Breaking News

ಕಚ್ಚಿದ ಹಾವು ಹಿಡಿದುಕೊಂಡೇ ದವಾಖಾನೆಗೆ ಬಂದ ಖಿಲಾಡಿ…!!

ಬೆಳಗಾವಿ- ಮನೆಯ ಹತ್ತಿರ ಹಾವು ಬಂದಿದೆ.ಅದನ್ನು ಹಿಡಿದುಕೊಂಡು ಊರ ಹೊರಗೆ ಬಿಡಲು ಹೋಗಿದ್ದಾನೆ ಹಾವು ಬಿಡುವಾಗ ಆತನಿಗೆ ಹಾವು ಕಚ್ಚಿದೆ‌. ನಂತರ ಮತ್ತೆ ಕಚ್ಚಿದ ಹಾವು ಹಿಡಿದುಕೊಂಡು ನೇರವಾಗಿ ದವಾಖಾನೆಗೆ ಬಂದು ದವಾಖಾನೆಯಲ್ಲಿ ಇದ್ದವರು ಹಾವು ನೋಡಿ ಬೆಚ್ಚಿ ಬೀಳುವಂತೆ ಮಾಡಿದ ಖಿಲಾಡಿ, ನಂತರ ಡಾಕ್ಟರ್ ಗೆ ಭೇಟಿಯಾಗದೇ ದವಾಖಾನೆಯಿಂದ ಜಾಗ ಖಾಲಿ ಮಾಡಿದ ಘಟನೆ ನಿನ್ನೆ ಸಂಜೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದಿದೆ.

ಹಿಡಿದ ಹಾವು ಊರ ಹೊರಗೆ ಬಿಡುವಾಗ ಕಚ್ಚಿದೆ. ಅದು ಯಾವ ಹಾವು,ಅದರಲ್ಲಿ ಎಷ್ಟು ವಿಷ ಇರುತ್ತದೆ.ಅದು ಕಚ್ಚಿದ ಬಳಿಕ ಎಷ್ಟು ವಿಷ ಬಿಡುತ್ತದೆ ಅಂತಾ ಡಾಕ್ಟರ್ ಗೆ ತೋರಿಸಲು ಹಾವು ಹಿಡಿದ ಖಿಲಾಡಿ ಹಾವಿನ ಸಮೇತ ಆಸ್ಪತ್ರೆಗೆ ಬಂದಿದ್ದ ಇದನ್ನು ನೋಡಿದ ಜನ ಕಕ್ಕಾಬಿಕ್ಕಿಯಾದ್ರು ಜನ ಮೋಬೈಲ್ ನಲ್ಲಿ ಶೂಟ್ ಮಾಡುವದನ್ನು ನೋಡಿದ ಆ ಖಿಲಾಡಿ ಡಾಕ್ಟರ್ ಗೆ ತೋರಿಸದೇ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ

ಬೆಳಗಾವಿ ಪಕ್ಕದ ಹುಂಚ್ಯಾನಟ್ಟಿ ಗ್ರಾಮದ ಶಾಹೀದ್ ಎಂಬಾತನೇ ಇಷ್ಟೆಲ್ಲ ರಾದ್ಧಾಂತ ಮಾಡಿದ ಖಿಲಾಡಿ.ಆತನ ಮನೆಯ ಅಂಗಳದಲ್ಲಿ ಕಾಣಿಸಿದ ಹಾವು ಶಾಹೀದ್ ಹಿಡಿದಿದ್ದ ನಂತರ ಅದನ್ನು ಊರ ಹೊರಗೆ ಬಿಡಲು ಹೋದಾಗ ಅದೇ ಹಾವು ಶಾಹೀದ್ ಗೆ ಕಚ್ಚಿತ್ತು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *