Breaking News

ಬೆಳಗಾವಿ ನಗರದಲ್ಲಿ ಸಂಗೊಳ್ಳಿ ರಾಯಣ್ಣನ ಮಾರ್ಗ ಸರ್ವೋದಯ

ಬೆಳಗಾವಿ: ನಗರದ ಜಿಲ್ಲಾಧಿಕಾರಿ ಕಚೇರಿ ಎದರಿಗಿನ ರಸ್ತೆ ಸಂಗೊಳ್ಳಿ ರಾಯಣ್ಣನ ಹೆಸರು ಇದೆ. ಆದರೆ ನಾಮಫಲಕ ಮಹಾನಗರ ಪಾಲಿಕೆ ಅಳವಡಿಸಿಲ್ಲ ಎಂದು ಇಲ್ಲಿನ ಸರ್ವೋದ ಸಂಘದ ಕಾರ್ಯಕರ್ತರು ಪ್ರಾದೇಶಿಕ ಕಚೇರಿ ಎದುರಿರುವ ಗಡಿಯಾರದ ಕಂಬಕ್ಕೆ ಸಂಗೊಳ್ಳಿ ರಾಯಣ್ಣನ ಮಾರ್ಗ ಎಂದು ಶುಕ್ರವಾರ ನಾಮಫಲಕ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ ಮಾತನಾಡಿ, ಬಹಳ ದಿನಗಳಿಂದ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತ ಹಾಗೂ ಬಾಯಿ ಮತ್ತಲ್ಲೇ ಹೇಳುತ್ತ ಬಂದಿದ್ದೇವು ಆದರೆ ಕ್ರಮ ಕೈಗೊಂಡಿಲ್ಲ. ಇದರಿಂದ ಜಿಲ್ಲಾಧಿಕಾರಿಗಳನ್ನು ಮತ್ತೇ ಕೇಳಿದಾಗ ನೀವೇ ಕೆ ಅಳವಡಿಸಿಲ್ಲ ಎಂದು ನಮಗೆ ಪ್ರಶ್ನೆ ಮಾಡಿದ್ದರಿಂದ ಇಂದು ನಾವು ನಾಮಫಲಕ ಅಳವಡಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಹಿರಿಯ ಹೋರಾಟಗಾರ ರಾಮಚಂದ್ರ ಢವಳಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.