Breaking News
Home / Breaking News / ಆನಂದ ಅಪ್ಪುಗೋಳ ವಿರುದ್ಧ ಸೋ ಮೋಟೋ ಪ್ರಕರಣ ದಾಖಲಿಸಿ..

ಆನಂದ ಅಪ್ಪುಗೋಳ ವಿರುದ್ಧ ಸೋ ಮೋಟೋ ಪ್ರಕರಣ ದಾಖಲಿಸಿ..

ಬೆಳಗಾವಿ- ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೊಸೈಟಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಈಗ ಕಂಗಾಲಾಗಿದ್ದು ನೂತನವಾಗಿ ಸಹಕಾರ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಕೂಡಲೇ ಈ ಕುರಿತು ಗಮನ ಹರಿಸಿ ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡುವಂತೆ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯ ಮಾಡಿದ್ದಾರೆ
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಾರ್ವಜನಿಕರು ತಾವು ಶ್ರಮವಹಿಸಿ ಗಳಿಸಿದ ಹಣವನ್ನು ರಾಯಣ್ಣ ಬ್ಯಾಂಕ್ ನಲ್ಲಿ ಠೇವಣಿ ಇಟ್ಟು ಕಂಗಾಲಾಗಿದ್ದಾರೆ ಒಬ್ಬ ವ್ಯೆಕ್ತಿ ಸೊಸೈಟಿ ಹಣವನ್ನು ದುರುಪಯೋಗ ಪಡಿಸಿಕೊಂಡರೂ ಸಹಕಾರಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಸಹಕಾರಿ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಬಂಧಿಸಿ ಜಿಲ್ಲಾಡಳಿತ ಗ್ರಾಹಕರ ಪರವಾಗಿ ನ್ಯಾಯಾಲಯದಲ್ಲಿ ಸೋ ಮೋಟೋ ಪ್ರಕರಣ ದಾಖಲಿಸಿ ಗ್ರಾಹಕರ ಪರವಾಗಿ ನಿಲ್ಲಬೇಕು ಎಂದು ಶಂಕರ ಮುನವಳ್ಳಿ ಒತ್ತಾಯ ಮಾಡಿದ್ದಾರೆ
ಆನಂದ ಅಪ್ಪುಗೋಳ ಅವರು ಮಾದ್ಯಮಗಳಲ್ಲಿ ಜಾಹಿರಾತು ನೀಡಿ ಹೆಚ್ಚು ಬಡ್ಡಿ ಕೊಡುವದಾಗಿ ನಂಬಿಸಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಈಗ ಓಡಿ ಹೋಗಿದ್ದಾರೆ ಇಷ್ಟೆಲ್ಲ ನಡೆದರೂ ಸರ್ಕಾರಿ ಅಧಿಕಾರಿಗಳು ತನಿಖೆ ಮಾಡದೇ ಇರುವುದಕ್ಕೆ ಶಂಕರ ಮುನವಳ್ಳಿ ಆಕ್ರೋಶ ವ್ಯೆಕ್ತಪಡಿಸಿದ್ದಾರೆ
ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ತಮಗಾಗಿರುವ ಅನ್ಯಾಯದ ಕುರಿತು ತಮ್ಮ ವ್ಯಾಪ್ತಿಯ ಠಾಣೆಗಳಲ್ಲಿ ದೂರು ಸಲ್ಲಿಸಬೇಕು ದೂರು ಕೊಟ್ಟರೆ ಹಣ ಮರಳಿ ಸಿಗೋದಿಲ್ಲ ಅಂತ ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮುನವಳ್ಳಿ ಆರೋಪಿಸಿದ್ದಾರೆ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *