಮಾರ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ.ಬೆಳಗಾವಿಯ ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ,ರಾಜಕುಮಾರ್ ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿ ನ್ಯಾಯಾಧೀಶ ಅನಂತ್ ಹೆಚ್. ಆದೇಶ ಮಾಡಿದ್ದಾರೆ.

ಟಾಕಳೆ ವಿರುದ್ಧ ಅತ್ಯಾಚಾರ, ಗರ್ಭಪಾತ, ದೈಹಿಕ ಹಲ್ಲೆ ಸೇರಿ ಹತ್ತಕ್ಕೂ ಅಧಿಕ ಆರೋಪಗಳಿವೆ.ಎಪಿಎಂಸಿ ಠಾಣೆಯಲ್ಲಿ ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ದೂರು ದಾಖಲಿಸಿದ್ದರು.ಇದಕ್ಕೂ ಮುನ್ನ ನವ್ಯಶ್ರೀ ವಿರುದ್ಧ ರಾಜಕುಮಾರ್ ಟಾಕಳೆ ಬ್ಲ್ಯಾಕ್ ಮೇಲ್ ಮತ್ತು ಹನಿಟ್ರ್ಯಾಪ್ ದೂರು ದಾಖಲಿಸಿದ್ದರು.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *