ಕಚ್ಚಿದ ಹಾವು ಹಿಡಿದುಕೊಂಡೇ ದವಾಖಾನೆಗೆ ಬಂದ ಖಿಲಾಡಿ…!!

ಬೆಳಗಾವಿ- ಮನೆಯ ಹತ್ತಿರ ಹಾವು ಬಂದಿದೆ.ಅದನ್ನು ಹಿಡಿದುಕೊಂಡು ಊರ ಹೊರಗೆ ಬಿಡಲು ಹೋಗಿದ್ದಾನೆ ಹಾವು ಬಿಡುವಾಗ ಆತನಿಗೆ ಹಾವು ಕಚ್ಚಿದೆ‌. ನಂತರ ಮತ್ತೆ ಕಚ್ಚಿದ ಹಾವು ಹಿಡಿದುಕೊಂಡು ನೇರವಾಗಿ ದವಾಖಾನೆಗೆ ಬಂದು ದವಾಖಾನೆಯಲ್ಲಿ ಇದ್ದವರು ಹಾವು ನೋಡಿ ಬೆಚ್ಚಿ ಬೀಳುವಂತೆ ಮಾಡಿದ ಖಿಲಾಡಿ, ನಂತರ ಡಾಕ್ಟರ್ ಗೆ ಭೇಟಿಯಾಗದೇ ದವಾಖಾನೆಯಿಂದ ಜಾಗ ಖಾಲಿ ಮಾಡಿದ ಘಟನೆ ನಿನ್ನೆ ಸಂಜೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದಿದೆ.

ಹಿಡಿದ ಹಾವು ಊರ ಹೊರಗೆ ಬಿಡುವಾಗ ಕಚ್ಚಿದೆ. ಅದು ಯಾವ ಹಾವು,ಅದರಲ್ಲಿ ಎಷ್ಟು ವಿಷ ಇರುತ್ತದೆ.ಅದು ಕಚ್ಚಿದ ಬಳಿಕ ಎಷ್ಟು ವಿಷ ಬಿಡುತ್ತದೆ ಅಂತಾ ಡಾಕ್ಟರ್ ಗೆ ತೋರಿಸಲು ಹಾವು ಹಿಡಿದ ಖಿಲಾಡಿ ಹಾವಿನ ಸಮೇತ ಆಸ್ಪತ್ರೆಗೆ ಬಂದಿದ್ದ ಇದನ್ನು ನೋಡಿದ ಜನ ಕಕ್ಕಾಬಿಕ್ಕಿಯಾದ್ರು ಜನ ಮೋಬೈಲ್ ನಲ್ಲಿ ಶೂಟ್ ಮಾಡುವದನ್ನು ನೋಡಿದ ಆ ಖಿಲಾಡಿ ಡಾಕ್ಟರ್ ಗೆ ತೋರಿಸದೇ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ

ಬೆಳಗಾವಿ ಪಕ್ಕದ ಹುಂಚ್ಯಾನಟ್ಟಿ ಗ್ರಾಮದ ಶಾಹೀದ್ ಎಂಬಾತನೇ ಇಷ್ಟೆಲ್ಲ ರಾದ್ಧಾಂತ ಮಾಡಿದ ಖಿಲಾಡಿ.ಆತನ ಮನೆಯ ಅಂಗಳದಲ್ಲಿ ಕಾಣಿಸಿದ ಹಾವು ಶಾಹೀದ್ ಹಿಡಿದಿದ್ದ ನಂತರ ಅದನ್ನು ಊರ ಹೊರಗೆ ಬಿಡಲು ಹೋದಾಗ ಅದೇ ಹಾವು ಶಾಹೀದ್ ಗೆ ಕಚ್ಚಿತ್ತು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *