Breaking News

ಇಬ್ಬರ ಮೃತದೇಹಗಳು ಬೆಳಗಾವಿಗೆ ಇನ್ನಿಬ್ಬರ ಮೃತದೇಹಗಳು ಗೋವಾಕ್ಕೆ

ಬೆಳಗಾವಿ – ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟಿರುವ ಬೆಳಗಾವಿಯ ನಾಲ್ಕು ಜನ ಯಾತ್ರಾರ್ಥಿಗಳ ಮೃತದೇಹಗಳು ಬೆಳಗಾವಿಗೆ ರವಾನೆಯಾಗಿವೆ.

ಬೆಳಗಾವಿಯ ಅರುಣ ಗೋರ್ಪಡ್ (61), ಮಹಾದೇವಿ ಬಾವನೂರ ( 48) ಇಬ್ಬರ ಮೃತದೇಹಗಳು ಸಂಜೆ ಐದು ಗಂಟೆಗೆ ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ಧಾಣಕ್ಕೆ ತಲುಪಲಿವೆ.

ಮೇಘಾ ಹತ್ತವರವಾಠ್ ( 24), ಜ್ಯೋತಿ ಹತ್ತರವಠ ( 44) ತಾಯಿ ಮತ್ತು ಮಗಳು ಮೃತಪಟ್ಟಿದ್ದು ಇವರಿಬ್ಬರ ಮೃತದೇಹಗಳು ದೆಹಲಿಯಿಂದ ಗೋವಾಕ್ಕೆ ತಲುಪಿ ಗೋವಾದಿಂದ ಬೆಳಗಾವಿಗೆ ತಲುಪಲಿವೆ ಎನ್ನುವ ಮಾಹಿತಿ ಬೆಳಗಾವಿ ಸುದ್ದಿಡಾಟ್ ಕಾಮ್ ಗೆ ಸಿಕ್ಕಿದೆ.

ದೆಹಲಿ – ಬೆಳಗಾವಿ ಇಂಡಿಗೋ ವಿಮಾನದಲ್ಲಿ ಜಾಗದ ಕೊರತೆ ಇರುವದರಿಂದ ಇಬ್ಬರ ಮೃತದೇಹಗಳನ್ನು ದೆಹಲಿಯಿಂದ ಗೋವಾಕ್ಕೆ ಸಂಜೆ 6-00 ಗಂಟೆಗೆ ಕಳುಹಿಸಲಾಗುತ್ತಿದೆ ಸುಮಾರ 8 ಗಂಟೆ ಹೊತ್ತಿಗೆ ಮೇಘಾ ಮತ್ತು ಜ್ಯೋತಿ ಇಬ್ಬರ ಮೃತದೇಹಗಳು ಗೋವಾಕ್ಕೆ ತಲುಪಿ ಮದ್ಯರಾತ್ರಿ ಬೆಳಗಾವಿಗೆ ತಲುಪುವ ಸಾಧ್ಯತೆ ಇದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *