Breaking News
Home / Breaking News / ಬೆಳಗಾವಿ ಬಿಜೆಪಿ ಗುಂಪುಗಾರಿಕೆ ಯಡಿಯೂರಪ್ಪ ಗರಂ..

ಬೆಳಗಾವಿ ಬಿಜೆಪಿ ಗುಂಪುಗಾರಿಕೆ ಯಡಿಯೂರಪ್ಪ ಗರಂ..

ಬೆಳಗಾವಿ-ಬೆಳಗಾವಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದಲ್ಲಿ ಟಿಕೆಟ್ ಗಾಗಿ ನಡೆಯುತ್ತಿರುವ ಬಿಜೆಪಿ ಗುಂಪುಗಾರಿಕೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಕ್ರೋಶ ವ್ಯೆಕ್ತಪಡಿಸಿದ್ದಾರೆ

ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರ ಜೊತೆ ಬೆಳಗಾವಿ ಬಿಜೆಪಿ ಉಸ್ತುವಾರಿ ಮುರಳಿಧರ ರಾವ ಉಪಸ್ಥಿತಿಯಲ್ಲಿ ಸಭೆ ನಡೆಸಿದ ಯಡಿಯೂರಪ್ಪ ಟಿಕೆಟ್ ಯಾರಿಗೆ ಕೊಡ್ತೇವಿ ಅಂತ ನಾವು ಯಾರಿಗೂ ಹೇಳಿಲ್ಲ ಯಾರೊಬ್ಬರಿಗೂ ಟಿಕೆಟ್ ಖಾತ್ರಿ ಪಡಿಸಿಲ್ಲ ಟಿಕೆಟ್ ನನಗೇ ಸಿಗುತ್ತದೆ ಎಂದು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯಬೇಡಿ ಜನರ ಬಳಿ ಹೋಗಿ ಕೆಲಸ ಮಾಡಿ ಎಂದು ಯಡಿಯೂರಪ್ಪ ಬೆಳಗಾವಿ ಬಿಜೆಪಿ ನಾಯಕರಿಗೆ ಮತ್ತು ಆಕಾಂಕ್ಷಿಗಳಿಗೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ
ಬಿಜೆಪಿ ಯಾವಾಗಲೂ ವ್ಯೆಕ್ತಿ ನಿಷ್ಠೆಯನ್ನು ಸಹಿಸುವದಿಲ್ಲ ಇಲ್ಲಿ ಪಕ್ಷ ನಿಷ್ಠೆ ಮುಖ್ಯವಾಗಿದ್ದು ಗುಂಪುಗಾರಿಕೆ ಮಾಡುವದನ್ನು ಬಿಟ್ಟು ಜನರ ಬಳಿ ತೆರಳಿ ಜನರ ಸಮಸ್ಯೆ ಆಲಿಸಿ ಅದರ ಪರಿಹಾರಕ್ಕೆ ಹೋರಾಡಿ ನಿಮ್ಮ ಪರಫಾರ್ಮೆನ್ಸ ಚನ್ನಾಗಿದ್ದರೆ ಟಿಕೆಟ್ ನಿಮ್ಮ ಮನೆಗೆ ಬರುತ್ತದೆ ಟಿಕೆಟ್ ಯಾರಿಗೆ ಕೊಡಬೇಕು ಅನ್ನೋದನ್ನು ಕೇಂದ್ರದ ನಾಯಕರೇ ಸರ್ವೇ ಮಾಡಿ ತೀರ್ಮಾಣ ಕೈಗೊಳ್ಳುತ್ತಾರೆ ಎಂದು ಬೆಳಗಾವಿ ಬಿಜೆಪಿ ನಾಯಕರಿಗೆ ಮತ್ತು ಆಕಾಂಕ್ಷಿಗಳಿಗೆ ಯಡಿಯೂರಪ್ಪ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ
ಇಂದು ಸಂಜೆ ರಾಜ್ಯ ಬಿಜೆಪಿ ಉಸ್ತುವಾರಿ ಜಾವಡೇಕರ ಅವರು ಬೆಂಗಳೂರಿಗೆ ಬರುತ್ತಿದ್ದು ರಾಜ್ಯ ಬಿಜೆಪಿ ಕೋರ್ ಕಮೀಟಿಯ ಸಭೆ ನಡೆಯಲಿದೆ
ಬಿಜೆಪಿ ಪಕ್ಷ ನಿನ್ನೆಯಿಂದಲೇ ಚುನಾವಣಾ ತಯಾರಿಯನ್ನು ಶುರು ಮಾಡಿದ್ದು ಬೆಂಗಳೂರಿನಲ್ಲಿ ಸರಣಿ ಸಭೆಗಳು ನಡೆಯುತ್ತಿವೆ
ಮಂಗಳೂರು ಚಲೋ ಬೈಕ್ ರ್ಯಾಲಿ ಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಬೈಕ್ ಗಳು ಮಂಗಳೂರಿಗೆ ಹೋಗಲಿದ್ದು ಮಂಗಳೂರಿನಲ್ಲಿ ನಡೆಯುವ ಬೈಕ್ ರ್ಯಾಲಿಯ ಸಮಾವೇಶದ ಜವಾಬ್ದಾರಿಯನ್ನು ಬೆಳಗಾವಿಯ ಯುವ ಬಿಜೆಪಿ ಮುಖಂಡ ರಾಜು ಜಿಕ್ಕನಗೌಡರ ಅವರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ

Check Also

ದ ಮೇಕರ್ ಆಫ್ ನ್ಯೂ ಇಂಡಿಯಾ ಪುಸ್ತಕ ರೆಡಿ ಮಾಡಿದವರು ಯಾರು ಗೊತ್ತಾ..??

ಪ್ರಾಮಿಸ್ಡ್ ನೇಷನ್’ ಪ್ರಧಾನಿಗೆ ಅರ್ಪಣೆ * ಹುಬ್ಬಳ್ಳಿಯ ‘ಸೆನ್ಸ್ ಎಸೆನ್ಸ್’ ಸಂಸ್ಥೆಯಿಂದ ಅಂಧರಿಗಾಗಿ ಸಿದ್ಧಪಡಿಸಿದ ಪುಸ್ತಕ ಬೆಂಗಳೂರು ದೇಶದ ಏಳು …

Leave a Reply

Your email address will not be published. Required fields are marked *