Breaking News
Home / Breaking News / ರಾಹುಲ್ ಗಾಂಧಿಗೆ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ….!!!!

ರಾಹುಲ್ ಗಾಂಧಿಗೆ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ….!!!!

ರಾಹುಲ್ ಗಾಂಧಿಗೆ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ……

ಬೆಳಗಾವಿ- ಕಾಂಗ್ರೆಸ್ ಯುವರಾಜ ಸೋಮವಾರ ಸವದತ್ತಿಯ ಯಲ್ಲಮ್ಮ ದೇವಿಯ ದರ್ಶನ ಪಡೆದರು ರಾಹುಲ್ ಗಾಂಧೀ ಅವರಿಗೆ ದೇವಿಯ ದರ್ಶನ ಮಾಡಿಸಿದ್ದು ಯಡಿಯೂರಪ್ಪ ಅನ್ನೋದು ವಿಶೇಷ

ಅದುಹೇಗೆ ಅಂತೀರಾ ಯಡಿಯೂರಪ್ಪ ರಾಹುಲ್ ಗಾಂಧೀ ಅವರನ್ನು ದೇವಿಯ ದರ್ಶನ ಮಾಡಿಸುವದು ಹೇಗೆ ಸಾಧ್ಯ ಅಂತೀರಾ ಹೌದು ಯುವರಾಜ ರಾಹುಲ್ ಗಾಂಧೀ ಅವರಿಗೆ ದೇವಿಯ ದರ್ಶನ ಮಾಡಿಸಿದ್ದು ಯಡಿಯೂರಪ್ಪ ಇದು ನೂರಕ್ಕೆ ನೂರು ಸತ್ಯ ಅದು ಹೇಗಂತೀರಾ ?

ರಾಹುಲ್ ಗಾಂಧೀ ಅವರಿಗೆ ದೇವಿ ಯಲ್ಲಮ್ಮನ ದರ್ಶನ ಮಾಡಿಸಿ ಪ್ರಸಾದ ನೀಡಿದ ಪ್ರಧಾನ ಅರ್ಚಕನ ಹೆಸರು ಯಡಿಯೂರಪ್ಪ …

ಯಲ್ಲಮ್ಮ ದೇವಸ್ಥಾನಕ್ಕೆ ರಾಹುಲ್ ಗಾಂಧೀ ಬರುವ ಎರಡು ತಾಸು ಮೊದಲು ಎಸ್ಪಿಜಿ ಸೆಕ್ಯುರಿಟಿ ದೇವಸ್ಥಾನವನ್ನು ಸುತ್ತುವರೆದು ಬಿಗಿ ಭದ್ರತೆ ನೀಡಿದ್ದರು

ರಾಹುಲ್ ಗಾಂಧೀ ಅವರು ದೇವಿಯ ದರ್ಶನ ಪಡೆಯುವ ಹಿನ್ನಲೆಯಲ್ಲಿ ಎರಡು ಘಂಟೆಗಳ ವರೆಗೆ ಭಕ್ತರಿಗೆ ದೇವಿಯ ದರ್ಶನ ತಡೆಯಲಾಗಿತ್ತು ಹೀಗಾಗಿ ಸಾವಿರಾರು ಜನ ಭಕ್ತರು ಮೊದಲು ರಾಹುಲ್ ದರ್ಶನ ಪಡೆದು ನಂತರ ದೇವಿಯ ದರ್ಶನ ಪಡೆಯಬೇಕಾಯಿತು

ಸವದತ್ತಿ ಯಲ್ಲಮ್ಮ ದೇವಸ್ಥಾನ ವ್ಯೆವಸ್ಥಾಪನಾ ಸಮೀತಿಯ ಅಧ್ಯಕ್ಷ ರಾಮನಗೌಡ ತಿಪರಾಶಿ ಆಡಳಿತಾಧಿಕಾರಿ ರವಿ ಕೋಟಾರಗಸ್ತಿ ಅವರು ರಾಹುಲ್ ಗಾಂಧೀ ಅವರಿಗೆ ಹೂಗುಚ್ಛ ನೀಡಿ ದೇವಸ್ಥಾನಕ್ಕೆ ಬರಮಾಡಿಕೊಂಡರು

ಪ್ರಧಾನ ಅರ್ಚಕ ಯಡಿಯೂರಪ್ಪ ಹಾಗು ಅರ್ಚಕ ಶಿವನಗೌಡ ಅವರು ದೇವಿಗೆ ವಿಶೇಷ ಪೂಜೆ ನೆರವೇರಿಸಿ ರಾಹುಲ್ ಗಾಂಧೀ ಅವರಿಗೆ ದೇವಿಯ ಪ್ರಸಾದ ನೀಡಲಾಯಿತು

ಮಂತ್ರಮುಗ್ಧರಾಗಿದ್ದ ರಾಹುಲ್ ಒಂದು ನಿಮಿಷ ದೇವಿಗೆ ಕೈ ಮುಗಿದು ದೇವಿಯ ದರ್ಶನ ಪಡೆದು ಪುನೀತರಾದರು

ಮುಖ್ಯಮಂತ್ರಿ ಸಿದ್ರಾಮಯ್ಯ ಡಾ ಜಿ ಪರಮೇಶ್ವರ,ಡಿಕೆ ಶಿವಕುಮಾರ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧೀ ಅವರ ಜೊತೆಗೆ ಯಲ್ಲಮ್ಮ ದೇವಿಯ ದರ್ಶನ ಪಡೆದರು

ಯಲ್ಗಮ ದೇವಸ್ಥಾನದ ಟ್ರಸ್ಟ ಕಮೀಟಿ ವತಿಯಿಂದ ರಾಹುಲ್ ಗಾಂಧೀ ಅವರಿಗೆ ಶಾಲು ಹೊದಿಸಿ ಸತ್ಕರಿಸಿ ಯಲ್ಲಮ್ಮ ದೇವಿಯ ಬೆಳ್ಳಿ ಮೂರ್ತಿಯನ್ನು ನೆಮಪಿನ ಕಾಣಿಕೆಯಾಗಿ ನೀಡಲಾಯಿತು

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *