Breaking News

ಶ್ರೀರಾಮ ಭಕ್ತ ಹುಕ್ಕೇರಿಯ ಬಾಲಕ ಶರ್ವಿಲ್….

ಬೆಳಗಾವಿ-ನಾಲ್ಕು ವರ್ಷದ ಕು.ಶರ್ವಿಲ ಶಿವಗೌಡಾ ಪಾಟೀಲ (ಹುಕ್ಕೇರಿ) ಈ ಪುಟ್ಟ ಮಗು ತಾನು ಉಳಿಸಿದ ಹಣ ₹…620/-..ರೂಗಳನ್ನು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಸಮರ್ಪಿಸಿ ಎಲ್ಲರ ಗಮನ ಸೆಳೆದಿದ್ದಾನೆ‌.

ಬೆಳಗಾವಿ ಜಿಲ್ಲೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನ ನಡೆದಿದ್ದು,ಬಡವಾಣಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವಾಗ ಈ ಬಾಲಕನ ತಾಯಿ ನಿಧಿ ಸಮರ್ಪಿಸಿ ಭಕ್ತಿಯಿಂದ ಕೈ ಮುಗಿಯುತ್ತಿರುವದನ್ನು ಗಮನಿಸಿದ ಈ ಪುಟ್ಟ ಬಾಲಕ ಸರ್ರನೇ ಒಳಗೆ ಹೋಗಿ ತಾನು ಕೂಡಿಟ್ಟ ಹಣವನ್ನು ಕೊಟ್ಟು, ತಾಯಿಯ ಕಾರ್ಯವನ್ನು ತಾನೂ ಅನುಸರಿಸಿ ಭಕ್ತಿ ಯ ಭಂಡಾರ ಹರಿಸಿದ್ದಾನೆ

ಈ ಬಾಲಕನ ತಂದೆ ,ಶಿವುಗೌಡ ಪಾಟೀಲ ಪಂಚಮಸಾಲಿ ಸಮಾಜದ ಹುಕ್ಕೇರಿ ತಾಲ್ಲೂಕಾ ಅಧ್ಯಕ್ಷರಾಗಿದ್ದು ತಾಯಿ ಶಿಕ್ಷಕಿಯಾಗಿದ್ದಾರೆ…

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *