Breaking News

ಪತ್ರಕರ್ತ ಸಂಜಯ ಸೂರ್ಯವಂಶಿಗೆ ವಿಶೇಷ, ಪುರಸ್ಕಾರ…

ಬೆಳಗಾವಿ-ಕಳೆದ ಎರಡು ದಶಕಗಳಿಂದ ವಿವಿಧ ಮರಾಠಿ ದಿನಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿರುವ,ಪುಡಾರಿ ಮರಾಠಿ ದಿನಪತ್ರಿಕೆಯ ಬೆಳಗಾವಿ ವಿಭಾಗದ ಸ್ಥಾನಿಕ ಸಂಪಾದಕಾಗಿರುವ ಸಂಜಯ ಸೂರ್ಯವಂಶಿ,ಅವರು ಮಹಾರಾಷ್ಟ್ರ ಪತ್ರಕರ್ತರ ಸಂಘ ನೀಡುವ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಹಾರಾಷ್ಟ್ರ ಪತ್ರಕರ್ತರ ಸಂಘ ಪ್ರತಿ ವರ್ಷ ಮಹಾರಾಷ್ಟ್ರ ರಾಜ್ಯದ ಹೊರಗಡೆ ಸೇವೆ ಮಾಡುತ್ತಿರುವ ಮರಾಠಿ ಮತ್ರಕರ್ತರನ್ನು ಗೌರವಿಸುತ್ತಾ ಬಂದಿದ್ದು ಈ ಬಾರಿ ಈ ವಿಶೇಷ ಪುರಸ್ಕಾರಕ್ಕೆ ಬೆಳಗಾವಿಯ ಖ್ಯಾತ ಪತ್ರಕರ್ತ ಸಂಜಯ ಸೂರ್ಯವಂಶಿ ಆಯ್ಕೆಯಾಗಿರುವದು ಸಂತಸದ ಸಂಗತಿಯಾಗಿದೆ.

ಜನೇವರಿ 6 ರಂದು ಸಂಜೆ 4 ಗಂಟೆಗೆ ಮಹಾರಾಷ್ಟ್ರದ ಮುಂಬಯಿ ಯಲ್ಲಿರುವ ರಾಜಭವನದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ,ಭಗತಸಿಂಗ್ ಕೋಶಿಯಾರಿ ಅವರು ಸಂಜಯ ಸೂರ್ಯವಂಶಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ…

ವಿಶೇಷ ಪ್ರಶಸ್ತಿಗೆ ಭಾಜನರಾದ ಸಂಜಯ ಸೂರ್ಯವಂಶಿ ಅವರನ್ನು ಬೆಳಗಾವಿಯ ಪತ್ರಿಕಾ ಬಳಗ ಅಭಿನಂದಿಸಿದೆ..

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *