Breaking News
Home / Breaking News / ರಾಜಪ್ಪನವರು ಬರೀತಾರೆ,ಪೋಲೀಸ್ ಲಹರಿ….!

ರಾಜಪ್ಪನವರು ಬರೀತಾರೆ,ಪೋಲೀಸ್ ಲಹರಿ….!

ಬೆಳಗಾವಿ -ಕರ್ನಾಟಕ ರಾಜ್ಯ ಪೊಲೀಸ್ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಿವೃತ್ತ ಡಿಐಜಿಪಿ ಡಾ.ಡಿ.ಸಿ.ರಾಜಪ್ಪ ಅವರ ಸಂಪಾದಕತ್ವದಲ್ಲಿ ಪೊಲೀಸ್ ಲಹರಿ ಮಾಸಪತ್ರಿಕೆ ಬಿಡುಗಡೆ ಸಮಾರಂಭ ನ.4 ರಂದು ಬೆಂಗಳೂರಿನ ಸೀನಿಯರ್ ಪೊಲೀಸ್ ಆಫೀರ‍್ಸ್ ಮೆಸ್‌ನ ಸಭಾಂಗಣದಲ್ಲಿ ಜರುಗಲಿದೆ.
ಪೊಲೀಸ್ ಲಹರಿ ಮಾಸಪತ್ರಿಕೆಯ ಬಿಡುಗಡೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರದ ಪೊಲೀಸ್ ಆಯುಕ್ತ ಕಮಲ್ ಪಂಥ್ ಆಗಮಿಸಲಿದ್ದಾರೆ. ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಆಶಯನುಡಿಗಳನ್ನು ಆಡಲಿದ್ದಾರೆ. ಪ್ರಾಸ್ತಾವಿಕವಾಗಿ ನಿವೃತ್ತ ಡಿಐಜಿಪಿ ಮತ್ತು ಪೊಲೀಸ್ ಲಹರಿ ಸಂಪಾದಕ ಡಾ. ಡಿ.ಸಿ.ರಾಜಪ್ಪ ಮಾತನಾಡಲಿದ್ದಾರೆ. ಸಂಪಾದಕೀಯ ಪರವಾಗಿ ಜಿ.ಎ.ಜಗದೀಶ, ಗಿರೀಶ್ ತಾಳಿಕಟ್ಟೆ, ಬಿ.ಎಸ್.ಚನ್ನಬಸಪ್ಪ, ಎಸ್.ಸತೀಶ್ ಸ್ವಾಗತ ಕೊರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *