Breaking News
Home / Uncategorized / ಕಾಣೆಯಾಗಿದ್ದ ಬೆಳಗಾವಿ ಬಾಲಕನ ಶವ ಕಿಲ್ಲಾ ಕೆರೆಯಲ್ಲಿ ಪತ್ತೆ

ಕಾಣೆಯಾಗಿದ್ದ ಬೆಳಗಾವಿ ಬಾಲಕನ ಶವ ಕಿಲ್ಲಾ ಕೆರೆಯಲ್ಲಿ ಪತ್ತೆ

ಕಾಣೆಯಾಗಿದ್ದ ಬಾಲಕನ ಶವ ಕಿಲ್ಲಾ ಕೆರೆಯಲ್ಲಿ ಪತ್ತೆ

ಬೆಳಗಾವಿ- ನಿನ್ನೆ ಕಾಣೆಯಾಗಿದ್ದ ಬೆಳಗಾವಿಯ ವೀರಭದ್ರ ನಗರದ 13 ವರ್ಷದ ಬಾಲಕನ ಶವ ಇಂದು ಬೆಳಿಗ್ಗೆ ಕಿಲ್ಲಾ ಕೆರೆಯಲ್ಲಿ ಪತ್ತೆಯಾಗಿದೆ.

ವೀರಭದ್ರ ನಗರದ ನಿವಾಸಿ 13 ವರ್ಷದ ವಾಹೀದ ,ರಪೀಕ ಅಹ್ಮದ ಲಕ್ಕುಂಡಿ ನಿನ್ನೆಯಿಂದ ನಾಪತ್ತೆಯಾಗಿದ್ದ ಈ ಕುರಿತು ಬಾಲಕನ ಪೋಷಕರು ಪೋಲೀಸರಿಗೆ ದೂರು ನೀಡಿದ್ದರು ಆದರೆ ಇಂದು ಬೆಳಗಿನ ಜಾವ ಬಾಲಕನ ಶವ ಕಿಲ್ಲಾ ಕೆರೆಯಲ್ಲಿ ಪತ್ತೆಯಾಗಿದೆ.

ಕಿಲ್ಲಾ ಕೆರೆಯ ಬಳಿ ಮೃತ ಬಾಲಕನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು

ಮಾರ್ಕೆಟ್ ಠಾಣೆಯ ಪೋಲೀಸರು ಸ್ಥಳಕ್ಕೆ ಧಾವಿಸಿದ್ದು ಘಟನೆಗೆ ಕಾರಣವೇನು ಇನ್ನುವರೆಗೆ ತಿಳಿದು ಬಂದಿಲ್ಲ

ವೀರಭದ್ರನಗರದ ಆರನೇಯ ಕ್ರಾಸಿನ ನಿವಾಸಿಯಾದ ವಾಹೀದ ಲಕ್ಕುಂಡಿ ಕಾಣೆಯಾದ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆ ವೈರಲ್ ಆಗಿತ್ತು ಇಂದು ಬೆಳಿಗ್ಗೆ ಬಾಲಕನ ಸಾವಿನ ಸುದ್ಧಿ ತಿಳಿಯುತ್ತಿದ್ದಂತೆಯೇ ವೀರಭದ್ರ ನಗರದಲ್ಲಿ ಸೂತಕದ ಛಾಯೆ ಆವರಿಸಿದೆ.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *