ಬೆಳಗಾವಿ-ಕರ್ನಾಟಕದ ಜೀವ ನದಿಯಾಗಿರುವ ಕಾವೇರಿಯಿಂದ ತಮಿಳನಾಡಿಗೆ ನೀರು ಬಿಡುವಂತೆ ಮಾನ್ಯ ಸುಪ್ರೀಂ ಕೋರ್ಟ ಆದೇಶ ನಿಡಿರುವದನ್ನು ಖಂಡಿಸಿ ಈ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ ಮಾಡುತ್ತಿದೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ನೂರಾರು ಕನ್ನಡದ ಕಾರ್ಯಕರ್ತರು ಚನ್ನಮ್ಮಾ ವೃತ್ತದಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು
ಕಾವೇರಿ ಮಹಾದಾಯಿ ರಾಜ್ಯದ ಎರಡು ಕಣ್ಣುಗಳು ವಿಷಯದಲ್ಲಿ ಸರ್ಕಾರ ಹೆಚ್ಚನ ಕಾಳಜಿ ವಹಿಸಿ ಕಾನೂನಾತ್ಮಕ ಹೋರಾಟ ಮಾಡಬೇಕು.ರಾಜ್ಯದಲ್ಲಿ ಬರಗಾಲವಿದ್ದು ಜಲಾಶಯಗಳು ಖಾಲಿ ಇವೆ ಅನ್ನೋದನ್ನು ಮಾನ್ಯ ಸುಪ್ರೀಂ ಕೋರ್ಟಿಗೆ ಮನವರಿಕೆ ಆಗುವ ರೀತಿಯಲ್ಲಿ ವಾದ ಮಂಡಿಸುವಂತೆ ಹೋರಾಟಗಾರರು ಒತ್ತಾಯಿಸಿದರು
ಕಾವೇರಿ ವಿಷಯದಲ್ಲಿ ರಾಜ್ಯದ ಜನರಿಗೆ ಅನ್ಯಾಯವಾಗಿದ್ದು ರಾಜ್ಯದ ಜನ ಊತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಎಂದು ಭೇಧ ಮರೆತು ನ್ಯಾಯ ಸಿಗೋವರೆಗೆ ಹೋರಾಟ ಮಾಡಬೇಕು ಅದಕ್ಕಾಗಿ ಅಖಂಡ ಕರ್ನಾಟಕ ಹೋರಾಟದಲ್ಲಿ ಧುಮುಕಬೇಕು ಎಂದು ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ
ಸುಮೀತ ಗಿರೆಪ್ಪಗೌಡರ.ರಮೇಶ ಯರಗಣ್ಣವರ ವಿನಾಯಕ ಬೋವಿ,ಸತೀಶ ಗಾಡಿವಡ್ಡÀರ. ಸಂಪತ್ ಸಕ್ರೆಣ್ಣವರ. ಶರೀಧರ ತಳವಾರ. ದರ್ಶನ ಧಾರವಾಡ ಮೊದಲಾದವರು ಉಪಸ್ಥಿತರಿದ್ದರು
Check Also
ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಬೆಂಬಲ…!
ಚಿಕ್ಕೋಡಿ- ಚಿಕ್ಕೋಡಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ NCP ಅಭ್ಯರ್ಥಿ ಉತ್ತಮ್ …