Breaking News
Home / Breaking News / ಗೊಡಚಿ ವೀರಭದ್ರೇಶ್ವರ,ಸವದತ್ತಿ ಯಲ್ಲಮ್ಮ ದೇವಿಯ ಆಶಿರ್ವಾದ ಪಡೆಯಲಿರುವ ರಾಹುಲ್ ಗಾಂಧೀ

ಗೊಡಚಿ ವೀರಭದ್ರೇಶ್ವರ,ಸವದತ್ತಿ ಯಲ್ಲಮ್ಮ ದೇವಿಯ ಆಶಿರ್ವಾದ ಪಡೆಯಲಿರುವ ರಾಹುಲ್ ಗಾಂಧೀ

ಬೆಳಗಾವಿ- ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧೀ ಫೆಬ್ರುವರಿ 24 ರಿಂದ ಮುಂಬೈ ಕರ್ನಾಟಕ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳಲಿದ್ದು 26 ರಂದು ಬೆಳಿಗ್ಗೆ 11-00 ಘಂಟೆಗೆ ಗೊಡಚಿಯಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಗೊಡಚಿ ವೀರಭದ್ರೇಶ್ವರನ ದರ್ಶನ ಮಾಡಿ ಆಶಿರ್ವಾದ ಪಡೆಯಲಿದ್ದಾರೆ

ಫೆಬ್ರುವರಿ 26 ರಂದು ಮಧ್ಯಾಹ್ನ 1-00 ಘಂಟೆಗೆ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡುವ ರಾಹುಲ್ ಗಾಂಧೀ ಯಲ್ಲಮ್ಮನ ಆಶಿರ್ವಾದ ಪಡೆಯಲಿದ್ದಾರೆ

24 ರಂದು ಬೆಳಿಗ್ಗೆ 10 ಘಂಟೆಗೆ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಬರುವ ರಾಹುಲ್ ಗಾಂಧೀ ಹೆಲಿಕಾಪ್ಟರ್ ಮೂಲಕ ಅಥಣಿಗೆ ತೆರಳಲಿದ್ದಾರೆ ಈ ಕಾರ್ಯಕ್ರಮ ಮುಗಿದ ಬಳಿಕ ತಿಕೋಟಾದಲ್ಲಿ ನಡೆಯುವ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ 25 ರಂದು ಬಾಗಲಕೋಟೆ ವಿಜಯಪುರ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ರಾಹುಲ್ ಗಾಂಧೀ 26 ರಂದು ಮರಳಿ ಬೆಳಗಾವಿ ಜಿಲ್ಲೆಗೆ ಆಗಮಿಸಿ ಗೊಡಚಿ ವೀರಭದ್ರೇಶ್ವರ ಹಾಗೂ ಯಲ್ಲಮ್ಮ ದೇವಿಯ ಆಶಿರ್ವಾದ ಪಡೆಯಲಿದ್ದಾರೆ

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *